Monday, October 31, 2011

ಕತ್ತಲು-ಬೆಳಕುಗಳ ಓಡಾಟ

ಒಬ್ಬಂಟಿಯಾಗಿ ನಡೆದು ದಣಿವಾರಿಸಿಕೊಳ್ಳಲು
ಮರದ ಕೆಳಗೆ ಕುಳಿತೆ,ಸಂಜೆಯಾಕಾಶವ ದಿಟ್ಟಿಸುತ್ತಾ
ಹಕ್ಕಿಗಳ ಚಿಲಿಪಿಲಿ ಸದ್ದು,
ಜಾರುತ್ತಿರುವ ಸೂರ್ಯನ ಕಿರಣಗಳಿಗೆ ಬೇಡಿಕೆಯಿಡುತ್ತಾ
ಪ್ರಚೋದಿಸು ಪ್ರಚೋದಿಸು
ನನ್ನ ಮನದ ಭಾವಗಳ
ಮನದ ಸಂಕೀರ್ಣತೆಗಳ ಹೊಡೆದುಹಾಕಿ
ಮನದ ದುಗುಡಗಳ ಹೊಸಕಿಹಾಕಿ
ಹೊಸತನಕ್ಕೆ ಓಂಕಾರ ಹಾಕು ಬಾರೆಂದು ಪ್ರಾರ್ಥಿಸುತ್ತೇನೆ
ಕತ್ತಲು ಕವಿಯುತ್ತಿದ್ದಂತೆ
ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮಂಗಮಾಯ
ಮನದಲ್ಲಿ ಗೊಂದಲ ಇಮ್ಮಡಿಯಾಗಿದೆ
ಮನದಲ್ಲಿ ಪ್ರಾರ್ಥನೆಯ ಗುಂಗು ತಿಳಿಯಾಗುತ್ತಿದೆ
ಮನೋವಿಕಾರ ತೀವ್ರವಾಗತೊಡಗಿದೆ
ನಡೆದ ದಣಿವು ತಣ್ಣಗಾಗಿದ್ದರೂ
ಹಣೆಯ ಮೇಲೆಲ್ಲಾ ಬೆವರಿನ ತೋರಣ
ತುಂತುರು ಮಳೆಯ ಹನಿಯಂತೆ ಜಾರತೊಡಗಿತು
ಎದುರಿಸಲಾಗದೆ,ತಡೆಯಲಾಗದೆ
ಆ ಕತ್ತಲಿನ ಸಂಕೋಲೆಯ ಬಿಡಿಸಿಕೊಳ್ಳಲು
ಬೆಳಕಿನತ್ತ ಓಡುತ್ತಿದ್ದೇನೆ
ಬೆಳಕಿನತ್ತ ಓಡುತ್ತಿದ್ದೇನೆ, ನಿಲ್ಲದೆ,ನಿಲ್ಲದೆ.

ಅಸಹಾಯಕತೆ

ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆ
ನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂ
ಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||

ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆ
ಇದ್ದ ಸ್ವಾಭಿಮಾನವನ್ನೂ ನಾಶಮಾಡಿದೆ
ಮನದ ತುಂಬೆಲ್ಲಾ ಕತ್ತಲು ಆವರಿಸದಂತಿದೆ, ಬೆಳಕು ಕಾಣದೆ||

ಒಂಟಿಯಾಗಿ ಹಿಮದ ಕೊರೆಯುವ ನೆಲದಲ್ಲಿ
ಬೆವೆತು ನಡೆಯುತ್ತಿದ್ದೇನೆ ದಾರಿ ಕಾಣದೆ
ಮುಂದೆ ಹೋದವರು ನಗುತ್ತಿದ್ದಾರೆ ನನ್ನ ಅಸಹಾಯಕತೆಯ ಕಂಡು||

ಕಂಡ ಕಂಡವರ ಮೇಲೆ ಗೂಳಿಯಂತೆ ನುಗ್ಗಬೇಕೆನಿಸುತ್ತದೆ
ಆದರೆ ಆತ್ಮಗೌರವ ಅಡ್ಡ ಬರುತ್ತದೆ
ಎಲ್ಲರನ್ನೂ ಬಿಟ್ಟುಬಿಡಬೇಕೆನಿಸುತ್ತದೆ,ಬಿಡಲಾಗದು ತಿಳಿದಿದೆ||

ಕಾಲ ಬುದ್ದಿ ಕಲಿಸಬೇಕೆಂದು ಬಯಸುತ್ತೇನೆ
ಅದು ನನಗೂ ಹಾಗು ನನ್ನನ್ನು ಹಿಂಸಿಸುವರೆಗೂ
ನನ್ನ ಅಸಹಾಯಕತೆ ನನಗೆ ಪಾಠಕಲಿಸುತ್ತದೆ,ಅದಕ್ಕೆ ಕಾತುರನಾಗಿದ್ದೇನೆ||

Sunday, October 30, 2011

ನಿರ್ಣಯ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆ
ತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆ
ಏಕೆ? ಏನು? ಒಂದೂ ಗೊತ್ತಾಗುವುದಿಲ್ಲ
ಹೊರಬರುವುದು ಕಷ್ಟವಾದರೂ
ಹೊರಬರಲೇ ಬೇಕಲ್ಲ!
ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆ
ಪ್ರತಿಯೊಂದರಲ್ಲೂ ಬೇಸರ ತರಿಸುತ್ತಿದೆ
ಹೊಸತನ ಬಯಸುತ್ತಿದ್ದೇನೆ
ಕಣ್ಣಿದ್ದೂ ಕುರುಡನಾಗಿದ್ದೇನೆ
ಮುಂದಿನ ದಾರಿ ಮಾತ್ರ ಕಾಣದಾಗಿದೆ
ದೀಪಾವಳಿ ಮುಗಿದಿದೆ
ಮನದಲ್ಲಿ ಮಾತ್ರ ಅರಿವಿನ ದೀಪ ಮೊಡಲಿಲ್ಲ
ಮನಕ್ಕೆ ಸಂತೋಷ ಎಲ್ಲಿಂದ ತರಲಿ
ಪೆಟ್ರೋಲ್,ಅನಿಲಗಳ ನಿತ್ಯಬಳಸುವ ದಿನಸಿಗಳ ಬೆಲೆಗಳು ಗಗನಕ್ಕೇರಿವೆ
ಶಾಸಕ,ಸಂಸದರ ಹಗರಣಗಳು ಅಸಹ್ಯಮೊಡಿಸುತ್ತಿದೆ
ರಾಜಕೀಯ ಬೇಸರಿಕೆ ಮೊಡಿಸುತ್ತಿದೆ
ಸಾಹಿತಿಗಳ ಗುಂಪುಗಾರಿಕೆ ಉಸಿರುಗಟ್ಟಿಸುತ್ತಿದೆ
ಆಫೀಸಿನಲ್ಲೋ ಚಮಚ,ಬಕೆಟುಗಳದ್ದೇ ಸದ್ದು
ಮೇಲಕ್ಕೇರಲಾಗದೆ,
ಕೆಳಗಿಯಲಾಗದೆ,
ಅತಂತ್ರ ಸ್ಥಿತಿಯಲ್ಲಿ ಬಳಲುತ್ತಿದ್ದೇನೆ
ಸಂತೋಷ,ಅಣ್ಣಾ ಮಾತ್ರ ಆಶಾಕಿರಣವಾಗಿದ್ದಾರೆ
ಮುಂದೆ ಹೋಗಲೇಬೇಕು
ಕಣ್ಣುಮುಚ್ಚಾದರೂ ಸರಿ ಕಾಲದೂಡುತ್ತೇನೆ
ಆ ಸರಿಯಾದ ಕಾಲಕ್ಕೆ, ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತೇನೆ

Friday, October 28, 2011

ಪಟಾಕಿಯ ಸದ್ದಡಗಿದ ಮೇಲೆ.....


ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕು
ಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕು
ನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸ
ಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||

ದೀಪಾವಳಿ ಮನದ ಕೊಳಕನ್ನು ದೂರಮಾಡುವ ದಿವಸ
ಎಷ್ಟು ಜನ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೋ ತಿಳಿಯೆ
ಮನದ ಕತ್ತಲೆ ಪಟಾಕಿಯ ಶಬ್ಡಕ್ಕೆ ಮನದಲ್ಲೇ ಅಡಗಿ ಕುಳಿತಿತು ಹೊರಗೆ ಬರದೆ
ಶಬ್ಡ ಮಾಲಿನ್ಯ,ವಾಯುಮಾಲಿನ್ಯ,ಅಪಘಾತಗಳಲ್ಲಿ ಕಳೆದು ಹೋಯಿತು ದೀಪಾವಳಿ||

ವ್ಯಾಪಾರಿಗಳಿಗೆಲ್ಲಾ ಸುಗ್ಗಿಯ ದಿವಸ
ಕಸವ ಮಾರಿ ಗಳಿಸುವರು ಜೋಬಿನ ತುಂಬಾ ದುಡ್ಡು
ಪಟಾಕಿಯ ಸಿಡಿಸಿ ಪರಿಸರಕ್ಕೆ ಕೊಡುವೆವು ಮಾಲಿನ್ಯದ ಗುದ್ದು
ಪರಿಸರ ಪ್ರೇಮಿಯಾಗಿರದ ಪಟಾಕಿ ಬೇಕೆ? ನಮಗೆ ಚಿಂತಿಸಬೇಕು ಇಂದು||

ರಾತ್ರಿಯಿಡೀ ಶಬ್ದ, ಬೆಳಕು, ಮಾಲಿನ್ಯದ ಹೊಗೆ
ಮನೆಯಿಂದ ಹೊರ ಬರಲೇಯಿಲ್ಲ ನಾನು
ಬೆಳಿಗ್ಗೆ ಹೊರಟೆ ಆಫೀಸಿಗೆ ದಾರಿಯ ತುಂಬೆಲ್ಲಾ ಕಾಗದದ ರಾಶಿ ರಾಶಿ
BBMP ಕರ್ಮಚಾರಿಗಳ ಕೈಯಲ್ಲಿ ಕಸದ ಪೊರಕೆ
ಮುಖದಲ್ಲಿ ಕೋಪ,ಬಾಯಲ್ಲಿ ಬೈಗುಳ ಗೊಣಗಾಟ||

ಏಕೆ ಬರುವುದೋ ಈ ದೀಪಾವಳಿ
ಸಾಕು ಸಾಕು ಈ ಶಿವಕಾಶಿಯ ಕೊಳೆತ ಕಾಗದದ ಕಸದ ರಾಶಿ ರಾಶಿ
ಇನ್ನು ಮೇಲಾದರೂ ತಿಳಿಯೋಣ ಹಬ್ಬದ ಆದರ್ಶವ
ಬರೀ ಹಚ್ಚೋಣ ದೀಪ ಮನ ಮನದಲ್ಲಿ ,ಮನೆಯ ಅಂಗಳದಲ್ಲಿ||

Sunday, October 23, 2011

ರಸ್ತೆ ಸೂಚನಾ ಫಲಕ



ನಾನು ದಾರಿ ಸೂಚಕ,ರಸ್ತೆ ಸೂಚನಾ ಫಲಕ
ನನ್ನ ಕೆಲಸ ದಾರಿ ಹೋಕರಿಗೆ,ಪಥಿಕರಿಗೆ
ಅಲೆಮಾರಿಗಳಿಗೆ,ವಿಳಾಸ ಹುಡುಕುವವರಿಗೆ
ಸಹಾಯ ಮಾಡುವ ನಿರ್ಜೀವ ರಸ್ತೆ ಸೂಚಕ;
BBMPಯವರು ನನ್ನನ್ನಿಲ್ಲಿ ನಿಲ್ಲಿಸಿಹರು
ಬಣ್ಣ ಬಣ್ಣಗಳಿಂದ ಸಿಂಗರಿಸಿದರು
ರಸ್ತೆಯ ಬಲ ಭಾಗವೋ? ಎಡ ಭಾಗವೋ?
ಎಲ್ಲೋ ಒಂದು ಕಡೆ ನಿಲ್ಲಿಸಿ,
ಅದಕ್ಕೊಂದು ಹೆಸರ ನೀಡಿ
ನನ್ನ ಸೇವೆಗೆ ನಿಲ್ಲಿಸಿಹರು;
ಹಗಲು,ರಾತ್ರಿ,ಧೂಳು,ಮಳೆ
ಯಾವುದಕ್ಕೋ ಜಗ್ಗದೆ,
ಸದಾ ಜನರ ಸೇವೆಯಲ್ಲಿ ನಿಂತವನು ನಾನು
ಒಂದೊಂದು ರಸ್ತೆಯಲ್ಲಿ ಒಂದೊಂದು ಹೊಸ ಹೊಸ ಹೆಸರು ನನಗೆ
MG ರಸ್ತೆ,ಡಾ|| ರಾಜ್ ಕುಮಾರ್ ರಸ್ತೆ,ಡಾ|| ಮುತ್ತುರಾಜ್ ರಸ್ತೆ,
ಅತ್ತಿಮಬ್ಬೆ ರಸ್ತೆ, Bull temple ರಸ್ತೆ..........
ಹೆಸರೇನೋ ಗಣ್ಯರದ್ದೇ!......
ಆದರೆ ನಾನು ಮಾತ್ರ ನಗಣ್ಯ
ನನಗೋ ಹಿಗ್ಗು
ಅದರಿಂದ ಸ್ವಲ್ಪ ಅಹಂ
ಆ ಅಹಂ ನನ್ನ ಸೌಂದರ್ಯಕ್ಕೆ ದಕ್ಕೆ ತಂದಿದೆ
ಏನು ಹೇಳಲಿ? ಯಾರಿಗೆ ಹೇಳಲಿ? ನನ್ನ ಸಮಸ್ಯೆಯನ್ನ
ನನ್ನ ಸೌಂದರ್ಯ ಹಾಳಾಗಿದೆ;
ಹೊಸ ಬಣ್ಣ ಕಂಡು ವರ್ಷಗಳಾಗಿವೆ;
ಕಾಲು ಮುರಿದಿದೆ;
ಕೆಲವೊಮ್ಮೆ ಕನ್ನಡದ ಕೊಲೆಯೊ ನನ್ನ ಮೇಲೆಯೇ ಆಗುತ್ತದೆ
ತಪ್ಪು ತಪ್ಪಾದ ಕನ್ನಡದ ಪದಗಳನ್ನ ನನ್ನ ಮೇಲೆ ಬರೆದು;
ಈ ಸಣ್ಣ ಸಣ್ಣ ಜಾಹೀರಾತುದಾರರು ತಮ್ಮ ವ್ಯಾಪಾರದ ಜಾಹೀರಾತು
ಚೀಟಿಗಳನ್ನು ನನ್ನ ಮೇಲೇ ಅಂಟಿಸುವರು;
ಎಷ್ಟು ಅಂಟಿಸಿದ್ದಾರೆ ಎಂದರೆ
ನನ್ನ ಮೊಲ ಹೆಸರು ಮರೆಯಾಗಿದೆ;
ನನ್ನಿಂದ ಜನತೆಗೆ ತೊಂದರೆಯಾಗುತ್ತಿದೆ;
ರಸ್ತೆ ಹುಡುಕುವವರಿಗೆ ದಾರಿ ತೋರಲಾಗದೆ ಬಳಲುತ್ತಿದ್ದೇನೆ;
ಅಸಹಾಯಕ ಸ್ಥಿತಿಗೆ ನನ್ನನ್ನು ಈ ಜಾಹೀರಾತುದಾರರು ತಳ್ಳಿದ್ದಾರೆ;
ಮಾಹಿತಿ ಪಸರಿಸುವ ನನ್ನ ಕಾಯಕಕ್ಕೆ ಧಕ್ಕೆಯಾಗಿದೆ;
ನನ್ನ ನಿಲ್ಲಿಸಿದ BBMPಯವರಿಗೂ ನನ್ನ ಬಗ್ಗೆ ಗಮನವಿಲ್ಲ;
ನನ್ನ ಸ್ವಚ್ಛತೆಯ ಬಗ್ಗೆ ತಿರಸ್ಕಾರ;
ನಾನು ಮಾತ್ರ ಸೊರಗಿದ್ದೇನೆ,ನರಳುತ್ತಿದ್ದೇನೆ ಅಸಹಾಯಕನಾಗಿ;
ನನ್ನನ್ನು ರಕ್ಷಿಸಿ;ನನ್ನನ್ನು ರಕ್ಷಿಸಿ.

Saturday, October 22, 2011

ನನ್ನ ಗೆಳೆಯರು

ನನ್ನ ಗೆಳೆಯರು;ನನ್ನ ಗೆಳೆಯರು;
ನನ್ನ ಅರ್ಥಮಾಡಿಕೊಳ್ಳಲಾರದ ಗೆಳೆಯರು;
ಅವರವರ ಭಾವಕ್ಕೆ, ನಾನು ಅಸ್ಪೃಷ್ಯನೇ ಸರಿ;
ಎಲ್ಲಕ್ಕೂ ನನ್ನನೇ ದೂರುವರು;
ನಾನು ಅವರಿಗೆ ಫೋನ್ ಮಾಡುವುದಿಲ್ಲವೆಂದು;
ಅವರೆಂದೂ ನನಗೆ ಫೋನ್ ಮಾಡುವುದಿಲ್ಲ ತಿಳಿದಿದೆ;
ಮಾತಿನಲ್ಲಿ ಅಪಹಾಸ್ಯವಿದೆ,ಕುಹಕವಿದೆ;
ಅದಕ್ಕೆ ನಾನು ಅವರಿಂದ ದೂರವಿರುವೆನು
ಅವರೇನೇ ಹೇಳಲಿ;ನಾನು ಮಾತ್ರ ಅವರನ್ನು ಪ್ರೀತಿಸುವೆ;
ನನ್ನ ಭಾವನೆಗಳಿಗೆ ಅವರ ಬಳಿ ಬೆಲೆ ಇಲ್ಲವೆಂದು ನನಗೆ ಗೊತ್ತು;
ಅವರ ಹಣ,ಅಂತಸ್ತು,ಪ್ರತಿಷ್ಟೆ ಎಲ್ಲವೂ ಅವರಿಗೆ;
ನನಗೆ ಮಾತ್ರ ಬೇಕು ಗೆಳೆತನ;
ಅವರ ಮಾತುಗಳಲ್ಲಿ,ಮನಸ್ಸಿನಲ್ಲಿ ಇನ್ನೂ ಹುಡುಕುತ್ತಿದ್ದೇನೆ;
ಹುಡುಕಿ-ಹುಡುಕಿ ಸೋತಿದ್ದೇನೆ;
ನೋವುಂಡಿದ್ದೇನೆ;
ಸೋಲು ಮಾತ್ರ ಒಪ್ಪಿಕೊಳ್ಳುವುದಿಲ್ಲ;
ನನ್ನ ಅವರು ಒಪ್ಪಿಕೊಂಡಿಲ್ಲ ,ಒಪ್ಪಿಕೊಳ್ಳುವುದಿಲ್ಲ ತಿಳಿದಿದ್ದೇನೆ;
ಆದರೂ ನಾನು ಅವರ ಬಲ್ಲೆ;
ನನ್ನ ಮನಸ್ಸು ಆಶಾವಾದಿಯಾಗಿದೆ;
ಅವರು ನನ್ನ ಗೆಳೆಯರು;
ಅವರು ನನ್ನ ಗೆಳೆಯರು;

Friday, October 21, 2011

ಮರೆಯಾದ ಚೇತನ

ಒಂದು ಚೈತನ್ಯದ ಚಿಲುಮೆಯೊಂದು ನಮ್ಮನ್ನು ಅಗಲಿತು
ಮನದ ಮೊಲೆಯಲ್ಲಿ ನೂರು ನೋವಿನ ಜ್ವಾಲೆಯ ಹುಟ್ಟುಹಾಕಿತು
ಏಕೆ ಮರೆಯಾದೆ ಓ ಚೇತನವೇ?
ನಮ್ಮನ್ನು ಅಗಲಿದೆ ಏಕೆ ಚೇತನವೇ?
ಸದಾ ನಗುಮುಖ, ಚೈತನ್ಯದ ಚಿಲುಮೆ
ಹಾಸ್ಯ,ತುಟಿಯಲ್ಲಿ ಸದಾ ನಗುವಿನ ಲಾಸ್ಯ
ಪ್ರೇರಕ ಶಕ್ತಿ,ಮನದಲ್ಲಿ ಪ್ರಶಾಂತತೆ;
ಇಂದು ಮರೆಯಾಯಿತೇಕೆ?
ಓ ಚೇತನವೇ! ಓ ಆತ್ಮಶಕ್ತಿಯೇ!
ನೀನು ನಮ್ಮಲ್ಲಿ ನೆಲೆಗೊಳ್ಳು ಎಂದೆಂದಿಗೂ
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

Wednesday, October 19, 2011

ಹೊಸತನದ ಹುಡುಕಾಟ

ಬೇಕು ಬೇಕುಗಳ ಸಂತೆ ಈ ಬದುಕು
ಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕು
ಯಾವುದಕ್ಕೂ ಕೊರತೆಯಿಲ್ಲ ಇಲ್ಲಿ
ಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿ
ಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂ
ಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿ
ಹಿಂದೆ ಸ್ವರ್ಗ,ಮೋಕ್ಷದ ಗುರಿಯಿತ್ತಿಲ್ಲಿ
ಇಂದು ಸ್ವರ್ಗ,ಮೋಕ್ಷಗಳ ಮಾತೆಲ್ಲಿ?
ತ್ಯಾಗ.ಭಕ್ತಿಗಳು ಸ್ವಾರ್ಥ ಸಾಧನೆಯಲ್ಲಿ ನುಲುಗಿದೆಯಿಲ್ಲಿ
ಮುಕ್ತಿ-ಸಾಧನೆಗಳು ದಿಕ್ಕುಪಾಲಾಗಿವೆ ಇಲ್ಲಿ
ಹಾಸಿಗೆಯಿದ್ದಷ್ಟು ಕಾಲುಚಾಚು ಎನ್ನುವುದು ನಗೆಪಾಟಲು ಇಲ್ಲಿ
ಸಿಕ್ಕಿದ್ದು-ಸಿಗದಿದ್ದು ಕೈಗೆಟುಕಿಸಿಕೊಳ್ಳುವ ತಾಕತ್ತು ಎಲ್ಲರಿಗಿದೆ ಇಲ್ಲಿ.
ಬುದ್ಧನ ಆಸೆಯೇ ದುಃಖಕ್ಕೆ ಮೊಲವೆನ್ನುವುದು ಹಳತಾಗಿದೆ
ಆಸೆಯೇ ಹೊಸತನದ ಹುಡುಕಾಟಕ್ಕೆ ದಾರಿಯಾಗಿದೆ ಇಂದಿಲ್ಲಿ.

