Saturday, November 10, 2012

ಹಣತೆಗಳ ಹಬ್ಬ ದೀಪಾವಳಿ


ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ
ಸಂಸ್ಕೃತಿಯ ಬಿಂಬವಾಗಿ,ಜೀವನದ ಹೊಂಬೆಳಕಾಗಿ ಮತ್ತೆ ಬಾಳಿಗೆ ಬಂದಿದೆ
ಸಾಲು ಸಾಲಿ ಹಣತೆಯ ಹಚ್ಚಿ,ಮನದ ಅಹಂ,ಕೊಳೆಗಳನ್ನೆಲ್ಲ ಕೊಚ್ಚಿ
ಹೊಸ ಬಗೆಯ ಬೆಳಕಿಗೆ ಮನವ ತೆರೆದಿಡೋಣ,ಬನ್ನಿ ನಾವೂ ಹಣತೆಯಾಗೋಣ.
ಕೃಷ್ಣ-ಸತ್ಯಭಾಮೆಯ ಕೂಡಿ ನರಕಾಸುರನ ವಧಿಸಿ
ಹದಿನಾರುಸಾವಿರ ನಾರಿಯರ ಸೆರೆಬಿಡಿಸಿ ಉದ್ಧರಿಸಿದ ದಿನವಿಂದು;
ನಮ್ಮೊಳಗಿನ ಹದಿನಾರುಸಾವಿರಕ್ಕೂ ಹೆಚ್ಚು ಕೊಳಕು,ತೆವಲುಗಳಿಗೆ ವಿಧಾಯ ಹೇಳೋಣ ಇಂದೇ
ಸಾಲು ಸಾಲು ಹಣತೆಯ ಹಚ್ಚಿ ಮನದೊಳ ಮೂಲೆಯಲ್ಲಿ ನೆಲೆಗೊಂಡ ಅಜ್ಯಾನ,ಧ್ವೇಷ,
ನಮ್ಮೊಳಗಿನ ವೈರಿಗಳಿಗೆ ಬಿಡುಗಡೆಯ ಹಾದಿ ತೋರಿಸೋಣ ಇಂದೇ
ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...