Monday, November 3, 2014

ಕವಿತೆಯ ದನಿ

ಕವಿತೆ,ಕವಿತೆ
ತಾಯ ಮಮತೆಯಾಗಿ ನಿಂದೆ
ಏನೋ ಹೇಳ ಹೊರಟೆ?
ಎತ್ತಲಿಂದಲೋ ಬಂದೆ ಮಿಂಚಿ ಮಾಯವಾದೆ
ನಾನಿಹನೆಂದು ಸಾರ ಹೊರಟೆ;
ನೀತಿ,ತತ್ವ, ಸಂಪ್ರದಾಯ,ಸಂಸ್ಕೃತಿಯ ಮುಖವಾಡವಾದೆ
ಎಲ್ಲವೂ ತಾನೇ ಆಗಿ,ಎಲ್ಲವನ್ನೂ ಮೀರಿ ಹೊರಟೆ;
ಪ್ರೀತಿ,ದ್ವೇಷ,ಶೋಷಣೆಯ ದನಿಯಾಗಿ ಕಿಚ್ಚು ಹೊತ್ತಿಸಿದೆ
ಸರ್ವೋದಯ,ಸಮತೆಯ ಹಣತೆಯ ಹಚ್ಚ ಹೊರಟೆ;
ನೋವು ನವಿವು,ಭಾವ,ಉದ್ವಿಗ್ನ ಮನದ ತೊಳಲಾಟದ ದನಿಯಾದೆ
ಸಾಂತ್ವನ ಹೇಳುವ ತಾಯ ಕರುಳಾಗ ಹೊರಟೆ;
ಬದುಕ ದಾರಿಯ ಕತ್ತಲ ನೆಲಮಾಳಿಗೆಯ ಪಯಣದ ಜೊತೆಗಾರನಾದೆ
ನಿನ್ನಿರುವ ಅನ್ವೇಷಿಸುವ ಅನ್ವೇಷಕ ನಾನಾಗ ಹೊರಟೆ;
ಬಾ ಎನ್ನೆದೆಯ ಮನದ ಬಾಂದಳಕೆ
ಮನವ ಮಥಿಸಿ ಕವಿತೆಯಾಗಿ ಹೊಮ್ಮಿ ಬಾ
ಮನೆಯಂಗಳಕೆ,ಮನದಂಗಳಕೆ
ಚೈತನ್ಯದ ಚಿಲುಮೆಯಾಗಿ, ಒಲುಮೆಯಾಗಿ ಬಾ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...