Saturday, November 10, 2012

ಆತ್ಮದ ಕರೆ


ನಾನಾರೆಂದು ನೀ ತಿಳಿದೆಯಾ?
ಒಂದು ಪ್ರಶ್ನೆ ಮನದಲ್ಲಿ ಮೂಡಿದೆ
ಅನೇಕ ಹುಡುಕಾಟಗಳಿಗೆ ಕಾರಣವಾಗಿದೆ
ನಾನು ಏಕೆ?
ಏಕಾಗಿ ಬಂದೆ?
ಇಲ್ಲಿಯ ವ್ಯಾಪಾರವೇನು?
ನನ್ನಿಂದ ಏನಾಗಬೇಕು?
ಲೋಕದ ವ್ಯಾಪಾರಗಳ ಅರಿಯುವ ವಣಿಕನೇ?
ಎಲ್ಲೂ ನಿಲ್ಲದೆ,ಯಾವುದೋ ಸೆಳೆತಕ್ಕೆ ಓಡುವ ಪಯಣಿಗನೇ?
ಅರಿವು,ತಿಮಿರ,ಆಧ್ಯಾತ್ಮ,ವಿಜ್ಯಾನ,ವ್ಯೋಮ ಪರಿಧಿಗಳ ಅರಿವಿಲ್ಲದೆ ತೊಳಲಾಡುವ ಜೀವಿಯೇ?
ನೂರಾರು ಪ್ರಶ್ನೆಗಳು ಮುಂದಿದೆ....
ಲೋಕದ ಮಾಯೆಗೆ ಬಲಿಪಶುಗಳು ನಾವೆಲ್ಲಾ
ಅವನಾಡಿಸಿದಂತೆ ಆಡುವ ತೊಗಲುಗೊಂಬೆಗಳು
ಗಾಳಿ ಬಂದಲ್ಲಿಗೆ ತೂರುವ ತರಗೆಲೆಗಳು
ಕಾಲನ ಕೈಗೆ ಸಿಕ್ಕು ನಲುಗುವ ಜೀವ ಕ್ರಿಮಿಗಳು
ಮತ್ತೆ ಹುಟ್ಟು;
ಮತ್ತೆ ಸಾವು;
ಕೊನೆ-ಮೊದಲಿಲ್ಲದ ಈ ಜಂಜಾಟದಲ್ಲಿ ಬೆಂದು ಬೇಯುವ ಪದಾರ್ಥಗಳು
ಮನದಲ್ಲಿ ಪ್ರಶ್ನೆ;
ಕಾಣದ ಉತ್ತರಕ್ಕೆ ಹುಡುಕಾಡಲೇ ಹುಟ್ಟಿ,ಕೊನೆಗೆ ಸಾಯುವವರು.

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...