Tuesday, October 18, 2011

ಸೆರೆವಾಸ

ಕಡೆಗೂ ಹೊರಟರು ಒಬ್ಬೊಬ್ಬರಾಗಿ
ಸೆರೆಮನೆ ಕಡೆಗೆ ಲಜ್ಜೆ ಬಿಟ್ಟು
ಕೆಲವರಿಗೆ ಸಂತೋಷ, ದುಗುಡ
ಮತ್ತೆ ಕೆಲವರಿಗೆ ಚಿಂತೆ
ಬಚ್ಚಿಟ್ಟ ಕಂತೆ ಕಂತೆ ಹಗರಣಗಳು
ಜನತೆಯ ಮುಂದೆ ಬತ್ತಲಾಗಿವೆ
ಮೊರು ಬಿಟ್ಟವರಿಗೆ ಈಗ ಕಾದಿದೆ
ಸೆರಮನೆಯ ಭಯ
ಹೋದ ಮೇಲೂ ಹೊರಬರಲು
ನಡೆಯುವುದು ಹಲವು ನಾಟಕಗಳು
ಯಾರ ನಾಟಕವೂ ನಡೆಯುವುದಿಲ್ಲ
ಎಲ್ಲರೂ ಸಲ್ಲಬೇಕು ಇಲ್ಲಿಗೆ (ಸೆರೆಮನೆಗೆ)
ಇಂದಲ್ಲ, ನಾಳೆ
ಸಮಯ ಕಾಯುತಿದೆ (ಬಡ ಜನರ ಶಾಪ)
ಎಲ್ಲರ ಮೇಲೂ ಮುಯ್ಯಿತೀರಿಸಿಕೊಳ್ಳಲು
ಬಿಡುವುದಿಲ್ಲ ಯಾರನ್ನೂ
ಸರತಿಯಂತೆ ಎಲ್ಲರೂ ಶರಣಾಗಲೇಬೇಕು.

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...