Tuesday, February 22, 2011

|| ಯಾಂತ್ರಿಕ ಯುಗ||

ಇಲ್ಲಿ ಎಲ್ಲವೂ ಹತ್ತಿರ
ಎಲ್ಲಕ್ಕೂ ಬೇಗ ಸಿಗುತ್ತೆ ಉತ್ತರ\\

ಮಾಹಿತಿ ತಂತ್ರಜ್ನಾನದಿಂದಾಯಿತು ಕ್ರಾಂತಿ
ಜ್ಣಾನ-ವಿಜ್ಣಾನಗಳಿಂದ ಕಳೆಯುತಿದೆ ಭ್ರಾಂತಿ
ಇಂದು ನಾಳೆಗೆ ಕಡಿಮೆಯಾಗಿದೆ ಅಂತರ
ದೇಶ ದೇಶಗಳು ಕಾಣುತಿದೆ ಹತ್ತಿರ\\

ಹೆಚ್ಚಾಗಿದೆ ವೈಚಾರಿಕ ಸ್ವಾತಂತ್ರ
ಆದರಿಂದಲೇ ಜನರು ಅತಂತ್ರ
ಯಾವುದು ಸರಿ? ಯಾವುದು ತಪ್ಪು?
ವಿವೇಚಿಸದ ಮನ ಮಾಡಿದ್ದೆಲ್ಲವೂ ತಮಗೆ ಒಪ್ಪು!\\

ದೇಶ ಭಾಷೆ ಸಂಸ್ಕ್ರತಿಗಳು ಗೌಣ
ದುರಭಿಮಾನದ ಗುಂಪಿಗೆ ಹೆಚ್ಚೇ ಹಣ
ನೈತಿಕತೆಯಿಲ್ಲದ ನಡತೆ
ಜವಾಬ್ದಾರಿಯಿಲ್ಲದ ಜನತೆ\\

ಯುವ ಜನತೆಗೆ ಬೇಕು ಬೇಗ ಸುಖ
ಕಷ್ಟಪಡುವ ತಾಳ್ಮೆ ಬೇಕಿಲ್ಲ
ಕಷ್ಟ ಪಡುವುದಕ್ಕೆ ಅಡ್ಡದಾರಿಯಿಲ್ಲ
ವಾಮಮಾರ್ಗಕ್ಕೆ ಹತ್ತು ರಹದಾರಿಯಿದೆಯಲ್ಲ\\

ಮಧು ಗಂಟಲೊಳಗಿಳಿದರೆ ಸ್ವರ್ಗ ಮೂರೇ ಗೇಣು
ಇದುವೇ ಇಂದಿನ ಸತ್ಯ ಮಾಣು
ಸ್ವರ್ಗವೂ ಹತ್ತಿರ
ಸಾವು ಇನ್ನೂ ಹತ್ತಿರ\\

No comments:

Post a Comment

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...