Tuesday, December 9, 2014

ಏಕಾಂತ

ಮರದ ಕೆಳಗೆ ಏಕಾಂತ ,ಒಂಟಿತನದ ಭಾವ
ದೂರದಲ್ಲಿ ಹಾರಿಬರುವ ಕಪ್ಪು ಮೋಡಗಳ ನೋಟ
ಅಳುಕುವ ಮನ,ರೋಧಿಸುವ ಭಾವ
ಏನನ್ನೋ ಕಳೆದುಕೊಂಡ ಶೂನ್ಯಭಾವ-ವೈರಾಗ್ಯವೆನ್ನಲೇ?
ಕತ್ತುಹಿಸುಕುವ ಚಳಿ
ಬೆಚ್ಚಿಬೀಳಿಸುವ ಗುಡುಗಿನ ಆರ್ಭಟ
ಕೊಚ್ಚಿಹೋಗುವ ಮಳೆಯಲ್ಲಿ ಸಿಲುಕಿದೆ ಜೀವ
ಸಾವು,ಬದುಕು ಮಗ್ಗುಲು ಮಲಗಿದೆ ಭರವಸೆ
ಕೊಚ್ಚಿ ಹೋಗಲಿ ನೋವುಗಳೆಲ್ಲಾ ಮಳೆಯ ನರ್ತನದಲ್ಲಿ
ಸೇರುವ ತವಕ ಹೆಚ್ಚಾಗಿದೆ ಹೊಸತನದ ಭಾವ ಅಳುಕುತ್ತಲೇ....

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...