Monday, April 21, 2014

ಕೇಳಿಸದೇ ಅದರ ಆರ್ತನಾದ?

ನನ್ನೊಳ ದನಿಯೊಂದು ಆರನೋ ಕೂಗುತಿದೆ
ಕೇಳಿಸದೇ ಅದರ ಆರ್ತನಾದ?
ನೋವಿನ ಚೀತ್ಕಾರ ಎದೆಯೊಳದಿಂದೆದ್ದು
ನೀಲಿ ನಭಕ್ಕೇರುತ್ತಿದೆ,ಕೇಳಿಸದೆ ಅದರ ಪೂತ್ಕಾರ?
ಕೇಳಿಸದೇ ಅದರ ಮೌನರಾಗ?
ಮನದ ನೋವೆಲ್ಲಾ ಆತ್ಮವೇ ಹೀರಿ
ದನಿಯಡಗಿಸಿ ಕೂಗುತಿದೆ ಯಾರಿಗೂ ಕೇಳದ ಹಾಗೆ;
ಕಿವಿಗಳಿದ್ದೂ ಕಿವುಡರಿಹರು,
ಯಾರಿಗೂ ಕೇಳದು ಈ ನೋವರಾಗ!
ಅವರಿಗೆ ಅವರದೇ ಚಿಂತೆ!
ನೂರಾರಿದೆ ಲೋಕದ ಕಂತೆ!
ಹೇಗೆ ಕೇಳುವುದು ನೋವುಂಡವರ ಆರ್ತನಾದ?
ಲಾಭ-ನಷ್ಟದ ಲೆಕ್ಕವೇ ನೂರಿರಲು
ನೋವಿನ ನಷ್ಟದ ಲೆಕ್ಕಚಾರ ಯಾರಿಗೂ ಬೇಡ;
ದಮನಿತರ ನೋವಿನ ಆತ್ಮನಾದ,
ನೋವುಂಡವರ ನೋವಿನ ಆರ್ತನಾದ
ಯಾರಿಗೂ ಕೇಳುವುದು ಬೇಡ;
ನೋವೆಲ್ಲವೂ ನೋವುಂಡವರಿಗೇ ಇರಲಿ,
ಲೋಕ ಸಂತಸದಿಂದರಲಿ....

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...