Tuesday, December 9, 2014

ಮನದ ತುಳಿತ

ತುಳಿತದ ಅನುಭವ ಪ್ರತಿದಿನ
ಮೇಲೇಳಲಾರದ ಚೈತನ್ಯ ಮುರುಟಿದೆ
"ಹೊರಟು ಹೋಗು" ಕೂಗಿಕೊಳ್ಳುವೆ ಕತ್ತಲೆಯ ಕೋಣೆಯೊಳಗೆ
ಕಾಣದ ಕತ್ತಲಲ್ಲಿ ಯಾರೋ ಕತ್ತು ಹಿಸುಕಿದ ಅನುಭವ
ಪಂಜರದ ಗಿಳಿಗೆ ರೆಕ್ಕೆ ಕತ್ತರಿಸಿದ ಹಾಗೆ
ಮೂಕ ರೋಧನ ಮನೆ ಮಾಡಿದೆ ಎದೆಯ ಗೂಡಿನೊಳಗೆ
ಯಾರು ಸಲಹುವರು ನನ್ನ?
ಯಾರು ಸಲಹುವರು ನನ್ನ?
ಮೂಕವೇಧನೆಗೆ ಸಾಂತ್ವನದ ಭ್ರಮೆ!
ಯಾರೋ ಹತ್ತಿರ ಬರುವರೆಂದು,ಸಲಹುವರೆಂದು....
ಮನದಲ್ಲಿ ಕಾಣದ ಭರವಸೆ ಎನ್ನಲೋ?
ಇಲ್ಲ ಕನವರಿಕೆ ಎನ್ನಲೋ?
ಕತ್ತಲ ನೆರಳನ್ನೇ ನಿಜವೆಂದು ಭ್ರಮಿಸಿದೆನೇನೋ?
ಬದುಕುವ ತುಡಿತ ಇದೆ,ಇನ್ನೂ ಇದೆ.....
ನೋವು ಸವೆಯುತ್ತಿದೆ ಕಾಲನ ಮಹಿಮೆಯಿಂದೆ
ಭಯವ ನೆನೆದರೆ ನೋವು ಅಪ್ಪುವುದು
ಹೋಗು ಹೋಗೆಂದರೂ ಬರಸೆಳೆವುದು ಇನ್ನೂ......

No comments:

Post a Comment

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...