Friday, March 13, 2026

ಪ್ರತಿದಿನದ ಬೆಳಕು

ನಿನ್ನೊಳಗೆ ಇದೆ ಅಖಂಡ ಬೆಳಕು,

ಅರಿತು ಕಂದೀಲ ಹಚ್ಚಬೇಕು.

ದೀಪವಿದೆ, ಬತ್ತಿಯಿದೆ ಮನಸ್ಸು ಬೇಕು,

ಜೀವನದ ಪ್ರತಿಹೆಜ್ಜೆಯ ಸೊಬಗ ಸವಿಯಬೇಕು.

 

ಭಯವ ಕಂಡು ಒಮ್ಮೆ ನಕ್ಕುಬಿಡು,

ಸೋಲು ಬಂದರೆ ನಮಿಸಿ ಪಾಠಕಲಿ.

ಪ್ರತಿದಿನದ ಚಿಕ್ಕ ಹೆಜ್ಜೆಗಳ ಇಡುತಿರು,

ಉಜ್ವಲ ಭವಿತವ್ಯದ ಗುರಿಯ ಸಾಧಿಸು.

 

ಸಂತೋಷ ನಾವಿಡುವ ಹೆಜ್ಜೆಗಳ ಸವಿ,

ಪ್ರತಿದಿನದ ಬೆಳವಣಿಗೆಯಲ್ಲಿದೆ ಅದರ ಮೂಲ.

ನಿನ್ನ ಬೆಳವಣಿಗೆಯ ಹೆಜ್ಜೆಗಳು ಆಗುವುದು,

ಪ್ರೇರಣೆ, ಉದಾಹರಣೆ ನಿನ್ನ ನೋಡುವವರಿಗೆ.

 

ಅರಿತು ಕೋ ನಿನ್ನ ಶಕ್ತಿಯ,

ಜಗವು ನಿನ್ನ ಕೈಯಲ್ಲಿ.

ಜೀವನದ ಜಯದ ಮಂತ್ರ,

ಪ್ರತಿದಿನದ ಹೆಜ್ಜೆಗಳಲ್ಲಿ.

No comments:

Post a Comment

ನಾವು ಚೇತನರು

 ಕತ್ತಿಯಿಂದ ತಿವಿದರು, ಬಂದೂಕು ಗುಂಡುಗಳಿಂದ ಸುಟ್ಟರು, ದೇವಸ್ಥಾನಗಳ ಲೂಟಿ ಮಾಡಿದರು, ನಮ್ಮವರ ಸಮಾಧಿಯ ಮೇಲೆ ಅವರ ವೈಭವ, ಕಾಲ ಎಲ್ಲವ ಮರೆಯಿಸಿದೆ, ಸೂರ್ಯ ಮತ್ತೆ ಸುಡುತ್...