Friday, February 25, 2011

|| ನಡೆದ ದಾರಿ||

ಕಣ್ಣ ಮುಂದೆ ಕಪ್ಪು ಕತ್ತಲು
ಮನದಲಿ ಸುಳಿದಿದೆ ಸಮಸ್ಯೆಗಳ ಸಾಲು ಸಾಲು
ಎದ್ದು ಹೊರಡಬೇಕು ನಾಳೆ
ಮೂಡಿಬರಲಿ ಆಶಾಕಿರಣದ ಹೊಂಬಿಸಿಲು\\

ಅದ್ಬುತ! , ಕತ್ತಲು ಕಳೆದಿದೆ
ಅಲ್ಲಿ ನೋಡು ಬಂಗಾರದ ಕಿರಣಗಳ ಬೆಳಕು
ಸಮಸ್ಯೆಗಳು ಕಳೇಯಬೇಕಿದೆ ಇಂದು
ನಾಳೆ ಬರಲಿ ಸಮಸ್ಯೆಗಳು ಸಾಧಿಸುವ ಛಲವಿದೆ\\

ಸಾಧನೆಯ ಮೆಟ್ಟಿಲುಗಳಿಗೆ ಕೊನೆಯೆಲ್ಲಿದೆ?
ಹಣ-ಪ್ರತಿಷ್ಟೆ ಬೇಕು ಬೇಕುಗಳಿಗೆ ಎಣೆಯೆಲ್ಲಿದೆ?
ನಡೆದು ಬಂದ ದಾರಿ ಮರೆತು ಹೋಗಿದೆ
ಸಂಬಂದಗಳು ಅರ್ಥಕಳೆದುಕೊಂಡು ಮೂಲೆಗುಂಪಾಗಿದೆ\\

"ಅಹಂ ಬ್ರಹ್ಮಾಸ್ಮಿ" ಒಂದೇ ಮಂತ್ರ
ಪ್ರಪಂಚ ಗೆಲ್ಲುವೆವೆಂದು ಹೊಸೆದಿರುವೆವು ತಂತ್ರ
ಮನದ ನಡುವೆ ಕಟ್ಟಿದ್ದೇವೆ ಬೇದಿಸಲಾಗದ ಕೋಟೆ
ಮನ-ಮನಗಳನ್ನು ಪ್ರೀತಿಯಿಂದ ಹಿಡಿಯಲಾಗದ ಬೇಟೆ\\

ನಾವೇ ಸೃಷ್ಟಿಸಿದ ಸಮಸ್ಯೆಗಳ ಸುಳಿಯಲ್ಲಿ ಹೊಡೆದಾಡುತ್ತಿದ್ದೇವೆ
ಏಕಾಂಗಿಯಾಗಿ ಭೇದಿಸುವೆವೆಂಬ ಛಲ ಮಣ್ಣಾಗಿಹೋಗಿದೆ
ನಾವೇ ಬೆಳೆಸಿದ ಸ್ವಾರ್ಥದ ಭೂತ ಕಣ್ಣಮುಂದೆ ರುದ್ರ ನರ್ತನಗೈಯುತ್ತಿದೆ
ಹುಟ್ಟು ಆಕಸ್ಮಿಕ ತಿಳಿದಿದೆಯಾದರೂ ಸಾವೇ ನಮ್ಮ ಬಾಳಪುಟದ ಪೂರ್ಣವಿರಾಮ ಗೊತ್ತಿದೆ\\

ಸಂಘರ್ಷದ ಬದುಕಿಗೆ
ಪೂರ್ಣವಿದಾಯ ಹೇಳಬೇಕಿದೆ
ಪ್ರಾಣಚಂಚು ಕಳೆದ ಮೇಲೆ ಬಿಟ್ಟು ಹೋಗುವುದಾದರೂ ಏನು?
ಕಳೆ ಕಳೆದುಕೊಂಡ ಶವ ಪ್ರೀತಿಪಾತ್ರರೂ-ಆಗದವರೂ ಭಾವಪರವಶ\\

ಎಲ್ಲರಿಗೂ ತಿಳಿದಿದೆ
ನಾವು ಸರತಿಯಲ್ಲಿ ನಿಂತೆದ್ದೇವೆಂದು
ಮುಂದೆ ಆಗುವೆವು ನಾವು ಕಳೆಬರ
ಕಣ್ಣೀರು ಹಾಕಬೇಡಿ ಸಾರ್ಥಕವಿಲ್ಲದ ಜೀವಕ್ಕೆ\\

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...