ಅಂದು ಭಾನುವಾರ!
ಸುಂದರ ಬೆಳಗು,
ಸೂರ್ಯನ ಚಿನ್ನದ ಕಿರಣಗಳು
ಜೀವಕೋಟಿಗೆ ಚೈತನ್ಯದ ಮೆರುಗು ಕೊಡುತ್ತಿದೆ ಸದ್ದಿಲ್ಲದೇ!
ಮನದಲ್ಲಿ ನೂರು ಯೋಚನೆಗಳು
ಸೂಚನೆ ನೀಡದೆ ದಾಳಿಮಾಡಿದೆ
ಮುದದಿ ಮನವು ಕಾಫಿಯ ಬಯಸಲು
ಕಾಲಿನ ಪಯಣ ಹೋಟಲಿನೆಡೆ ನಡೆಯಲು
ಹೆಣ್ಣೋರ್ವಳು ತನ್ನ ಕಂದನನ್ನು ಸಂತೈಸುತಿರಲು
ಕಂದನ ಕೈಗಳಿಗೆ ಹಾಕಿದ ಬ್ಯಾಂಡೆಜಿನೆಡೆಗೆ ನನ್ನ ಗಮನ ಮನವ ಘಾಸಿಗೊಳಿಸಿತು
'ಮಗುವಿನ ಬಲಗೈ ಹಸ್ತವೇ ಇಲ್ಲ' ಮುಂದೆ ಗತಿ ಏನು?
ಮನದಲ್ಲೆದ್ದ ಉತ್ತರ ಕಾಣದ ಪ್ರಶ್ನೆ!
ತಾಯಿಯ ಮುಖದಲ್ಲಿ ವ್ಯಥೆಯ ಛಾಯೆಯಿಲ್ಲ
ಜೀವನದ ದಡ ಮುಟ್ಟಿಸುವೆ ದಿಟ್ಟತನದ ಛಾಯೆಯಿತ್ತು
"ನಮಗೆ ಕೈಯಿದ್ದು ಸಾಧಿಸಿದ್ದೇನು?" ಎಂಬ ಪ್ರಶ್ನೆ ನನ್ನಲ್ಲಿ ಸಮಾಧಾನ ತಂದಿತ್ತು
Sunday, August 8, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment