Tuesday, December 9, 2014

ಏಕಾಂತ

ಮರದ ಕೆಳಗೆ ಏಕಾಂತ ,ಒಂಟಿತನದ ಭಾವ
ದೂರದಲ್ಲಿ ಹಾರಿಬರುವ ಕಪ್ಪು ಮೋಡಗಳ ನೋಟ
ಅಳುಕುವ ಮನ,ರೋಧಿಸುವ ಭಾವ
ಏನನ್ನೋ ಕಳೆದುಕೊಂಡ ಶೂನ್ಯಭಾವ-ವೈರಾಗ್ಯವೆನ್ನಲೇ?
ಕತ್ತುಹಿಸುಕುವ ಚಳಿ
ಬೆಚ್ಚಿಬೀಳಿಸುವ ಗುಡುಗಿನ ಆರ್ಭಟ
ಕೊಚ್ಚಿಹೋಗುವ ಮಳೆಯಲ್ಲಿ ಸಿಲುಕಿದೆ ಜೀವ
ಸಾವು,ಬದುಕು ಮಗ್ಗುಲು ಮಲಗಿದೆ ಭರವಸೆ
ಕೊಚ್ಚಿ ಹೋಗಲಿ ನೋವುಗಳೆಲ್ಲಾ ಮಳೆಯ ನರ್ತನದಲ್ಲಿ
ಸೇರುವ ತವಕ ಹೆಚ್ಚಾಗಿದೆ ಹೊಸತನದ ಭಾವ ಅಳುಕುತ್ತಲೇ....

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...