"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಕೂಗಿಟ್ಟರೈ ಕವಿ ಪುಂಗವ
ಬನ್ನಿ ಬನ್ನಿ ವಿಶ್ವಪಥಕ್ಕೆ
ಬನ್ನಿ ಬನ್ನಿ ಸರ್ವೋದಯದ ಪಂಥಾಹ್ವಾನಕ್ಕೆ
ಮೂಗು ಹಿಡಿದು ಮುಸ್ಸಂಜೆಯ ಸಂಧ್ಯಾವಂದನೆಗೈಯುತ್ತಿದ್ದ ಅನಂತು
ಕೂಗು ಕೇಳಿದೊಡನೆಯೇ ಎದ್ದು ನಿಂತ
ಅತ್ತಿತ್ತ ನೋಡಿದ- ಪಕ್ಕದಲ್ಲೇ ಅಪ್ಪ ಮೂಗುಹಿಡಿದು ಕೂತಿದ್ದ
ಚಂಗನೆ ಮಾಯವಾಗಿ ಓಡುತ್ತಾ ಜನಜಂಗುಳಿಯಲಿ ಒಂದಾದ
ನೆಗೆದ ಒತ್ತಡಕ್ಕೆ ಹಾರಿದ ಜನಿವಾರ ಗೇಟಿನ ತುದಿಗೆ ಸಿಕ್ಕಿಹಾಕಿಕೊಂಡಿತ್ತು
ಅದಾವುದರ ಗಮನವೊ ಅನಂತುಗೆ ಆಗಲಿಲ್ಲ
ಅನಂತುವಿನ ಅಪ್ಪ ಕಣ್ಣು ಮುಚ್ಚಿ ಕುಳಿತೇಯಿದ್ದ
ದಾರಿತೋರುವ ದಿಸೆಯಲ್ಲಿ ನಡೆದಿದೆ
ಹಾದಿಬದಿಯೆನ್ನದೆ ಸಾವಿರ ಜನ ಸಾಗರದಂತೆ
ಇರುವೆ ಸಾಲುಗಳೋ-ಕುರಿಯ ಮಂದೆಯೋ ಸಾಗಿತಿದೆ ವಿಷಯ ಗೊತ್ತಿಲ್ಲದೆ
ಕುತೂಹಲದಿಂದ ಜನ ಸೇರುತ್ತಿದ್ದಾರೆ
ಧೂಳು- ಗದ್ದಲ ಮುಗಿಲಿಗೇರುತ್ತಿದೆ
ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಜನರೋಜನ
ಅರಮನೆಯ ಜನಕ್ಕೂ ಕುತೂಹಲ
ಇದೇನು ಇಂದೇ ದಸರೆಯೇ?-ಪ್ರಶ್ನೆಯ ಛಾಯೆ ಮುಖಗಳಲ್ಲಿ
ಪೋಲಿಸಿನವರಿಗೆ ಬಲುಭಯ ಟಿಪ್ಪುವಿನ ಸೈನ್ಯ ಅರಮನೆಗೆ ಮುತ್ತಿಗೆಹಾಕುತ್ತಿದೆಯೇ?
ಚರ್ಚಿನ ಮುಂದೆ ಅದೇ ಸಂತ ಫಿಲೋಮಿನಾ ಮುಂದೆ ಜನಸಾಗರ
ಜನರ ಕೂಗು"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
"ಗಲಭೆ" ಎಂದುಕೊಂಡು ಚರ್ಚಿನ ಜನ ಕದವ ಮುಂದಿಕ್ಕಿದರು
ಕದದ ಮೇಲಿನ ಶಿಲುಬೇ ಅಣಕಿಸುತ್ತಿತ್ತು
"ನನ್ನವರು ಯಾರೂ ಬರರು- ಅವರೆಲ್ಲರೂ ಶಿಲುಬೆಗೆ ಶರಣರು"
"ವಿಶ್ವಪಥ- ಮನುಜ ಮತ ನಮಗೆ ಗೊತ್ತಿಲ್ಲ
ನಮಗೆ ಗೊತ್ತಿರುವುದು ಕ್ರಿಸ್ತ ಮತ-ಕ್ರಿಸ್ತ ಪಥ"
"ಬಂದ ದಾರಿಗೆ ಸುಂಕವಿಲ್ಲ ಮುಂದೆ ಹೋಗಿ
ಹಿಂದುಗಳಂತೆ ನಾವೆಂದೂ ಧರ್ಮ ಭ್ರಷ್ಟರಲ್ಲ ಇಲ್ಲಿಂದ ಕಾಲುತೆಗೆಯಿರಿ" ಎಂದು
ಜನರಿಗೆ ತಿಳಿಯಲ್ಲ ಅದರ ಕುಹಕ- ಅಲ್ಪಸಂಖ್ಯಾತರು- ಏನೆಂದರೂ ತಪ್ಪಿಲ್ಲ ಬಿಡಿ
ಜನರಿಗೆ ಎತ್ತ ಹೊರಟಿದೆ ಈ ಗುಂಪು
ತಿಳಿಯದಾಯಿತು- ಓ ಮರತೆ ನನ್ನ ಕೆಲಸ
ಮನೆಗೆ ಅಡುಗೆ ಸಾಮಾನು ತರಬೇಕಿತ್ತು
