ಎಲ್ಲಿ ಹೋದವೋ? ನನ್ನ ಕನಸುಗಳು
ಆಗಾಗ ಬಂದು ಮನವ ಕೆಡಿಸುವ ಹುನ್ನಾರಗಳು
ಬಹಳ ದಿನಗಳಾದವು ಮನಸು ಮುದುಡಿ
ನೀವು ಬರದೇ ಬೇಸರಿಸಿದೆ ಮನ, ಕಾತರಿಸಿದೆ
ಬಂದು ಹೋಗುವ ನೀವು ತರುವಿರಿ ಹೊಸತನವ
ಬನ್ನಿ,ಬನ್ನಿ ನನ್ನೆದೆಗೆ ಹೊನಲ ಹರಿಸ ಬನ್ನಿ....
ಕಾಣದ ಚೈತನ್ಯ ಮನದ ಮುಗಿಲಿಗೆ ತನ್ನಿ....
ಎಂದೂ ಬಾರನೆನ್ನದಿರಿ ಮನವು ಬಳಲುವುದು
ತಾರನೆನ್ನದಿರಿ ಕಠಿಣ ದಿನಗಳ ಎಣಿಸಲಾರೆನು ಬೇಗುದಿ
ಇಂದೋ !, ನಾಳೆಯೋ ಬಂದೇ ಬರುವಿರೆಂದು
ಕಾಯುತಿಹೆನು ಹಗಲು-ರಾತ್ರಿ ಎನ್ನದೇ....
ಬನ್ನಿ,ಬನ್ನಿ ಮರೆಯದೇ ಬಾಗಿಲ ತೆರೆದು ಕಾಯುತಿಹೆನು
ತಳಿರು ತೋರಣಗಳ ಕಟ್ಟಿ ಸಿಂಗರಿಸಿ
ವರುಷ ವರುಷಗಳ ಕೊಳೆಯ ತೊಳೆದು ನಿಂತಿಹೆನು
ಬನ್ನಿ,ಬನ್ನಿ ನನ್ನ ಕನಸುಗಳೇ
ತನ್ನಿ,ತನ್ನಿ ಹೊಸತನವ ನನ್ನೆದೆಗೆ ....... ।।
Sunday, September 22, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment