ಪ್ರತಿಯೊಂದು ಕರೆಯಲ್ಲೂ ಅದೇನೋ ಮುನಿಸು
ತಾಯೇ ಏಕಿಂತ ಮುನಿಸು ನಿನ್ನ ಮಕ್ಕಳ ಮೇಲೆ
ತಾಯಾಗುಣವಲ್ಲವೀ ಮುನಿಸು ಕಳವಳವಾಗಿದೆ
ತೊಟ್ಟು ಬಿಟ್ಟ ಬಾಣಗಳು ನಾವು ಬತ್ತಳಿಕೆಯಲ್ಲಿಲ್ಲ
ಜಗವನುದ್ಧರಿಸುವುದೋ? ಮುನಿಸತಣಿಸುವುದೋ?
ಮನವು ನೊಂದಿದೆ ನಿನ್ನ ಈ ಪರಿಯ ಕಂಡು
ಏಕೆ ತಾಯೇ ಮುನಿಸು? ನಾವು ಮಕ್ಕಳಲ್ಲವೇ?
ಪ್ರೀತಿಯ ವಾತ್ಸಲ್ಯದ ಅಮೃತವ ನೀಡುವುದಬಿಟ್ಟು
ದ್ವೇಷ ಅಸೂಯೆಯ ವಿಷವನ್ನೇಕೆವುಣ್ಣಿಸುತಿಹೆ ತಾಯೇ?
ನಿನ್ನ ಇಚ್ಛೆಯಂತಾಗಲಿ ನಾ ಸಿದ್ಧನಿಹೆನು ತಾಯೇ ।।
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment