ಬಯಕೆ ನೂರು ದಾರಿ ಕಾಣದೆ
ಎಲ್ಲಾ ಕಡೆಗೂ ಹರಡಿದೆ
ಬಯಕೆ ನೂರು ತಣಿಯದೇ
ಮನದಲ್ಲಿ ಸುಮ್ಮನೆ ನರಳಿದೆ\\
ಯಾವ ತಂತಿ ಮೀಟಲಿ?
ಯಾವ ನಾದಕೆ ಸೋಲಲಿ?
ಬಯಕೆ ತಂತಿಯ ಮೀಟಿದೆ
ನೂರು ನಾದಗಳು ಹೊಮ್ಮಿ ಹೃದಯ ಮೃದಂಗವನೆ ನುಡಿಸಿದೆ \\
ಯಾವ ರಾಗಕೆ? ಯಾವ ತಾಳಕೆ?
ಕುಣಿಯಬೇಕೆಂದು ತಿಳಿಯದಾಗಿದೆ
ಭಾವ ರಾಗಕೆ ,ಹೃದಯ ತಾಳಕೆ
ಮನಸು ತನ್ಮಯತೆಯಲಿ ನಲಿದಿದೆ\\
ನೂರು ಭಾವಗಳು
ನೂರು ರಾಗಗಳು
ನನ್ನ ಕಂಡು ಅಣಕಿಸಿ
ಮನದಲಿ ಕೋಲಾಹಲವನೇ ಎಬ್ಬಿಸಿದೆ\\
Saturday, July 24, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
Nagendra
ReplyDeleteNice one!!!by chance if i get a chance i vil share my poems too.............
ಸಪ್ನ ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ReplyDelete