ದಾರಿ ಬಿಡಿ,ದಾರಿ ಬಿಡಿ
ದೇಶವನ್ನಾಳುವವರು ಬಂದರು\
ಜಾಗ ಕೊಡಿ,ಜಾಗ ಕೊಡಿ
ಕುಳಿತು ಹಣವ ಸ್ವಾಹ ಮಾಡಲು\\
ನ್ಯಾಯ.ನೀತಿ,ಧರ್ಮಗಳೆಲ್ಲಾ
ಯಾವ ಮೊಲೆ ಸೇರಿದವೋ?\
ಮೋಸ,ಕುತಂತ್ರ,ಅನ್ಯಾಯಗಳೆಲ್ಲಾ
ಮೇಲ್ಪಂಕ್ತಿಗೆ ಬಂದು ಕುಳಿತಾವೋ!\\
ಮಾತಿಗೆ ಕಟ್ಟು ಬೀಳುವ ಕಾಲವು ಹೋಯಿತು
ನೀತಿ,ಧರ್ಮಗಳ ಪಾಲಿಸುವವರು ಯಾರು?\
ವಚನಭ್ರಷ್ಟತೆಯೇ ಇಂದಿನ ಆದರ್ಶ
ಅನೀತಿ,ಕುಟಿಲತೆಯೇ ಇಂದಿನವರ ಉಸಿರು\\
ರಾಮ-ಕೃಷ್ಣ, ಗಾಂಧಿ ಖಳನಾಯಕರಾದರೋ!
ಕುಡಿವ ಗಾಳಿ,ನೀರು,ಆಹಾರ ವಿಷವಾದವೋ!\
ದುರ್ಯೋದನ,ಕಂಸ,ರಾವಣರೇ ಇಂದಿನ ನಾಯಕರೋ!
ದ್ವೇಷ,ಲಂಚ,ಮೋಸ,ಸ್ವಾರ್ಥಗಳೇ ಅಸ್ತ್ರಗಳಾದವೋ!\\
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment