Thursday, October 2, 2014

ಹಾರೈಕೆ

ಬೆನ್ನು ತಟ್ಟದ ಜನ,
ಮೇಲೇರಲು ಬಿಡದೆ ಕಾಲೆಳವ ಜನ,
ಬಿದ್ದಾಗ ನಗುವ ಜನ
ಹಿಂದೆ.ಮುಂದೆಲ್ಲವೂ ಇಂತಹ ಜನರ ಸಂತೆಯಲ್ಲಿ
ಒಂಟಿ ಪಯಣಿಗರು ನಾವು
ನೂರು ಕನಸ ಮೂಟೆ ಹೊತ್ತು
ಹೊರಟಿಹೆವು ನನಸಾಗಿಸುವ ದಾರಿ ಹಿಡಿದು
ನಮ್ಮ ನೋವು,ನಮ್ಮ ನಲಿವು
ಏನೇ ಆದರೂ ಹಂಚುವೆವು ಸ್ನೇಹದ ಸಿಹಿ
ನಮ್ಮ ಬಾಳಿಗೆ ಬರಲಿ ನೋವುಗಳ ಕಹಿ
ಅನುಭವಿಸುವ ಶಕ್ತಿ ನಿಮ್ಮ ಹಾರೈಕೆಯಲ್ಲಿರಲಿ||

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...