ದೂರ ಹೋದವರು ಯಾರು ?
ನಾವೋ ? ನೀವೋ?
ಹೋಗಬೇಡಿ ಹೋಗಬೇಡಿರೆಂದು
ಅಂಗಲಾಚಿ ಬೇಡಿದರೂ
ಮನಸು ಮುರಿದು ಹೋದವರು ಯಾರೋ?\\
ನಂಬಿಕೆಗಳು ಬೇರೆ ಬೇರೆ
ಆಚಾರ ವಿಚಾರ ಬೇರೆ ಬೇರೆ
ನೋಡುವ ದೃಷ್ಟಿ ಬೇರೆ ಬೇರೆ
ಮನಸ್ತಾಪಗಳು ನೂರಿರಲಿ
ಬಗೆಹರಿಸಿಕೊಳ್ಳುವ ಮನವಿಲ್ಲದೆ
ದ್ವೇಷದ ಮೆಟ್ಟಿಲೇರಿ ಹೋದವರು ಯಾರೋ?\\
ಒಂದೇ ಮರದ ರೆಂಬೆಗಳು ನಾವು
ಒಂದೇ ಗಾಳಿ
ಒಂದೇ ನೀರು
ದೇಹದ ರಕ್ತದ ಬಣ್ಣವೂ ಒಂದೇ
ಇದೇ ಮಣ್ಣಿನಲಿ ಬೆಳೆದವರು
ಇಲ್ಲ ಸಲ್ಲದ ಮಾತುಗಳಿಗೆ
ನೀರೆರೆದು ಬೆಳೆಸಿ ಸ್ನೇಹದ ,ಭಾಂದವ್ಯದ ಕೊಂಡಿ ಕಳಚಿಕೊಂಡವರಾರೋ?\\
Sunday, July 25, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment