ಹಣತೆಗಳ ಹಬ್ಬ ದೀಪಾವಳಿ


ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ
ಸಂಸ್ಕೃತಿಯ ಬಿಂಬವಾಗಿ,ಜೀವನದ ಹೊಂಬೆಳಕಾಗಿ ಮತ್ತೆ ಬಾಳಿಗೆ ಬಂದಿದೆ
ಸಾಲು ಸಾಲಿ ಹಣತೆಯ ಹಚ್ಚಿ,ಮನದ ಅಹಂ,ಕೊಳೆಗಳನ್ನೆಲ್ಲ ಕೊಚ್ಚಿ
ಹೊಸ ಬಗೆಯ ಬೆಳಕಿಗೆ ಮನವ ತೆರೆದಿಡೋಣ,ಬನ್ನಿ ನಾವೂ ಹಣತೆಯಾಗೋಣ.
ಕೃಷ್ಣ-ಸತ್ಯಭಾಮೆಯ ಕೂಡಿ ನರಕಾಸುರನ ವಧಿಸಿ
ಹದಿನಾರುಸಾವಿರ ನಾರಿಯರ ಸೆರೆಬಿಡಿಸಿ ಉದ್ಧರಿಸಿದ ದಿನವಿಂದು;
ನಮ್ಮೊಳಗಿನ ಹದಿನಾರುಸಾವಿರಕ್ಕೂ ಹೆಚ್ಚು ಕೊಳಕು,ತೆವಲುಗಳಿಗೆ ವಿಧಾಯ ಹೇಳೋಣ ಇಂದೇ
ಸಾಲು ಸಾಲು ಹಣತೆಯ ಹಚ್ಚಿ ಮನದೊಳ ಮೂಲೆಯಲ್ಲಿ ನೆಲೆಗೊಂಡ ಅಜ್ಯಾನ,ಧ್ವೇಷ,
ನಮ್ಮೊಳಗಿನ ವೈರಿಗಳಿಗೆ ಬಿಡುಗಡೆಯ ಹಾದಿ ತೋರಿಸೋಣ ಇಂದೇ
ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...