Monday, January 26, 2015

ಭರವಸೆಯ ಕಿರಣ

ಎಲ್ಲವೂ ಹೋದ ಮೇಲೆ
ನೆನಪ ನೋವ ಅರೆದ ಮೇಲೆ
ಉಳಿವುದೇನಿದೆ?
ಅವನು ಅವಳು
ಅವಳು ಅವನು
ಕಾರಣಗಳು ನೂರಿರಲಿ
ಎಲ್ಲವೂ ಮುಗಿದ ಮೇಲೆ
ಹೇಳುವುದೇನಿದೆ?
ಕಾರಿರುಳು ತುಂಬಿದ ಮನದಲ್ಲಿ
ಬಯಕೆ ಚಿಗುರು ಹೊಮ್ಮಲೆಂದು
ಭರವಸೆಯ ಕಿರಣ ಬಿತ್ತಬಹುದೆ?

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...