Saturday, February 28, 2026

ವಿಳಂಬ ನೀತಿ

'ನಾಳೆ ಮಾಡೋಣ' ಕೆಲಸ,

ಮುಂದೆ ಮುಂದೆ ತಳ್ಳುವೆವು.

'ನಾಳೆ' ದಿನ ಬರುವುದೇ ಇಲ್ಲ,

ಕೆಲಸ  'ನಿಧಾನ'ಕ್ಕೆ ಬೇಸರಿಸುವುದು.

 

ಮನದಲ್ಲಿ 'ಗೊಂದಲ', 'ಭಯ' ವಿದೆ,


ಮಾಡಲು 'ನೋವಾ'ಗುವುದೆಂದು.

'ಯೋಚಿಸು','ಯೋಜಿಸು' ಕೆಲಸದ ಮುಂದು,

ಬಿಡು 'ಚಿಂತೆ', 'ಪ್ರಕ್ರಿಯೆ'ಯಲ್ಲಿ 'ಸಡಗರ'ಪಡು.

 

ಇಂದಲ್ಲ ನಾಳೆ ಕೆಲಸ ನೀನೇ ಮಾಡಬೇಕು,

'ಹಿಂಜರಿಕೆ' ಬೇಡ, 'ಮನಸ್ಸು' ಮಾಡು.

'ಕೇಳು', 'ಆಲಿಸು' ನಿನ್ನಿಷ್ಟದ 'ಸಂಗೀತ',

'ಹಗುರಾಗಿಸು' ಸಮಾಧಾನದ ನುಡಿಗಳಿಂದ.

 

'ಫಲಿತಾಂಶ' ಬಗ್ಗೆ ಯೋಚಿಸದಿರು,

'ಪ್ರಯತ್ನ' 'ಗಮನದಿ' ನೀ ಮಾಡು,

ಮಾಡುವುದರಲ್ಲಿ 'ಗುಣಮಟ್ಟ' ಕಾಯ್ದುಕೋ,

ಮಿಕ್ಕೆಲ್ಲ ತನಗೆ ತಾನೇ ನಿನಗೆ 'ಕಾಯ್ವುದು'.

No comments:

Post a Comment

ಮನೋರಥ- ಪುಸ್ತಕ

ಮನೋರಥದ ಕಡಲು ಪುಸ್ತಕ , ಶೂನ್ಯದಿಂದ ಅನಂತದೆಡೆಗೆ ಪಯಣ . ಉಲ್ಲಾಸದ ಲಹರಿ ಕವನ , ಕಲ್ಪನೆಯ ಸಾಗರದಿ ತೇಲಿಸುವ ಪ್ರೇರಣ , ಬಡವ , ಬಲ್ಲಿದನಿಗೂ ಸಾಕಾರ , ...