Friday, November 29, 2019

ಹೋಗಬೇಡ ಗೆಳೆಯಾ

ಹೊರಟುಹೋದೆಯಾ ಮಾಧವ ಬಳಿಬಂದು ಹೋದುದೇಕೆ?
ಮನದಲಿ ಹಂಬಲ ತುಂಬಿದೆ ವಿರಹದಿ ಬಳಲಿಹೆನು
ಕೋಪದಿಂದೊಂದು ಮಾತಿಗೆ ಮುನಿಸಿಕೊಂಡೆಯಾ
ಬಳಲಿ ಬಳಲಿ ಬೆಂಡಾದವಳಿಗೆ ಉಪವಾಸ ವ್ರತವೇ?
ಬಲುದಿನದನಂತರ ಬಳಿಬಂದೀ ಶುಕ್ಲಪಕ್ಷದ ಚಂದಿರನಂತೆ
ತಾಪದಿ ಒರಟು ಪ್ರೀತಿಯಮಾತಿಗೆ ನೀ ನೊಂದೆಯಾ?
ಹೋಗಬೇಡ! ಹೋಗಬೇಡಾ! ಇನಿಯಾ ತಾಳೆನು ಈ ವಿರಹ
ಹೃದಯ ಸೋತಿದೆ ತನುವು ನಲುಗಿದೆ ನಿನ್ನ ನೋಡದೇ
ಹೋಗಬೇಡ ಗೆಳೆಯಾ ನನ್ನ ತೊರೆದು ಹೋಗಬೇಡ ಇನಿಯಾ...

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...