ಕೇಳಿಸದೇ ಅದರ ಆರ್ತನಾದ?

ನನ್ನೊಳ ದನಿಯೊಂದು ಆರನೋ ಕೂಗುತಿದೆ
ಕೇಳಿಸದೇ ಅದರ ಆರ್ತನಾದ?
ನೋವಿನ ಚೀತ್ಕಾರ ಎದೆಯೊಳದಿಂದೆದ್ದು
ನೀಲಿ ನಭಕ್ಕೇರುತ್ತಿದೆ,ಕೇಳಿಸದೆ ಅದರ ಪೂತ್ಕಾರ?
ಕೇಳಿಸದೇ ಅದರ ಮೌನರಾಗ?
ಮನದ ನೋವೆಲ್ಲಾ ಆತ್ಮವೇ ಹೀರಿ
ದನಿಯಡಗಿಸಿ ಕೂಗುತಿದೆ ಯಾರಿಗೂ ಕೇಳದ ಹಾಗೆ;
ಕಿವಿಗಳಿದ್ದೂ ಕಿವುಡರಿಹರು,
ಯಾರಿಗೂ ಕೇಳದು ಈ ನೋವರಾಗ!
ಅವರಿಗೆ ಅವರದೇ ಚಿಂತೆ!
ನೂರಾರಿದೆ ಲೋಕದ ಕಂತೆ!
ಹೇಗೆ ಕೇಳುವುದು ನೋವುಂಡವರ ಆರ್ತನಾದ?
ಲಾಭ-ನಷ್ಟದ ಲೆಕ್ಕವೇ ನೂರಿರಲು
ನೋವಿನ ನಷ್ಟದ ಲೆಕ್ಕಚಾರ ಯಾರಿಗೂ ಬೇಡ;
ದಮನಿತರ ನೋವಿನ ಆತ್ಮನಾದ,
ನೋವುಂಡವರ ನೋವಿನ ಆರ್ತನಾದ
ಯಾರಿಗೂ ಕೇಳುವುದು ಬೇಡ;
ನೋವೆಲ್ಲವೂ ನೋವುಂಡವರಿಗೇ ಇರಲಿ,
ಲೋಕ ಸಂತಸದಿಂದರಲಿ....

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...