Thursday, July 11, 2013

ನಂಬಿ ಕೆಟ್ಟೆವೇ?

ನಂಬಿ ಕೆಟ್ಟೆವೇ ಇವರನ್ನು
ದೊಡ್ಡವರು ಏಳಿಗೆ ಬಯಸುವರೆಂದು
ನಂಬಿದ್ದೇ ದೊಡ್ಡ ತಪ್ಪಾಯಿತೇನೋ?
ಅವಕಾಶಗಳನ್ನು ತಿಂದುಂಡವರು
ಹೊಟ್ಟೆಯ ತುಂಬಾ ತುಂಬಿಕೊಂಡವರು
ಹಸಿವ ಅಗ್ನಿಯಲ್ಲಿ ಬಳಲುವವರ ಕಷ್ಟ ಅರ್ಥವಾದೀತೇ?

ಮೌನವಹಿಸಿದ್ದೇವೆ ಎಲ್ಲವೂ ನೋಡುತ್ತಾ
ಪ್ರಶ್ನೆ ಕೇಳಿದರೆ ಬಾಯಿ ಬಡಿಯುವರು
ಇದೆಂಥಾ ಶೋಷಣೆಯೋ? ಇಲ್ಲ ಗುಲಾಮಗಿರಿಯ ಪೋಷಣೆಯೋ?
ಸ್ವಾತಂತ್ರ ಕಳೆದುಕೊಂಡ ಸ್ಥಿತಿ ನಮ್ಮೆಲ್ಲರದೂ
ಪ್ರತಿಭಟಿಸುವುದೆಂತೋ ತಿಳಿಯುತ್ತಿಲ್ಲ ಯಾರಿಗೂ
ಒಳಒಳಗೇ ಕುದಿಯುತ್ತಾ
ಎಂದು ಅಗ್ನಿಪರ್ವತದಂತೆ ಒಳಕುದಿ ಸ್ಪೋಟಿಸುವುದೋ?

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...