ಈ ಗೊಡವೆಯಲ್ಲಿ ಎಲ್ಲವೂ ಎಲ್ಲರಿಗೂ ತಮ್ಮ-ತಮ್ಮ ಕೆಲಸ ಮರೆತಿತ್ತು
ಆಕರ್ಷಣೆ ಕಡಿಮೆಯಾಯಿತು- ಗುಂಪು ಚದುರಿತು
ಇದ್ದವರು ಹತ್ತು-ಹಲವು ಮಂದಿ- ಮುಂದೆ ಹೋಯಿತು ಗುಂಪು
ಕೂಗು ನಿಂತಿರಲ್ಲಿಲ್ಲ"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಜನ ಹೋಗುವವರು ಹೆಚ್ಚು- ನಿಂತು ಮುನ್ನಡೆಯುವವರು ಹತ್ತು-ಇಪ್ಪತ್ತು
ಮುಂದೆ ಜಾಮೀಯಾ ಮಸೀದಿ
ಅಲ್ಲಿಂದಲಾದರೂ ಜನರು ಬರುವರೆಂಬ ಆಸೆ
ಘೋಷಣೆ ಕೂಗಿ ಒಳಗಿಂದ ಜನ ಬಂದು ಸೇರುವರೆಂದು
ಕೂಗು ಹಾಕುವ ಮುಂಚೆಯೇ ಮಸೀದಿಯಿಂದ ಹೊರಟಿತು
ಅಲ್ಲಾ..... ಅಲ್ಲಾಹು ಅಕ್ಬರ್...
ಮೈಕಾಸುರನ ದಾಳಿಗೆ ಮಂದಿ ನಲುಗಿತು
ಗುಂಪು ಮಾತ್ರ ಮುಂದೆ ಹೊರಟು ಹೋಯಿತು
ಇದ್ದವರು ಕೆಲವೇ ಕೆಲವರು
ವೆಂಕ-ಶೀನ- ಅನಂತು
ಹಿಂತಿರುಗಿ ನೋಡಿದರೆ ಸಾಗಿ ಬಂದ ದಾರಿ ಬಹಳ
ಮುಂದೆ ಮನುಜ ಪಥದ ದಾರಿ ಕಾಣದಾಗಿತ್ತು
ಹೋಗುವುದಾದರೂ ಎಲ್ಲಿಗೆ?
ಹೊಟ್ಟೆ ಚುರುಗುಟ್ಟುತುದೆ ಬೇರೆ!
ಬೇರೆ ದಾರಿ ಕಾಣುತ್ತಿಲ್ಲ- ಮರಳಿ ಗೂಡಿಗೆ ಪಯಣ
ಭುಜದಲ್ಲಿ ಜನಿವಾರ ಕಾಣಿಸಲಿಲ್ಲ ಅನಂತೂಗೆ
ಕಸಿವಿಗೊಳ್ಳುತ್ತಾ ಹೊರಟೇಬಿಟ್ಟ ಹುಡುಕಲು
ಸಿಗದಿದ್ದರೆ ಮೂರು ಎಳೆಯದಾರಕ್ಕೆ ಬರವೇನಿಲ್ಲವೆಂದುಕೊಂಡ
ಎದುರಿಸುರು ಬಿಡುತ್ತಾ ಓಡೋಡಿ ಬಂದ ಮನೆಗೆ
ಗೇಟಿನ ತುದಿಯೊಂದಕ್ಕೆ ಸಿಕ್ಕಿ ಹಾರಾಡುತ್ತಿದ್ದ ಜನಿವಾರವ ಕಂಡು ಸಂತೋಷಗೊಂಡ
ಮತ್ತೆ ಕೂಗಬೇಕೆನಿಸಿತು ಅನಂತೂಗೆ
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಅನಂತೂಗೆ ಅನಿಸಿತು
"ಗುಡಿಯ ಬಿಟ್ಟು ಹೋಗುವರುಂಟು
ಮಸೀದಿ-ಚರ್ಚುಗಳ ಬಿಟ್ಟು ಬಂದವರುಂಟೇ!"
ಎಲ್ಲವೂ ಸರಿ ನಾವೆಲ್ಲರೂ ಸರಿ
ಹಿಂದೂಗಳು ಮಾತ್ರ ವಿಚಿತ್ರ-ಗಾಳಿ ಬಂದಾಗ ತೂರಿಕೊಳ್ಳುವವರು
ತಮ್ಮ ತನವ ಕಳೆದುಕೊಳ್ಳುವವರು
ಹೊಟ್ಟೆಯ ಸುಖಕ್ಕೆ ಏನು ಬೇಕಾದರೂ ಮಾರಿಕೊಳ್ಳುವವರು
ಮತ್ತೆ ಕೊಗಬೇಕೆನಿಸಿತು
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಅಡುಗೆ ಮನೆಯ ದಾರಿ ಚೆನ್ನಾಗಿ ಕಾಣುತ್ತಿತ್ತು.
Friday, February 4, 2011
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment