Wednesday, April 30, 2014

ಗುಣ ನಿಷ್ಕರ್ಷೆ (Appraisal)?

ಜೋರಾಗಿ ಕಿರುಚುತ್ತಿದ್ದೆ
"ನಾನು ಬದುಕಿದ್ದೇನೆ,
ನಾನು ಬದುಕಬೇಕು"
ಅವರಾರಿಗೂ ಕೇಳಿಸಲೇ ಇಲ್ಲ;
ಕಿವಿಯಿದ್ದೂ ಅವರು ಕಿವುಡರಾಗಿದ್ದರು.
ಒಬ್ಬರಲ್ಲ, ಹಲವು ಜನ;
ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದರು;
ಮನಸ್ಸಿಗೂ ಮಸಿ ಅಂಟಿಸಿಕೊಂಡಿದ್ದಾರೆ ಎಂದೆನಿಸಿರಲಿಲ್ಲ;
ಆಕಸ್ಮಿಕವಾಗಿ ಶವಪೆಟ್ಟಿಗೆಯಲ್ಲಿ ಬಿದ್ದೆನೋ?
ಅಥವಾ ಬೀಳಿಸಿದರೋ ತಿಳಿಯಲಿಲ್ಲ;
ಆದರೂ ಬಿದ್ದಿದ್ದೆ ಅದರೊಳಗೆ ಅರಿವಿಲ್ಲದೆ;
ಸುತ್ತಲೂ ಇರುವವರ ಮನಸ್ಸು
ಕಲ್ಲಾಗಿದೆ ಎಂದು ತಿಳಿದಿರಲಿಲ್ಲ;
ದ್ವೇಷವೇ ಉಸಿರಾಗಿದೆ ಎಂದು ತಿಳಿಯಲಿಲ್ಲ;
ಮುಖದಲ್ಲಿ ಆವೇಶ, ಆಕ್ರೋಶ ಮಡುಗಟ್ಟಿತ್ತು;
ಮಾತಲ್ಲಿ ಒರಟುತನ ನರ್ತಿಸುತ್ತಿತ್ತು;
ಎಲ್ಲರ ಕೈಯಲ್ಲೂ ಸುತ್ತಿಗೆ ಹಾಗು ಮೊಳೆ
ಶವ ಪೆಟ್ಟಿಗೆಯಲ್ಲಿ ಬಿದ್ದವರನ್ನು
ಮೇಲೆತ್ತುವುದು ಅವರ ಕಾಯಕವಲ್ಲ;
ಅವರದೇನಿದ್ದರೂ ಮುಗಿಸುವುದಷ್ಟೆ!
ಪರೀಕ್ಷಿಸುವುದಕ್ಕೂ ಅವರ ಬಳಿ ಸಮಯವಿಲ್ಲ;
ಬಿದ್ದದ್ದೇ ತಡ ಮೊಳೆ ಹೊಡೆಯುವುದಕ್ಕೆ ಆರಂಭಿಸಿದರು;
ಹೃದಯಕ್ಕೆ ಮೊಳೆ ಬಡಿದರು;
ಮನಸ್ಸಿಗೆ ಮೊಳೆ ಬಡಿದರು;
ಸತ್ತವರಿಗೂ ಬಡಿದರು;
ಬದುಕಿದವರಿಗೂ ಬಡಿದರು;
ಬದುಕಿದವರು ಸಾಯುವವರೆಗೂ ಬಡಿದರು;

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...