Sunday, March 8, 2026

ಹೊಸ ಪಯಣ

ವರುಷಗಳ ಪಯಣ ವ್ಯರ್ಥವಾಗಿದೆ,

ಗುರಿ ಇಲ್ಲ, ಗುರುವೂ ಇಲ್ಲ.

ಬಾಳಿನ ಪಯಣದ ಉದ್ದೇಶವೇನು?,

ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.


 ಗುರಿ ಇಲ್ಲದೆ ಮನ ಭ್ರಮೆಯಲ್ಲಿದೆ,

ನೊಣದಂತೆ ಮನ ಪರಿಭ್ರಮಿಸಿದೆ.

ಗುರು ಇಲ್ಲದೆ ಮನ ಸೊರಗಿದೆ,

ಜೀವನ ಕುರುಡಾಗಿದೆ ದಾರಿ ಕಾಣದೆ.

 

ತಿಮಿರಾಂಧಕಾರ ಕಳೆಯಲು ಬೇಕು,

ಜ್ಞಾನದ ಸಣ್ಣ ದೀವಿಗೆ ಹಚ್ಚಬೇಕು.

ಜೀವನದ ಗುರಿಯ ಸಾಕ್ಷಾತ್ಕಾರವಾಯಿತು,

ಬದಲಾಯಿತು ದಿಕ್ಕು ಹೊಸ ಪಯಣಕ್ಕೆ. 

No comments:

Post a Comment

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...