ಇಂದಿನ ಆದರ್ಶ

ದಾರಿ ಬಿಡಿ,ದಾರಿ ಬಿಡಿ
ದೇಶವನ್ನಾಳುವವರು ಬಂದರು\
ಜಾಗ ಕೊಡಿ,ಜಾಗ ಕೊಡಿ
ಕುಳಿತು ಹಣವ ಸ್ವಾಹ ಮಾಡಲು\\

ನ್ಯಾಯ.ನೀತಿ,ಧರ್ಮಗಳೆಲ್ಲಾ
ಯಾವ ಮೊಲೆ ಸೇರಿದವೋ?\
ಮೋಸ,ಕುತಂತ್ರ,ಅನ್ಯಾಯಗಳೆಲ್ಲಾ
ಮೇಲ್ಪಂಕ್ತಿಗೆ ಬಂದು ಕುಳಿತಾವೋ!\\

ಮಾತಿಗೆ ಕಟ್ಟು ಬೀಳುವ ಕಾಲವು ಹೋಯಿತು
ನೀತಿ,ಧರ್ಮಗಳ ಪಾಲಿಸುವವರು ಯಾರು?\
ವಚನಭ್ರಷ್ಟತೆಯೇ ಇಂದಿನ ಆದರ್ಶ
ಅನೀತಿ,ಕುಟಿಲತೆಯೇ ಇಂದಿನವರ ಉಸಿರು\\

ರಾಮ-ಕೃಷ್ಣ, ಗಾಂಧಿ ಖಳನಾಯಕರಾದರೋ!
ಕುಡಿವ ಗಾಳಿ,ನೀರು,ಆಹಾರ ವಿಷವಾದವೋ!\
ದುರ್ಯೋದನ,ಕಂಸ,ರಾವಣರೇ ಇಂದಿನ ನಾಯಕರೋ!
ದ್ವೇಷ,ಲಂಚ,ಮೋಸ,ಸ್ವಾರ್ಥಗಳೇ ಅಸ್ತ್ರಗಳಾದವೋ!\\

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...