Friday, February 27, 2026

ಆಂತರಿಕ ಜಾಗೃತಿ

ಬೆಳಗಿನ ಶಾಂತ 'ಮೌನ' ನೀರವತೆಯಲ್ಲಿ,

ಮನದಲ್ಲಿ ಮೌನ 'ಚಿಂತನೆ' ತರಂಗಗಳು.

ಜೀವನದ 'ಉದ್ದೇಶ', ಜೀವನ ಜಂಜಾಟಗಳಲ್ಲಿ,

ಮೈ ಮರೆತಾಗ 'ಎಚ್ಚರಿಕೆ' ಪಿಸುಮಾತುಗಳು.

 

ನಾನು 'ಯಾರು'?, ಏಕೆ ಬಂದಿಹೆ?,

ಸಾವಿರ ಉತ್ತರವಿಲ್ಲದ 'ಪ್ರಶ್ನೆ'ಗಳು.

ಭಯ,ಆತಂಕ, ನಿಗೂಢತೆಯ 'ಕತ್ತಲು',

ಎಲ್ಲವೂ ಜಾರುವುದು 'ನೀ' ಎದ್ದು 'ನಿಂತರೆ'.

 

'ಮನೋಬಲ'ವಿಲ್ಲವೇ?, 'ಉದ್ದೇಶ' ದಾರಿತೋರುವುದು,

ಮನದ ಛಲ ದಾರಿ 'ದೀವಿಗೆ'ಯಾಗುವುದು.

ಮುಂದಿಟ್ಟ 'ಹೆಜ್ಜೆ'ಯನ್ನೆಂದೂ ಹಿಂದಿಡದಿರು,

ಆಗುವುದು ಆಗೇ ಹೋಗಲಿ, ಹೆಜ್ಜೆ 'ಮುಂದಿಡು'.

 

'ಬದಲಾವಣೆ' ಹರಿಕಾರ ಬರುವನೆಂದು ಕಾಯದಿರು,

ನೀನೇ ಬದಲಾವಣೆಯ 'ಹರಿಕಾರ ನಂಬಿಕೆ'ಯಿಡು.

ನಿನ್ನ ಜೀವನದ 'ಶಿಲ್ಪಿ ನೀನೇ', ಮರೆಯದಿರು,

'ಬೆಳವಣಿಗೆ'ಯೇ 'ಜೀವನ ಸಂತೋಷ' ಹಠತೊಡು.

No comments:

Post a Comment

ಇರುಳ ನೆರಳಿನ ಪಯಣ

ಇರುಳ ಕತ್ತಲಿನಲ್ಲಿ ಬಯಕೆಗಳ ಕನಸ ನೆರಳ ಹೆಣೆದೆ, ರಾತ್ರಿಯ ಪ್ರಶಾಂತ ಕತ್ತಲೆಯ ನೆಲಹಾಸಿನ ಮೇಲೆ, ಅಸ್ಪಷ್ಟ, ಅಗೋಚರ, ಅಲೆದಾಟ, ತೀರದ ದಾಹ, ಇರುಳ ಕತ್ತಲೆಯಲ್ಲಿ ನಡೆವ ದಾರಿ...