ಸೋತ ಮನ

ಮನಸ್ಸು ತುಂಬಾ ನೊಂದಿದೆ
ದಾರಿ ಕಾಣದೆ ಚಡಪಡಿಸಿದೆ
ಕಾಣದ ಗುರಿಯತ್ತ ಕೈ ಚಾಚಿದೆ
ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ
ಸಮಾಧಾನದ ಮಾತಿನ ಅವಶ್ಯಕತೆಯಿದೆ
ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ
ಶಕ್ತಿ ಬತ್ತುವ ಮುನ್ನ
ಓ ಆಶಾಕಿರಣವೇ ಮನದಲ್ಲಿ ಬಾ....
ಅವಕಾಶದ ಹೆದ್ದಾರಿಯೇ ತೆರೆದುಕೋ ಬಾ...
ನನ್ನಲ್ಲಿ ಹೊಸ ಚೈತನ್ಯ ತುಂಬು ಬಾ...
ಬೇಗ ಬಾ ತಡಮಾಡದೆ....

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...