Wednesday, September 19, 2012

ಹಬ್ಬಗಳೂ ಬರಲಿ,ಮನವು ಬಾಡದಿರಲಿ.........


ಅದೇ ಶುಭಾಷಯಗಳು
ಅದೇ ಹಾಡು, ಅದೇ ರಾಗ;
ಹಬ್ಬಗಳು ಒಂದಾದ ಮೇಲೆ ಒಂದು ದಾಳಿಯಿಡುತ್ತಿವೆ;
ಶ್ರಾವಣ ಬಂದನೆಂದರೆ
ಹಬ್ಬಗಳಿಗೆ ಮುನ್ನುಡಿಯಿಟ್ಟಂತೆ;
ಆಷಾಡ ಅಮಾವಾಸ್ಯೆಯಿಂದಲೇ
ಮನ-ಮನಗಳಲ್ಲಿ ಹಬ್ಬಗಳ ಸಾಲುಸಾಲು;
ಏರಿದ ಬೆಲೆಗಳ ನಾಡಲ್ಲಿ
ಎಲ್ಲವೂ ಕಷ್ಟವೇ!
ನಾಡಿನ ದೊರೆಗಳು ಮಾತ್ರ
ನೆಮ್ಮದಿಯ ಉಸಿರುಬಿಡುತ್ತಾರೆ
ಏಕೆಂದರೆ ಅವರ ಖರ್ಚು-ವೆಚ್ಚಗಳನ್ನು
ಭರಿಸುವವ ಜನ ಸಾಮಾನ್ಯನೇ!
ಅವರಿಗೆ ಎಲ್ಲವೂ ಉಚಿತ
ಜೊತೆಗೆ ಮಾಮೂಲು ಪ್ರತಿಯೊಂದು ಯೋಜನೆ ಜಾರಿಗೊಳಿಸಿದಾಗಲೆಲ್ಲಾ.....
ತಲೆತಲಾಂತರಗಳಿಗೆ ಇವರೇ ಕೂಡಿಡುತ್ತಾರೆ
ಬಡವರ ಕಣ್ಣೀರಿನ ,ಬೆವರಿನ ಹನಿಯಿಂದ
ಸಾಯುವವನು ಸಾಯುತ್ತಲ್ಲೇ ಇದ್ದಾನೆ
ಮಜ ಉಡಾಯಿಸುವವ ಉಡಾಯಿಸುತ್ತಲೇ ಇದ್ದಾನೆ
ಎಲ್ಲವೂ ಅಯೋಮಯ
ನಾವು ಮಾತ್ರ ಎಲ್ಲವನ್ನೂ ಮರೆಯುತ್ತೇವೆ
ಹಬ್ಬಗಳು ಬಂತೆಂದರೆ ಖುಷಿ
ತೂತಾದ ಜೋಬಿಗೆ ಮತ್ತೊಂದು ತೂತು ಬಿದ್ದರೆ ವ್ಯತ್ಯಾಸ ಏನೂ ಇರದು
ಖಾಲಿಯಾಗಲಿ ಬಿಡಿ;
ನಾಳೆ ನಮಗಾಗಿಯೇ ಇದೆ;
ಮೈಯಲ್ಲಿ ಶಕ್ತಿ ಇದೆ;
ಸಾವು ಬರುವವರೆಗೂ ದುಡಿಯುವ ತವಕವಿದೆ
ಮನಸು ಮಾತ್ರ ಮುರುಟದಿರಲಿ
ಎಂಬುದೇ ನಮ್ಮೆಲ್ಲರ ಪ್ರಾರ್ಥನೆ;
ಹಬ್ಬಗಳೂ ಬರಲಿ
ಮನವು ಬಾಡದಿರಲಿ.........

Wednesday, September 12, 2012

ಬಣ್ಣ


ನಾನು ಹುಟ್ಟಿದಾಗ ನನ್ನ ಬಣ್ಣ ಕಪ್ಪು;
ಬೆಳೆದು ದೊಡ್ಡವನಾದಾಗ ಕಪ್ಪು;
ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿದಾಗ ನನ್ನ ಬಣ್ಣ ಕಪ್ಪು;
ನಾನು ಆತಂಕದಲ್ಲಿದ್ದಾಗ ಕಪ್ಪು;
ನಾನು ಅನಾರೋಗ್ಯದಿಂದ ನರಳಿದಾಗ ನನ್ನ ಬಣ್ಣ ಕಪ್ಪು;
ನಾನು ಸತ್ತಾಗಲೂ ನನ್ನ ಬಣ್ಣ ಕಪ್ಪು;
ನಾನು ಯಾವಾಗಲೂ ಕಪ್ಪು;

ನನ್ನ ಬಿಳಿಯ ಗೆಳೆಯರೇ!
ನೀವು ಹುಟ್ಟಿದಾಗ ನಿಮ್ಮ ಬಣ್ಣ ಗುಲಾಬಿ;
ನೀವು ಬೆಳೆದು ನಿಂತಾಗ ನಿಮ್ಮ ಬಣ್ಣ ಬಿಳಿ;
ನೀವು ಸೂರ್ಯನಿಗೆ ಮೈಯ್ಯೊಡ್ಡಿದಾಗ ಕೆಂಪು;
ತಣ್ಣನೆಯ ಸಮಯದಲ್ಲಿ ನೀಲಿ;
ಗಾಬರಿಯಾದಾಗ ಹಳದಿ;
ಅನಾರೋಗ್ಯದಿಂದಾಗಿ ನರಳುವಾಗ ಹಸಿರು;
ಸತ್ತಾಗ ಕಂದು;
 ಆದರೂ ನನ್ನನ್ನು ಕಂಡಾಗ ಬಣ್ಣದವನು ಎನ್ನುತ್ತೀರಿ!


ಈ ಕವಿತೆ, ಬರೆದಿದ್ದು ಆಫ್ರೀಕಾದ ಮಗು. ೨೦೦೫ ರ ಅತ್ಯುತ್ತಮ ಕವಿತೆ ಎಂದು ಹೆಸರುಮಾಡಿದೆ.
ಚಿತ್ರಕೃಪೆ: Facebook.

ನಾನು ಅರಿತೆ



ನಾನು ಅರಿತೆ,
ನಾನು ಏಕಾಂಗಿಯಾಗಿಯೇ ಬಂದೆ ಹಾಗು ಏಕಾಂಗಿಯಾಗಿಯೇ ಹೋಗಬೇಕು.

ನಾನು ಅರಿತೆ,
ಕೆಲವೇ ಕೆಲವರು ನಿನ್ನ ಜೊತೆ ಇರುತ್ತಾರೆ,
ನಿನ್ನ ಅವಶ್ಯಕತೆ ಇರುವಾಗ ಮಾತ್ರ,ಇಲ್ಲವಾದಲ್ಲಿ ಇಲ್ಲ.

ನಾನು ಅರಿತೆ,
ಯಾರಿಗಾಗಿ ನೀನು ತುಂಬಾ ಪರಿತಪಿಸಿ ಕಾಳಜಿವಹಿಸುವೆಯೋ
ಅವರೇ ನಿನಗೆ ತುಂಬಾ ನೋವು ಕೊಡುವರು ಹಾಗು ನಿನ್ನನ್ನು ಬೈಯುವರು.

ಅಂತಿಮವಾಗಿ
ನಾನು ಅರಿತೆ,
ಪ್ರೀತಿಸು ಕೆಲವರನ್ನು ಆದರೆ  ಮರೆಯದೆ
ಸ್ವಲ್ಪ ಪ್ರೀತಿ ನಿನಗಾಗಿ ಉಳಿಸಿಕೋ.


ಚಿತ್ರ ಕೃಪೆ: Facebook.

Friday, September 7, 2012

ತಪ್ಪು-ಒಪ್ಪು


ಎಂತಹ ದಿನಗಳನ್ನು ದೂಡಿದ್ದೇವೆ
ಎಲ್ಲಾ ಕಾಲವನ್ನೂ ಹಾಳುಮಾಡಿದ್ದೇವೆ
ಕೊರಗಿ ಕೊರಗಿ ಕಾಲ ಕಳೆಯುತ್ತಿದ್ದೇವೆ
ತಲೆಯಲ್ಲಿ ಬರೀ ಯೋಚನೆಗಳು
ಕಳೆದ ದಿನಗಳದ್ದು..
ಕಳೆದ ಸಿಹಿ-ಕಹಿ ದಿನಗಳದ್ದು..
ಮುಂದೆ ಪ್ರಶ್ನೆ ಇದೆ.
ಕೊರಗು ಇದೆ.
ನಾವು ಕೊರಗುತ್ತಲೇ ಇದ್ದೇವೆ
ಕೈಗೆ ಬರುವ ಹಣ ಕ್ಷಣದಲ್ಲೇ ಮಾಯವಾಗುದ ಕಂಡು ಕಂಗಾಲಾಗಿದ್ದೇವೆ.
ಏರುವ ಬೆಲೆಗಳ ಕಂಡು ಹೈರಾಣಾಗಿದ್ದೇವೆ
ನಮ್ಮನ್ನು ಆಳುವವರು ಮಾತ್ರ ಕೊಳ್ಳೆ ಹೊಡೆಯುತ್ತಲೇ ಇದ್ದಾರೆ
ನಮ್ಮ ಹಣವನ್ನೆಲ್ಲಾ ದೋಚುವುದ ಕಂಡೂ ಸುಮ್ಮನಿದ್ದೇವೆ
ಮೈಮೇಲೆ ಬೆಲೆಗಳ ರಾಶಿ-ರಾಶಿ ಹೇರಿಸಿಕೊಳ್ಳುತ್ತಿದ್ದೇವೆ
ನಾವು ಮಾತ್ರ ಬೆರಗಾಗಿದ್ದೇವೆ,ಚಕಿತರಾಗಿದ್ದೇವೆ ಏನೂ ಮಾಡಲಾಗದೆ
ನಮ್ಮ ಕೈಯಲ್ಲಿ ಏನಾಗುತ್ತೆ?
ಐದು ವರ್ಷಕ್ಕೊಮ್ಮೆ ಮತ್ತೆ ಮತ್ತೆ ಎಡವುತ್ತೇವೆ
ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಮೊರ್ಖರಾಗಿದ್ದೇವೆ
ದಾರಿಕಾಣದೆ ಬೇಸತ್ತಿದ್ದೇವೆ
ಹಿಡಿಶಾಪವನ್ನಲ್ಲದೆ ಇನ್ನು ಏನನ್ನೂ ಮಾಡಲಾಗದ ಅಸಹಾಯರಾಗಿದ್ದೇವೆ
ಗುಲಾಮರಾಗಿದ್ದೇವೆ.

Sunday, April 1, 2012

ಶ್ರೀರಾಮ ನವಮಿ


ನಿನ್ನನ್ನು ನೆನೆಯುತ್ತೇವೆ ದಿನವೂ ಮರೆಯದೆ
ಆದರೂ ನಿನ್ನ ಆದರ್ಶವ ಹತ್ತಿರ ಬರಲು ಬಿಡುವುದಿಲ್ಲ ಏಕೋ?
ನಿನ್ನ ಪ್ರೀತಿಸುವವರಿದ್ದಾರೆ;
ಪೂಜಿಸುವವರಿದ್ದಾರೆ;
ದ್ವೇಷಿಸುವವರಿದ್ದಾರೆ;
ತೆಗಳುವವರಿದ್ದಾರೆ;
ಆದರೂ ನೀನು ನಿತ್ಯ ಸತ್ಯ;
ನಿನ್ನ ಆದರ್ಶ ಸ್ತುತ್ಯಾರ್ಹ;
ವಸಂತ ಋತು;
ಚೈತ್ರ ಮಾಸ;
ಶುಕ್ಲ ಪಕ್ಷ;
ನವಮಿ ತಿಥಿ;
ನಿನ್ನ ತಪ್ಪದೇ ನೆನೆಯುತ್ತೇವೆ.
ಶತ-ಶತಮಾನಗಳು ಕಳೆದರೂ;
ನಾಗರೀಕತೆಗಳು ಮಣ್ಣೂಗೂಡಿದರೂ;
ಕೆಸರೆರಚುವವರು ಎರಚುತ್ತಲ್ಲೇ ಇದ್ದಾರೆ;
ಆರಾಧಿಸುವವರು ಆರಾಧಿಸುತ್ತಲೇ ಇದ್ದಾರೆ;
ಇಬ್ಬರಲ್ಲಿಯೂ ಪ್ರೀತಿ ಇದೆ;
ಅದಕ್ಕೆ ಅಂತ್ಯವೂ ಇಲ್ಲ, ಆದಿಯೂ ಇಲ್ಲ;
ಇದು ನಿರಂತರ, ಅನಂತ;
ನೀನು ನಿತ್ಯ ಸತ್ಯ;
ನಿನ್ನ ಆದರ್ಶ ಸ್ತುತ್ಯಾರ್ಹ;
ಬಿಸಿಲ ಬೇಗೆಯಲ್ಲಿ ನಿನ್ನನ್ನು ನೆನೆಯುತ್ತಾ;
ಪಾನಕ,ಕೋಸಂಬರಿಯ ಸವಿ ಸವಿಯುತ್ತಾ;
ನೆನೆಯುತ್ತೇವೆ,ಪ್ರಾರ್ಥಿಸುತ್ತೇವೆ;
ಈ ಜಗವು ರಾಮರಾಜ್ಯವಾಗಲಿ;

ನಿನ್ನನ್ನು ನೆನೆಯುತ್ತೇವೆ ದಿನವೂ ಮರೆಯದೆ
ಆದರೂ ನಿನ್ನ ಆದರ್ಶವ ಹತ್ತಿರ ಬರಲು ಬಿಡುವುದಿಲ್ಲ ಏಕೋ?


Thursday, March 22, 2012

ಶ್ರೀ ನಂದನ ನಿನಗೆ ಸ್ವಾಗತ


ಬಂತಿದೋ ಹೊಸ ವರುಷ
ತರುತಿದೆ ಹೊನಲ ಹರುಷ
ಬಾಳಬಂಡಿಯ ನೊಗವ ನೂಕುತ್ತಾ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಹೊಸ ವರುಷವೆಂದು ನಾವ್ ಕರೆಯುವೆವು
ಹರುಷ ಪಟ್ಟು ನೋವ್ ಮರೆಯುವೆವು
ಎಲ್ಲರೂ ಕೊಡಿಕೊಂಡು
ರೆಕ್ಕೆ-ಪುಕ್ಕ ಕಟ್ಟಿಕೊಂಡು ನಾವ್ ನಲಿಯುವ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಜಗಕ್ಕೆಲ್ಲಾ ಹಸುರ ಹೊದಿಕೆ
ಮನದ ಕೊಳೆಯ ತೊಳೆಯೆ
ನಮಗಂದೇ ಹೊಸಹಾದಿಗೆ ನಾಂಧಿ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ವಸಂತನು ಚೈತ್ರೆಯ ಜೊತೆಗೂಡಿ
ಮಾವು-ಬೇವು ಎಲ್ಲವನ್ನೂ ತಂದಿಹರು ಬಾಳಿಗೆ
ಕೋಗಿಲೆ ತಾನ್ ಹರುಷದಿ ಹಾಡಿ ನೋವ ಮರೆಸಿದೆ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಮಾವು-ಬೇವು;
ಬೇವು-ಬೆಲ್ಲ;
ನೋವು-ನಲಿವು
ಬಾಳಬಂಡಿಯ ಪಯಣದಲಿ
ಸಮಹಿತದಲಿ ಬಾಳಿಗೆ ಬರಲಿ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಸಮರಸ ಜೀವನದಲಿ ಇರಲಿ
ಏರು-ಪೇರು ಸಮತ್ವ ಸಾಧಿಸುವ ಬಲ ಮನಸಿಗೆ ಬರಲಿ
ಮನಸು-ಮನಸು ಸೇರಿ ನಲಿದು ಲೋಕವನೆ ’ನಂದನ’ ಮಾಡಲಿ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

Thursday, March 8, 2012

ಹೆಣ್ಣು-ಶಕ್ತಿ;




ಹೆಣ್ಣು ತಾಯಿ;
ಹೆಣ್ಣು ಅಕ್ಕ;
ಹೆಣ್ಣು-ತಂಗಿ;
ಹೆಣ್ಣು- ಸಂಗಾತಿ;
ಹೆಣ್ಣು- ಗೆಳತಿ;
ಹೆಣ್ಣು-ದೇಶ;
ಹೆಣ್ಣು-ಸಂಸ್ಕೃತಿ;
ಹೆಣ್ಣು-ಭಾಷೆ;
ಹೆಣ್ಣು-ಭೂಮಿ;
ಹೆಣ್ಣು-ನದಿ;
ಹೆಣ್ಣು-ಕುಟುಂಬದ ಕಣ್ಣು;
ಹೆಣ್ಣು-ಶಕ್ತಿ;
ಹೆಣ್ಣು ಈ ಪ್ರಪಂಚ;

ಹೆಣ್ಣು ಏನಲ್ಲ?; 
ಹೆಣ್ಣು ಏನಿಲ್ಲ?;
ಮನದ ಶಕ್ತಿ;
ಹೆಣ್ಣಿಗೆ ಆತ್ಮೀಯ ನಮನಗಳು.

ಪ್ರೇರಣೆ:"A Women" by otteri selvakumar 

Wednesday, March 7, 2012

ದ್ವೇಷದ ಬಣ್ಣ ಯಾವುದು?


ಶಾಂತಿಯ ಸಂಕೇತಕ್ಕೆ ಬಣ್ಣದ ಗುರುತಿದೆ;
ತ್ಯಾಗದ ಸಂಕೇತಕ್ಕೂ ಬಣ್ಣವಿದೆ;
ಸಂವೃದ್ಧಿಗೂ ಬಣ್ಣವಿದೆ;
ಈ ಜಗದಲ್ಲಿ ಎಲ್ಲವೂ ಸಾಂಕೇತಿಕವೇ!
ಪ್ರಕೃತಿಯ ಭಾಷೆ- ಬಣ್ಣ
ಪ್ರೀತಿಯ ಬಣ್ಣ ಯಾವುದು?
ಪ್ರೀತಿಸಿದವರಿಗೆ ಗೊತ್ತು!
ಧರ್ಮಗಳ ಬಣ್ಣ ಯಾವುದು?
ಒಂದೊಂದು ಧರ್ಮದವರಿಗೆ ಒಂದೊಂದು ಬಣ್ಣ
ಕೇಸರಿ,ಬಿಳಿ,ಹಸಿರು......
ರಾಷ್ಟ್ರಗಳ ಭಾವುಟಗಳ ಬಣ್ಣ ವರ್ಣರಂಜಿತ
ಪಕ್ಷ-ಪಕ್ಷಗಳ ಬಣ್ಣ ಬೇರೆ ಬೇರೆ
ಇನ್ನು ರಾಜಕಾರಣಿಗಳ ಬಣ್ಣ ಯಾರಿಗೆ ತಾನೇ ಗೊತ್ತಿಲ್ಲ?
ಕಾಮನ ಬಿಲ್ಲಿನ ಬಣ್ಣ ಎಲ್ಲರಿಗೂ ಇಷ್ಟ
ಮನುಷ್ಯರ ಬಣ್ಣ ಹಲವಾರು
ಅದರಲ್ಲೂ ಮೇಲು-ಕೀಳು, ಭೇದ-ಭಾವ;
ಮನುಷ್ಯ-ಮನುಷ್ಯರಲ್ಲಿ ಹರಿಯುವ ರಕ್ತದ ಬಣ್ಣವೂ ತಿಳಿದಿದೆ
ಈ ಪ್ರಕೃತಿಯೇ ಬಣ್ಣಗಳ ಮಾಯಾಜಾಲ
ಎಲ್ಲರಿಗೂ ಬಣ್ಣಗಳೆಂದರೆ ಇಷ್ಟ
ಆದರೂ ಮನುಷ್ಯ-ಮನುಷ್ಯರ ನಡುವೆ ಇರುವ ದ್ವೇಷದ ಬಣ್ಣ ಯಾವುದು?
ಬಣ್ಣವಿಲ್ಲದ ಈ ದ್ವೇಷಯಾರಿಗೂ ಬೇಡ;
ಬಣ್ಣ-ಬಣ್ಣಗಳ ಈ ಬದುಕು ಸುಂದರ;
ನಮ್ಮ ಬದುಕು ಸುಂದರವಾಗಲಿ;
ಹೋಲಿ ಹಬ್ಬ ಎಲ್ಲರ ಜೀವನದಲ್ಲೂ ಹೊಸತನ ತುಂಬಲಿ.

ಮನದ ಪ್ರಶ್ನೆ




ಒಬ್ಬನೇ ಹೊರಟಿಹೆನು
ದೂರದ ಕಡೆಗೆ;
ಕಾಣದೇ ಹೊರಟಿಹೆನು
ಗುರಿಯ ಬಳಿಗೆ;

ಜೊತೆಗಿಲ್ಲ ಯಾರೂ!
ಸಂಗಾತಿ;
ತಂದೆ-ತಾಯಿ;
ಅಣ್ಣ-ತಮ್ಮ;
ಅಕ್ಕ-ತಂಗಿ;
ಬಂಧು-ಬಳಗ;
ಸ್ನೇಹಿತರು......

ಮನದಲ್ಲಿ ಎಲ್ಲರೂ ಇಹರು
ಎಲ್ಲರ ಹಾರೈಕೆಗಳೂ
ನಲ್ಮೆಯ ಹಿತವಚನಗಳೂ
ಎಲ್ಲವೂ ಜೊತೆಗಿರಲು
ಆದದ್ದಾಗಲಿ
ಆಗುವುದೆಲ್ಲಾ ಓಳ್ಳೆಯದೇ ಆಗಲಿದೆ
ಎಂಬ ಭಾವ ಮನದಲ್ಲಿ ಅಲೆ ಎದ್ದಿದೆ;
ಗುರಿಯ ತಲುಪುವೆ ಖಾತರಿಯಿದೆ;
ಬಳಿಕ ಏನು? ಪ್ರಶ್ನೆ ಮನದಲಿ ಕಾಡಿದೆ;

Monday, March 5, 2012

ಜೀವನಶಾಲೆ


ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ
ನಮ್ಮ ಬದುಕಿನ ಯಾತ್ರೆಗೆ;
ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ
ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ;

ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ;
ಮರೆಯಿತ್ತಿದ್ದೇವೆ ತತ್ವಜ್ಯಾನದ ಬೀಜ-ಮಂತ್ರ;
ಅರಿವನ್ನು ಸ್ವೀಕರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ
ಇಷ್ಟೇ ಜೀವನವೆಂಬ ಉದಾಸೀನ ಮನದಲ್ಲಿ ಮನೆಮಾಡದೆ;

ಜೀವನ ಬರಭೂರ ರಸಭರಿತ
ಅನುಭವಗಳ ಜೀವನ ಪಾಠಶಾಲೆ
ಅಳವಡಿಸಿಕೊಳ್ಳುವವನ ಜೀವನ ಪಾಕಶಾಲೆ
ಎತ್ತೆರೆತ್ತರಕ್ಕೆ ಬೆಳೆಯಬೇಕು ಸಾರ್ಥಕವಾಗಿಸಿಕೊಳ್ಳಬೇಕು ಜೀವನಶಾಲೆ;

Saturday, March 3, 2012

ಒಂದು ಸಂಜೆಯ ಟ್ರೈನು ಪ್ರಯಾಣ


ಸುಮ್ಮನೆ ಕುಳಿತಿದ್ದೇನೆ
ಕಿಟಕಿಯ ಹೊರ ಪ್ರಪಂಚವನ್ನು ದಿಟ್ಟಿಸುತ್ತಾ....
ಗಿರಿ-ಕಂದರ;
ಬೆಟ್ಟ-ಗುಡ್ಡ;
ಹಳ್ಳಿ-ಬಯಲು;
ಕೊಳ-ನದಿ, ಸೇತುವೆ;
ಒಂದಾದ ಮೇಲೊಂದರಂತೆ
ಕ್ಷಣದಲ್ಲಿ ಬದಲಾಗುವ ಪ್ರಕೃತಿಯ ಚಿತ್ರಗಳ ಸವಿಯುತ್ತಾ...
ಪ್ರಕೃತಿಯ ವೈಚಿತ್ರ್ಯಕ್ಕೆ ಮನಸೋಲುತ್ತಾ....

ಟೀ-ಚಾಯ್,ಟೀ-ಚಾಯ್......
ಧ್ಯಾನಕ್ಕೆ ಧಕ್ಕೆ ತರುವಂತಾ ಕೂಗು,
ಗೊರಕೆ ಸದ್ದು ಸಂಜೆ ಕತ್ತಲಿನಲ್ಲಿ ಸಿಹಿ ನಿದ್ದೆಯ ಮೊಹರು.
ಮಾತು-ಕಥೆ,ಧ್ಯಾನ,ನಿದ್ದೆ,ಮೌನ
ಎಲ್ಲವನ್ನೂ ಆಂತರ್ಯದೊಳರಗಿಸಿ ಮುನ್ನಡೆದಿದೆ ಈ ಬದುಕು;

ಒಂದು ನಿಲ್ದಾಣದಿಂದ ಮತ್ತೊಂದಕ್ಕೆ ನಿಲ್ಲದೇ ನಡೆದಿದೆ ಪಯಣ
ಸಂಜೆ, ಕತ್ತಲು-ಬೆಳಕಿನ ನಡುವೆ ನಡೆದಿದೆ ಘರ್ಷಣ
ಟ್ರೈನು ಮಾತ್ರ ಯಾವುದನ್ನೂ ಲಕ್ಕಿಸದೆ ಮುನ್ನಡೆಯುತ್ತಿದೆ ಘರ್ಜಿಸುತ್ತಾ ಘೋಷಣಾ....

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...