ಹಬ್ಬಗಳೂ ಬರಲಿ,ಮನವು ಬಾಡದಿರಲಿ.........


ಅದೇ ಶುಭಾಷಯಗಳು
ಅದೇ ಹಾಡು, ಅದೇ ರಾಗ;
ಹಬ್ಬಗಳು ಒಂದಾದ ಮೇಲೆ ಒಂದು ದಾಳಿಯಿಡುತ್ತಿವೆ;
ಶ್ರಾವಣ ಬಂದನೆಂದರೆ
ಹಬ್ಬಗಳಿಗೆ ಮುನ್ನುಡಿಯಿಟ್ಟಂತೆ;
ಆಷಾಡ ಅಮಾವಾಸ್ಯೆಯಿಂದಲೇ
ಮನ-ಮನಗಳಲ್ಲಿ ಹಬ್ಬಗಳ ಸಾಲುಸಾಲು;
ಏರಿದ ಬೆಲೆಗಳ ನಾಡಲ್ಲಿ
ಎಲ್ಲವೂ ಕಷ್ಟವೇ!
ನಾಡಿನ ದೊರೆಗಳು ಮಾತ್ರ
ನೆಮ್ಮದಿಯ ಉಸಿರುಬಿಡುತ್ತಾರೆ
ಏಕೆಂದರೆ ಅವರ ಖರ್ಚು-ವೆಚ್ಚಗಳನ್ನು
ಭರಿಸುವವ ಜನ ಸಾಮಾನ್ಯನೇ!
ಅವರಿಗೆ ಎಲ್ಲವೂ ಉಚಿತ
ಜೊತೆಗೆ ಮಾಮೂಲು ಪ್ರತಿಯೊಂದು ಯೋಜನೆ ಜಾರಿಗೊಳಿಸಿದಾಗಲೆಲ್ಲಾ.....
ತಲೆತಲಾಂತರಗಳಿಗೆ ಇವರೇ ಕೂಡಿಡುತ್ತಾರೆ
ಬಡವರ ಕಣ್ಣೀರಿನ ,ಬೆವರಿನ ಹನಿಯಿಂದ
ಸಾಯುವವನು ಸಾಯುತ್ತಲ್ಲೇ ಇದ್ದಾನೆ
ಮಜ ಉಡಾಯಿಸುವವ ಉಡಾಯಿಸುತ್ತಲೇ ಇದ್ದಾನೆ
ಎಲ್ಲವೂ ಅಯೋಮಯ
ನಾವು ಮಾತ್ರ ಎಲ್ಲವನ್ನೂ ಮರೆಯುತ್ತೇವೆ
ಹಬ್ಬಗಳು ಬಂತೆಂದರೆ ಖುಷಿ
ತೂತಾದ ಜೋಬಿಗೆ ಮತ್ತೊಂದು ತೂತು ಬಿದ್ದರೆ ವ್ಯತ್ಯಾಸ ಏನೂ ಇರದು
ಖಾಲಿಯಾಗಲಿ ಬಿಡಿ;
ನಾಳೆ ನಮಗಾಗಿಯೇ ಇದೆ;
ಮೈಯಲ್ಲಿ ಶಕ್ತಿ ಇದೆ;
ಸಾವು ಬರುವವರೆಗೂ ದುಡಿಯುವ ತವಕವಿದೆ
ಮನಸು ಮಾತ್ರ ಮುರುಟದಿರಲಿ
ಎಂಬುದೇ ನಮ್ಮೆಲ್ಲರ ಪ್ರಾರ್ಥನೆ;
ಹಬ್ಬಗಳೂ ಬರಲಿ
ಮನವು ಬಾಡದಿರಲಿ.........

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...