Saturday, August 28, 2010

ಇಂದಿನ ಆದರ್ಶ

ದಾರಿ ಬಿಡಿ,ದಾರಿ ಬಿಡಿ
ದೇಶವನ್ನಾಳುವವರು ಬಂದರು\
ಜಾಗ ಕೊಡಿ,ಜಾಗ ಕೊಡಿ
ಕುಳಿತು ಹಣವ ಸ್ವಾಹ ಮಾಡಲು\\

ನ್ಯಾಯ.ನೀತಿ,ಧರ್ಮಗಳೆಲ್ಲಾ
ಯಾವ ಮೊಲೆ ಸೇರಿದವೋ?\
ಮೋಸ,ಕುತಂತ್ರ,ಅನ್ಯಾಯಗಳೆಲ್ಲಾ
ಮೇಲ್ಪಂಕ್ತಿಗೆ ಬಂದು ಕುಳಿತಾವೋ!\\

ಮಾತಿಗೆ ಕಟ್ಟು ಬೀಳುವ ಕಾಲವು ಹೋಯಿತು
ನೀತಿ,ಧರ್ಮಗಳ ಪಾಲಿಸುವವರು ಯಾರು?\
ವಚನಭ್ರಷ್ಟತೆಯೇ ಇಂದಿನ ಆದರ್ಶ
ಅನೀತಿ,ಕುಟಿಲತೆಯೇ ಇಂದಿನವರ ಉಸಿರು\\

ರಾಮ-ಕೃಷ್ಣ, ಗಾಂಧಿ ಖಳನಾಯಕರಾದರೋ!
ಕುಡಿವ ಗಾಳಿ,ನೀರು,ಆಹಾರ ವಿಷವಾದವೋ!\
ದುರ್ಯೋದನ,ಕಂಸ,ರಾವಣರೇ ಇಂದಿನ ನಾಯಕರೋ!
ದ್ವೇಷ,ಲಂಚ,ಮೋಸ,ಸ್ವಾರ್ಥಗಳೇ ಅಸ್ತ್ರಗಳಾದವೋ!\\

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...