ಮುಸ್ಸಂಜೆ ಮೊಡುವ ಮುನ್ನ
ಆಡದ ಮಾತಿನಲ್ಲಿ ಹುರುಪಿದೆ\
ದೀಪ ಮೊಡುವ ಮುನ್ನ
ಮನದಲಿ ಬಯಕೆಯ ಚಿಗುರೊಡೆದಿದೆ\\
ಹಾರೋ ಹಕ್ಕಿಯ ಚಿಲಿಪಿಲಿ ಗಾನ
ಮನದಲಿ ರಾಗರತಿಯ ರಿಂಗಣ\
ತೇಲಿ ಬರುವ ತಂಗಾಳಿಯಲ್ಲಿ
ಮೈಮನಗಳ ಹಂಬಲದ ಭಾವನ\\
ನಕ್ಕು ಬರಮಾಡಿಕೊಂಡಿದೆ ಕಣ್ಣರಳಿಸಿ ಹಣತೆ
ಕಣ್ಣ ರೆಪ್ಪೆಗಳಲ್ಲಿ ಚಿಗುರೊಡೆದಿದೆ ಕಾತರತೆ\
ಮಾತು-ಮೌನ ಒಂದನ್ನೊಂದು ಬಿಡದೆ ಹೆಣದಿದೆ
ಗುಟ್ಟು ಬಿಡದೆ, ಬಿಟ್ಟು ಬಿಡದೆ ಒಂದಕ್ಕೊಂದು ಒಲಿದಿದೆ\\
ಚಂದ್ರ ನಾಚಿ ನೀರಾಗಿ ಹಂಬಲದಿ ಬಳಲಿದೆ
ಬೀಸೋ ತಂಗಾಳಿಯ ಹೊತ್ತು ತಿರುಗೋ ಮುಗಿಲು ಕಪ್ಪಿಟ್ಟಿದೆ\
ಪಿಳಿಪಿಳಿ ಕಣ್ಣುಬಿಟ್ಟು ನೋಡೋ ತಾರೆಗಳು ನಾಚಿಕೆಯಿಲ್ಲದೆ ನಲಿದಿದೆ
ಪ್ರೀತಿಸೋ ಹೃದಯಗಳೆರಡೂ ಬಾಹು ಬಂಧನದಲ್ಲಿ ಹಿತವಾಗಿ ನರಳಿದೆ\\
ಮುಸ್ಸಂಜೆಯಾಯಿತು
ಮಾತು ಮುತ್ತಾಯಿತು\
ದೀಪ ಮೊಡಿತು
ಬಯಕೆ ಸಾಕಾರಗೊಂಡಿತು\\
Thursday, August 26, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment