Wednesday, March 7, 2012

ಮನದ ಪ್ರಶ್ನೆ




ಒಬ್ಬನೇ ಹೊರಟಿಹೆನು
ದೂರದ ಕಡೆಗೆ;
ಕಾಣದೇ ಹೊರಟಿಹೆನು
ಗುರಿಯ ಬಳಿಗೆ;

ಜೊತೆಗಿಲ್ಲ ಯಾರೂ!
ಸಂಗಾತಿ;
ತಂದೆ-ತಾಯಿ;
ಅಣ್ಣ-ತಮ್ಮ;
ಅಕ್ಕ-ತಂಗಿ;
ಬಂಧು-ಬಳಗ;
ಸ್ನೇಹಿತರು......

ಮನದಲ್ಲಿ ಎಲ್ಲರೂ ಇಹರು
ಎಲ್ಲರ ಹಾರೈಕೆಗಳೂ
ನಲ್ಮೆಯ ಹಿತವಚನಗಳೂ
ಎಲ್ಲವೂ ಜೊತೆಗಿರಲು
ಆದದ್ದಾಗಲಿ
ಆಗುವುದೆಲ್ಲಾ ಓಳ್ಳೆಯದೇ ಆಗಲಿದೆ
ಎಂಬ ಭಾವ ಮನದಲ್ಲಿ ಅಲೆ ಎದ್ದಿದೆ;
ಗುರಿಯ ತಲುಪುವೆ ಖಾತರಿಯಿದೆ;
ಬಳಿಕ ಏನು? ಪ್ರಶ್ನೆ ಮನದಲಿ ಕಾಡಿದೆ;

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...