Monday, January 26, 2015

ಭರವಸೆಯ ಕಿರಣ

ಎಲ್ಲವೂ ಹೋದ ಮೇಲೆ
ನೆನಪ ನೋವ ಅರೆದ ಮೇಲೆ
ಉಳಿವುದೇನಿದೆ?
ಅವನು ಅವಳು
ಅವಳು ಅವನು
ಕಾರಣಗಳು ನೂರಿರಲಿ
ಎಲ್ಲವೂ ಮುಗಿದ ಮೇಲೆ
ಹೇಳುವುದೇನಿದೆ?
ಕಾರಿರುಳು ತುಂಬಿದ ಮನದಲ್ಲಿ
ಬಯಕೆ ಚಿಗುರು ಹೊಮ್ಮಲೆಂದು
ಭರವಸೆಯ ಕಿರಣ ಬಿತ್ತಬಹುದೆ?

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...