ವರುಷಗಳ ಪಯಣ ವ್ಯರ್ಥವಾಗಿದೆ,
ಗುರಿ ಇಲ್ಲ,
ಗುರುವೂ ಇಲ್ಲ.
ಬಾಳಿನ ಪಯಣದ
ಉದ್ದೇಶವೇನು?,
ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.
ನೊಣದಂತೆ
ಮನ ಪರಿಭ್ರಮಿಸಿದೆ.
ಗುರು ಇಲ್ಲದೆ
ಮನ ಸೊರಗಿದೆ,
ಜೀವನ ಕುರುಡಾಗಿದೆ
ದಾರಿ ಕಾಣದೆ.
ತಿಮಿರಾಂಧಕಾರ
ಕಳೆಯಲು ಬೇಕು,
ಜ್ಞಾನದ ಸಣ್ಣ
ದೀವಿಗೆ ಹಚ್ಚಬೇಕು.
ಜೀವನದ ಗುರಿಯ
ಸಾಕ್ಷಾತ್ಕಾರವಾಯಿತು,
ಬದಲಾಯಿತು
ದಿಕ್ಕು ಹೊಸ ಪಯಣಕ್ಕೆ.

No comments:
Post a Comment