ಬೇಕು ಬೇಕುಗಳ ಸಂತೆ ಈ ಬದುಕು
ಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕು
ಯಾವುದಕ್ಕೂ ಕೊರತೆಯಿಲ್ಲ ಇಲ್ಲಿ
ಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿ
ಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂ
ಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿ
ಹಿಂದೆ ಸ್ವರ್ಗ,ಮೋಕ್ಷದ ಗುರಿಯಿತ್ತಿಲ್ಲಿ
ಇಂದು ಸ್ವರ್ಗ,ಮೋಕ್ಷಗಳ ಮಾತೆಲ್ಲಿ?
ತ್ಯಾಗ.ಭಕ್ತಿಗಳು ಸ್ವಾರ್ಥ ಸಾಧನೆಯಲ್ಲಿ ನುಲುಗಿದೆಯಿಲ್ಲಿ
ಮುಕ್ತಿ-ಸಾಧನೆಗಳು ದಿಕ್ಕುಪಾಲಾಗಿವೆ ಇಲ್ಲಿ
ಹಾಸಿಗೆಯಿದ್ದಷ್ಟು ಕಾಲುಚಾಚು ಎನ್ನುವುದು ನಗೆಪಾಟಲು ಇಲ್ಲಿ
ಸಿಕ್ಕಿದ್ದು-ಸಿಗದಿದ್ದು ಕೈಗೆಟುಕಿಸಿಕೊಳ್ಳುವ ತಾಕತ್ತು ಎಲ್ಲರಿಗಿದೆ ಇಲ್ಲಿ.
ಬುದ್ಧನ ಆಸೆಯೇ ದುಃಖಕ್ಕೆ ಮೊಲವೆನ್ನುವುದು ಹಳತಾಗಿದೆ
ಆಸೆಯೇ ಹೊಸತನದ ಹುಡುಕಾಟಕ್ಕೆ ದಾರಿಯಾಗಿದೆ ಇಂದಿಲ್ಲಿ.
Wednesday, October 19, 2011
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment