ಬುದ್ಧ ನಕ್ಕ

ಬೋಧಗಯಾ ಭಯಭೀತವಾಗಿದೆ
ಭಯೋತ್ಪಾದಕರ ದಾಳಿಗೆ ತುತ್ತಾಗಿದೆ
ಸಾವು-ನೋವುಗಳಿಗೆ ಸಾಕ್ಷಿಯಾಗಿದೆ
ದ್ವೇಷದ ಕೆನ್ನಾಲಿಗೆಗೆ ಬಲಿಯಾಗಿದೆ||

ಆಸೆಯೇ ದುಃಖಕ್ಕೆ ಮೂಲವೆಂದವನ ಮುಂದೆ
ಭಯದ ಬೀಜ ಮನದಲ್ಲಿ ಬಿತ್ತುವ ಯತ್ನ ಬೆನ್ನ ಹಿಂದೆ
ನೆಲ ನಡುಗಿದೆ,ಮನ ಕಂಪಿಸಿದೆ
ಜೀವಗಳು ಭಯದ ನೆರಳಲ್ಲಿ ಕಾಲ ಕಳೆದಿದೆ||

ಬುದ್ಧಿಜೀವಿಗಳ ಬಾಯಿಗೆ ಬೀಗ ಬಿದ್ದಿದೆ
ಪ್ರಗತಿಪರರು ನಾಪತ್ತೆಯಾಗಿದ್ದಾರೆ
ರಾಜಕಾರಣಿಗಳು ಎಂದಿನಂತೆ ಮೊಸಳೆ ಕಣ್ಣೀರಿಡುತ್ತಿದ್ದಾರೆ
ಪತ್ರಿಕೆಗಳು ಬೊಬ್ಬೆಹೊಡೆಯದೆ ನಿದ್ರಿಸುತ್ತಿವೆ||

ಕಾಣದ ಹೋಮಕುಂಡಕ್ಕೆ
ಹವಿಸ್ಸನರ್ಪಿಸಿದಂತೆ
ಹೃದಯಗಳ ಬೆಸೆಯುವ
ಕೊಂಡಿಯ ಕಳಚಿದಂತೆ||

ಕಚ್ಚಾಡಿ ಸಾಯುವ ಪಕ್ಷಗಳಿಗೆ
ಒಂದು ದಿನದ ಆಹಾರವಾಯಿತು ಈ ಘಟನೆ
ಧೃಡ ನಿರ್ಧಾರ,ಬದ್ಧತೆ ಪ್ರದರ್ಶಿಸದ
ಗೃಹಖಾತೆ,ಬಟ್ಟಿಂಗಿ ರಾಜಕಾರಣಿ,ಸರ್ಕಾರಕ್ಕಿದುವೆ ಪ್ರತಿಭಟನೆ||

ಸೋತವರಾರೋ? ನರಳಿದವರಾರೋ?
ಯಾರ ಹಿತ ನರಳಿಹುದೋ ಮೌನವಾಗಿ
ಕಾಲ ತೆವಳಿದ ನೋವು-ಸಾವುಗಳೊಡನೆ
ಬುದ್ಧ ಮಾತ್ರ ನಸುನಗುತ್ತಿದ್ದಾನೆ ಎಲ್ಲವನ್ನೂ ಕಂಡೂ ಕಾಣದವನಂತೆ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...