Tuesday, October 18, 2011

ಸೆರೆವಾಸ

ಕಡೆಗೂ ಹೊರಟರು ಒಬ್ಬೊಬ್ಬರಾಗಿ
ಸೆರೆಮನೆ ಕಡೆಗೆ ಲಜ್ಜೆ ಬಿಟ್ಟು
ಕೆಲವರಿಗೆ ಸಂತೋಷ, ದುಗುಡ
ಮತ್ತೆ ಕೆಲವರಿಗೆ ಚಿಂತೆ
ಬಚ್ಚಿಟ್ಟ ಕಂತೆ ಕಂತೆ ಹಗರಣಗಳು
ಜನತೆಯ ಮುಂದೆ ಬತ್ತಲಾಗಿವೆ
ಮೊರು ಬಿಟ್ಟವರಿಗೆ ಈಗ ಕಾದಿದೆ
ಸೆರಮನೆಯ ಭಯ
ಹೋದ ಮೇಲೂ ಹೊರಬರಲು
ನಡೆಯುವುದು ಹಲವು ನಾಟಕಗಳು
ಯಾರ ನಾಟಕವೂ ನಡೆಯುವುದಿಲ್ಲ
ಎಲ್ಲರೂ ಸಲ್ಲಬೇಕು ಇಲ್ಲಿಗೆ (ಸೆರೆಮನೆಗೆ)
ಇಂದಲ್ಲ, ನಾಳೆ
ಸಮಯ ಕಾಯುತಿದೆ (ಬಡ ಜನರ ಶಾಪ)
ಎಲ್ಲರ ಮೇಲೂ ಮುಯ್ಯಿತೀರಿಸಿಕೊಳ್ಳಲು
ಬಿಡುವುದಿಲ್ಲ ಯಾರನ್ನೂ
ಸರತಿಯಂತೆ ಎಲ್ಲರೂ ಶರಣಾಗಲೇಬೇಕು.

Saturday, October 15, 2011

ಕೋಳಿ ಜಗಳ

ಇಲ್ಲಿ ಎಲ್ಲವೂ ಗೊಂದಲ
ಮಾತನಾಡುವುದು ಒಂದು
ಮಾಡುವುದು ಇನ್ನೊಂದು
ನಮ್ಮ ಕಣ್ಣಿಗೇ ಕಾಮಾಲೆ
ಅವನ ಕಣ್ಣಿಗೆ ಮೇಡ್ರಾಸ್ ಐ

ಅವ ಮಾನವ ದ್ವೇಷಿ
ಇವ ಮಾನವ ಪ್ರೇಮಿ
ಅವನ ಬರಹ ಮಾನವತಾ ವಾದಿ
ಇವನ ಬರಹ ಜೀವ ವಿರೋಧಿ
ಅವನಿಗೆ ಇವನ ಕಂಡರಾಗದು
ಇವನಿಗೆ ಅವನ ಕಂಡರಾಗದು

ಅವನ ಯೋಗ್ಯತೆ ಇವನೇ ನಿರ್ಧರಿಸುತ್ತಾನೆ
ಅವನ ಹಣೆಬರಹ ಬರೆಯುವ ಬ್ರಹ್ಮ ಇವನೇ
ಪ್ರಶಸ್ತಿಗಳಿಗೆ ಇನ್ನಿಲ್ಲದ ಲಾಬಿ
ಎಲ್ಲರೂ ಲಾಬಿಕೋರರೇ,ಲಜ್ಜೆಗೆಟ್ಟವರು

ನಮಗೋ ಅವರಿವರ ಜಗಳ
entratainment ,ಸಮಯ ಕೊಲ್ಲಲು
ಪ್ರತಿದಿನ ಕಾಯುತ್ತೇವೆ ಪತ್ರಿಕೆಗೆ
ಓದಿ ನಲಿಯಲು ಅವರಿವರ ಕೋಳಿ ಜಗಳ
ನಾಳೆಗಾಗಿ ಕಾಯುತ್ತೇವೆ ಹೊಸತನಕ್ಕಾಗಿ
ಹೊಸ ಕೋಳಿ ಜಗಳಕ್ಕಾಗಿ

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...