ಕಡೆಗೂ ಹೊರಟರು ಒಬ್ಬೊಬ್ಬರಾಗಿ
ಸೆರೆಮನೆ ಕಡೆಗೆ ಲಜ್ಜೆ ಬಿಟ್ಟು
ಕೆಲವರಿಗೆ ಸಂತೋಷ, ದುಗುಡ
ಮತ್ತೆ ಕೆಲವರಿಗೆ ಚಿಂತೆ
ಬಚ್ಚಿಟ್ಟ ಕಂತೆ ಕಂತೆ ಹಗರಣಗಳು
ಜನತೆಯ ಮುಂದೆ ಬತ್ತಲಾಗಿವೆ
ಮೊರು ಬಿಟ್ಟವರಿಗೆ ಈಗ ಕಾದಿದೆ
ಸೆರಮನೆಯ ಭಯ
ಹೋದ ಮೇಲೂ ಹೊರಬರಲು
ನಡೆಯುವುದು ಹಲವು ನಾಟಕಗಳು
ಯಾರ ನಾಟಕವೂ ನಡೆಯುವುದಿಲ್ಲ
ಎಲ್ಲರೂ ಸಲ್ಲಬೇಕು ಇಲ್ಲಿಗೆ (ಸೆರೆಮನೆಗೆ)
ಇಂದಲ್ಲ, ನಾಳೆ
ಸಮಯ ಕಾಯುತಿದೆ (ಬಡ ಜನರ ಶಾಪ)
ಎಲ್ಲರ ಮೇಲೂ ಮುಯ್ಯಿತೀರಿಸಿಕೊಳ್ಳಲು
ಬಿಡುವುದಿಲ್ಲ ಯಾರನ್ನೂ
ಸರತಿಯಂತೆ ಎಲ್ಲರೂ ಶರಣಾಗಲೇಬೇಕು.
Tuesday, October 18, 2011
Subscribe to:
Post Comments (Atom)
ಮೌನ ನೃತ್ಯ
ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment