Thursday, November 29, 2012

ನಿನ್ನ ಆತ್ಮ


ನಿನ್ನ ಕಣ್ಣುಗಳನ್ನೇ ಪರಿಶೀಲಿಸುತ್ತಿದ್ದೇನೆ
ಮತ್ತು ತುಟಿಗಳನ್ನೇ ನೋಡುತ್ತಿದ್ದೇನೆ
ಕಾಯುತ್ತಲೇ ಇದ್ದೇನೆ
ಶಾಶ್ವತವಾದ ಮುತ್ತಿಗಾಗಿ.

ನಿನ್ನ ಮನವನ್ನು ಹೊಕ್ಕೆ
ನೀನು ನನ್ನ ಬಿಗಿಯಾಗಿ ಹಿಡಿದಾಗ
ನಾನು ಬಯಸುತ್ತೇನೆ ನಿನ್ನ ಜೊತೆಯಿರಲು
ಶಾಶ್ಚತವಾಗಿ ಆ ಮುಕ್ತ ರಾತ್ರಿಗಾಗಿ.

ನಿನ್ನ ಕೈಗಳ ಹಿಡಿದಿದ್ದೇನೆ
ಮೃದು ಹಾಗು ಕರುಣೆಯಿಂದ
ನಾವುಗಳು ಸೆಳೆಯಲ್ಪಟ್ಟಿದ್ದೇವೆ
ಎಂದೂ ಕೊನೆಯಿಲ್ಲದ ಬಂಧನದಲ್ಲಿ.

ನಿನ್ನ ಪ್ರೀತಿಯನ್ನು ಅನುಭವಿಸಿದ್ದೇನೆ
ಸ್ವಲ್ಪ ಸಮಯ
ನಿನ್ನೊಡನೆ ಇರುವುದು
ಯಾವ ಅಪರಾಧವೂ ಅಲ್ಲ.

ನಿನ್ನ ಮುಖವನ್ನು ಸ್ಪರ್ಶಿಸಿದ್ದೇನೆ
ಮೃದು ಹಾಗು ಬೆಚ್ಚನೆ
ಅವೆಲ್ಲವೂ ದಾರಿದೀಪಗಳು
ಬರಸಿಡಿಲಿನ ಚಂಡಮಾರುತದಂತೆ ದಾಳಿಯಿಡುತ್ತಿದೆ.

ಪ್ರೇರಣೆ:’Your Soul’ by Asim Nehal

Sunday, November 25, 2012

ನಿಜ-ನೈಜತೆ


                                 ನಿರುದ್ಯೋಗಿ!
                             ಕಾಯಕ , ಹುಡುಕಾಟ
                        ಆಸಕ್ತಿ, ಕಲಿಕೆ, ರಾಜಕೀಯ, ಭಡ್ತಿ,
              ಪ್ರೀತಿ,ಪ್ರೇಮ,ಜಗಳ,ಕದನ,ಮದುವೆ,ವರದಕ್ಷಿಣೆ,ವಿಚ್ಛೇದನ,
                        ನಿರಾಸಕ್ತಿ, ಬೇಸರ, ಕಾಟಾಚಾರ
                             ಚಮಚಾಗಿರಿ, ಬಕಪಕ್ಷಿ
                                 ಉದ್ಯೋಗಿ!                      

ವಾಸ್ತವ


                             ಪ್ರೀತಿ!
                       ಆನಂದ,ಸೌಂದರ್ಯ
                 ರೋಮಾಂಚನ, ಪಾತರಗಿತ್ತಿಗಳು,
        ಕನಸಿನಲೋಕ, ಅನುರಾಗ,  ಮದುವೆ - ವಾಸ್ತವ
                 ಮಕ್ಕಳು, ಸಂಬಂಧಗಳು,ಹೊರೆಗಳು
                     ಬೇಸರ, ಪ್ರಯಾಸ
                             ದ್ವೇಷ!


ಪ್ರೇರಣೆ: Reality (Neo-Diamante) by Ashok Babu

[Diamante is a 7 line poem, shaped like a diamond- the subject at the top of diamond is totally different or opposite to the subject at the bottom. This one is my own variant- "neo diamante" or "new diamond"-        by Ashok Babu ]


Saturday, November 24, 2012

ಹೆಂಡತಿಯರು


ನನಗೆ ತಿಳಿದಿಲ್ಲ,ಅನೇಕ ಮಹಿಳೆಯರಿಗೂ ಸಹ ತಿಳಿದಿಲ್ಲ.
ಇದು ಮೌನವಾದ  ಕೃತಜ್ಜತೆ.
ಹಾಗು ಸಮಂಜಸ ನಮ್ಮೊಳಗಿನ ಹೆಣ್ಣನ್ನು ತಿಳಿಯಲು,
ಆಕೆಯೋ ಬದುಕಲು ಇಷ್ಟಪಡುವವಳು.

ಸಂಕೀರ್ಣತೆಗಳು ಬದಲಾಗುತ್ತವೆ ಅನೇಕ ರೀತಿಯಲ್ಲಿ,
ಅವಳು ಪಕ್ವಗೊಳ್ಳುವಳು
ಅಥವಾ ಪಕ್ವಗೊಂಡಿದ್ದಾಳೆ ಲೌಕಿಕ ಮನೆಗೆಲಸಗಳಲ್ಲಿ.

ಹೆಣ್ಣಾಗಿ ಹೊರಹೊಮ್ಮುವ ಅವಳು,

ತಳದಲ್ಲಿ ಹೆಂಡತಿಯಾಗಿಯೂ ಅಸ್ತಿತ್ವವಿದೆ.
ಉಮ್ಹ್.. ಒಂದು ಸುಂದರ ಮಜಲು,ಆದರೆ ಅದರದೇ ಹೆಜ್ಜೆ.
ಕ್ರಮವಾಗಿ ,ನಾನು ನನಗೋಸ್ಕರ, ಅವಳು ಅವಳಿಗೋಸ್ಕರ.
ನಾನು ಮಹಿಳೆ,ಅವಳು ಹೆಂಡತಿ.
ಆದರೆ ನಾವು ಅದ್ವೈತ.


ಪ್ರೇರಣೆ:’Wives' by Sumita Jetley

ತೆರೆಯದ ಬಾಗಿಲು


ಧರ್ಮದ ವಿಚಾರ ಮಾತನಾಡುವಾಗ
ಸಮ್ಮತವಿಲ್ಲದ ವಿಚಾರ ಹೇಳಿದೆ
ಕಟ್ಟಿದ್ದಾರೆ ನನ್ನ ತಲೆಗೆ ಬಹುಮಾನ.


ತಪ್ಪುತಿಳುವಳಿಕೆಗಳು ಹಲವು
ತಡಕಾಡಿ ಹುಡುಕಿದೆ ಪವಿತ್ರಗ್ರಂಥಗಳ
ವ್ಯಾಖ್ಯಾನಗಳ ನಡುವೆ ಸಿಲುಕಿದೆ.

ತಾವೇ ಮುಗ್ದರೆಂದು ಯಾಚಿಸುತ್ತಾರೆ ದೇವರನ್ನು
ಅವರಿಗೆ ಅವನ ಬಳಿ ಯಾವುದೂ ಉಚಿತವಲ್ಲ
ಬೆಲೆ ತೆರಬೇಕು ಬಡ್ಡೀಸಮೇತ.


ಪ್ರೇರಣೆ:’closed doors’by Asim Nehal


Wednesday, November 21, 2012

ಮತ್ತೊಂದು ದಿನ ನೀನು ನನ್ನೊಡನಿರಲು ಬಯಸುತ್ತೇನೆ


ನನ್ನಲ್ಲಿ ಖಿನ್ನತೆ ಹಾಗು ದುಃಖ  ಮಡುಗಟ್ಟಿದೆ
ನನಗೀಗ ಬೇಕಾಗಿರುವುದು ವಿಶ್ರಾಂತಿ
ರಾತ್ರಿ ನಾನು ನಿದ್ದೆಗೆ ಜಾರುತ್ತೇನೆ
ಆದರೆ ನನ್ನ ಕನಸುಗಳು;  ಓಹ್! ನಾನು ಸೆಣಸಲಾರೆ


ನಾನು ಯೋಚಿಸುತ್ತೇನೆ ನೀನು ಹಾಸಿಗೆಯ ಮೇಲೆ ಮಲಗಿರುವುದ
ಮತ್ತು ಆಶ್ಚರ್ಯವಾಗುತ್ತದೆ ಏನಾದರೂ ನಿನ್ನ ಬಗ್ಗೆ ಹೇಳಿರಬಹುದೆಂದು
ನಾನು ಬಯಸುತ್ತೇನೆ ನೀನು ಈಗಲೂ ಇಲ್ಲೇ ಇರಬೇಕಾಗಿತ್ತೆಂದು
ಆದರೆ ನನಗೆ ತಿಳಿದಿದೆ ನೀನು ಈಗಲೂ ನನ್ನ ಸನಿಹವೇ ಇದ್ದೀಯ


ನೀನು ತಿಳಿದಿರುವುದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ
ನಾನು ಆಶಿಸುತ್ತೇನೆ ನೀನು ಇನ್ನೂ ಇಲ್ಲೇ ಇರಬೇಕಿತ್ತೆಂದು
ನಾ ಬಯಸುತ್ತೇನೆ ಮತ್ತೊಂದು ದಿನ ನಿನ್ನ ಜೊತೆ ಇರಲು
ಮತ್ತು ನಾ ಬಲ್ಲೆ ನಿನಗೇನು ಬೇಕಿತ್ತೆನ್ನುವುದೂ ಸಹ

ದಿನ ಪ್ರತಿದಿನ ನಾನು ನೀನಿಲ್ಲದ ಖಾಲಿತನವನ್ನು ಹೆಚ್ಚಾಗಿ ಅನುಭವಿಸುತ್ತಿದ್ದೇನೆ
ನಮ್ಮ ನಡುವೆ ಅನೇಕ ಸಂಗತಿಗಳಿವೆ  ಹೇಳಿಕೊಳ್ಳಲು 
ನಾ ಬಲ್ಲೆ ನಾನು ನಿನ್ನನ್ನು ಮತ್ತೆ ನೋಡುವೆನೆಂದು
ಆದರೆ ನನ್ನ ಜೀವನ ಈಗಷ್ಟೇ ಶುರುವಾಗುತ್ತಿದೆ

ಪ್ರೇರಣೆ:’I just want one more day with you’ by Cyndi



Monday, November 19, 2012

ನೀಲಿ ನಭದಾಚೆ


ಅಲ್ಲೊಬ್ಬನಿದ್ದಾನೆ ಚಿಕ್ಕಮಕ್ಕಳ ಗೆಳೆಯ
ನೀಲಿ ನಭದಾಚೆ;
ಆ ಗೆಳೆಯ ಎಂದೂ ಬದಲಾಗದವ
ಅವನ ಪ್ರೀತಿ ಎಂದೆಂದಿಗೂ ಅಮರ;
ಈ ಭೂಮಿಯ ಗೆಳೆಯರು ನಮ್ಮನ್ನು ಬಿಡಬಹುದು
ಹಾಗು ಬದಲಾಗುತ್ತಾರೆ ವರುಷಗಳು ಉರುಳುತಿರೆ,
ಇವನೋ ಬಹು ಅಮೂಲ್ಯವಾದವನು
ಅವನ ಹೆಸರಲ್ಲೇ ಅಷ್ಟು ಸೆಳೆತವಿದೆ.

ಅಲ್ಲಿ ಚಿಕ್ಕಮಕ್ಕಳ ಮನೆಯಿದೆ
ನೀಲಿ ನಭದಾಚೆಯಲ್ಲಿ.
ಕೃಷ್ಣ ನೆಲೆಸಿದ್ದಾನೆ ಅಲ್ಲಿ
ಶಾಂತಿ,ನೆಮ್ಮದಿಯ ತಾಣವದು
ಈ ಪೃಥ್ವಿಯಲ್ಲಿ ಅಂತಹ ತಾಣವೆಲ್ಲೂ ಇಲ್ಲ
ಅದಕ್ಕೆ ಸರಿಸಾಟಿಯಾವುದೂ ಇಲ್ಲ
ಎಲ್ಲರೂ ಸಂತೋಷಿಗಳೇ
ನಿತ್ಯ ಸುಖಿಗಳೇ ಅವರು.


ಪ್ರೇರಣೆ-’Above the Bright Blue Sky’ by Albert Midlane

Saturday, November 10, 2012

ಹಣತೆಗಳ ಹಬ್ಬ ದೀಪಾವಳಿ


ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ
ಸಂಸ್ಕೃತಿಯ ಬಿಂಬವಾಗಿ,ಜೀವನದ ಹೊಂಬೆಳಕಾಗಿ ಮತ್ತೆ ಬಾಳಿಗೆ ಬಂದಿದೆ
ಸಾಲು ಸಾಲಿ ಹಣತೆಯ ಹಚ್ಚಿ,ಮನದ ಅಹಂ,ಕೊಳೆಗಳನ್ನೆಲ್ಲ ಕೊಚ್ಚಿ
ಹೊಸ ಬಗೆಯ ಬೆಳಕಿಗೆ ಮನವ ತೆರೆದಿಡೋಣ,ಬನ್ನಿ ನಾವೂ ಹಣತೆಯಾಗೋಣ.
ಕೃಷ್ಣ-ಸತ್ಯಭಾಮೆಯ ಕೂಡಿ ನರಕಾಸುರನ ವಧಿಸಿ
ಹದಿನಾರುಸಾವಿರ ನಾರಿಯರ ಸೆರೆಬಿಡಿಸಿ ಉದ್ಧರಿಸಿದ ದಿನವಿಂದು;
ನಮ್ಮೊಳಗಿನ ಹದಿನಾರುಸಾವಿರಕ್ಕೂ ಹೆಚ್ಚು ಕೊಳಕು,ತೆವಲುಗಳಿಗೆ ವಿಧಾಯ ಹೇಳೋಣ ಇಂದೇ
ಸಾಲು ಸಾಲು ಹಣತೆಯ ಹಚ್ಚಿ ಮನದೊಳ ಮೂಲೆಯಲ್ಲಿ ನೆಲೆಗೊಂಡ ಅಜ್ಯಾನ,ಧ್ವೇಷ,
ನಮ್ಮೊಳಗಿನ ವೈರಿಗಳಿಗೆ ಬಿಡುಗಡೆಯ ಹಾದಿ ತೋರಿಸೋಣ ಇಂದೇ
ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ.

ನೊಂದುಕೊಳ್ಳಬಲ್ಲೆ ಅಷ್ಟೆ..........


ಬೆಳಗಿನಿಂದ ಒದ್ದಾಡುತ್ತಿದ್ದೇನೆ
ಅನೇಕಾನೇಕ ಆಗಬೇಕಾದ ಕೆಲಸಗಳ ಪಟ್ಟಿಹಿಡಿದು;
ಪಟ್ಟಾಭಿಷೇಕ ಮೊದಲನೆಯದಾದರೆ,
ಕವಿತೆ,ಕಾವ್ಯ,ಅಭ್ಯಾಸಕ್ಕೆ ನೂರೆಂಟು ಪುಸ್ತಿಕೆಗಳು
ಎಲ್ಲವೂ ಕಾಯುತ್ತಿವೆ ಒಟ್ಟಾಗಿ ಮರದ ಕಪಾಟಿನಲ್ಲಿ;
ಅಮೂರ್ತ,ಅವಗಾಹನೆ,ಅವರೋಹಣ,ಆರೋಹಣ,
ಎಲ್ಲಾ ರೀತಿಯ ತಕತೈ,ತಕತೈ ಕುಣಿತಕ್ಕೆ ಸಿದ್ಧ ಉಡುಪು ನಾನೇ;
ರಂಗಸ್ಥಳ ಸಿದ್ಧವಾಗೇ ಇದೆ ಎದುರಲ್ಲೇ.
ಅಕಾಶವಾಣಿಯ ಸುಪ್ರಭಾತ,ಆಲಾಪಗಳಿಗೆ ಮನಸೋತಿತು ಮನ ಕ್ಷಣದಲ್ಲಿ
ಭಕ್ತಿ,ಪ್ರೀತಿ,ಹಳೆಯ,ನವೀನ ಹಾಡುಗಳು ಭಿತ್ತರಗೊಂಡಿವೆ ಒಂದಾದಮೇಲೊಂದರಂತೆ;
ಮನಸ್ಸು ಚೈತನ್ಯದಾಯಿ,
ದೇಹ ಆಯಾಸದಾಯಿ;
ಸೊರಗಿದೆ ನೂರೆಂಟು ರೋಗ-ರುಜಿನಗಳಿಂದ,
ನೆಗಡಿ,ಕೆಮ್ಮು,ಜ್ವರಗಳಿಂದ ಮೊದಲುಗೊಂಡು;
ಮನಸ್ಸು ಹಾರುವ ಹಕ್ಕಿಯಾದರೆ;
ಈ ತುಮುಲಗಳೆಲ್ಲಾ ಕಾಲಿಗೆ ಕಟ್ಟಿದ ಭಾರದ ಬೇನೆಗಳು
ಆಗಸಕ್ಕೆ ಹಾರುವ ಮಾತೆಲ್ಲಿ ಹೇಳಿ!
ಮಾತ್ರೆ,ಪಥ್ಯ,ವಿಶ್ರಾಂತಿ ಇವೇ ಆಗಿದೆ ಈ ಕ್ಷಣದ ಮಂತ್ರ;
ಅಂತೂ ಇಂತೂ ಮನಸ್ಸು ಮಾಡಿ ಸ್ವಲ್ಪ ಹೊಸಗಾಳಿ ಸೇವನೆಗೆ ಹೊರಬಿದ್ದೆ;
ಚಳಿಗಾಳಿ ಬಿಸಿಕಾಫಿಗೆ ಬೇಡಿಕೆ ಇಟ್ಟಿತು.
ಮಾಣಿಗೆ ಹೇಳಿ ಬಿಸಿಕಾಫಿಯ ಹೀರುವ ತಯಾರಿ ನಡೆಸಿದೆ;
ಮನಸ್ಸಿಗೆ ದುಃತ್ತನೆ ಘಾಸಿ,ಮನ ಮರುಗಿತು,
ಇಳಿಯ ವಯಸ್ಸಿನ ಆಕೆ,ಮಕ್ಕಳ,ಮೊಮ್ಮಕ್ಕಳ ಜೊತೆ ಆರಾಮವಾಗಿರಬೇಕಾದಾಕೆ,
ಹೋಟಲಿನಲ್ಲಿ ತಟ್ಟೆ-ಲೋಟ,ಕಸ-ಮುಸುರೆ ತೊಳೆಯುವದ ಕಂಡು ಹಿಂಸೆಯಾಯಿತು;
ಕಾಫಿ ರುಚಿಸಲಿಲ್ಲ,ಅಸಹಾಯಕ ಪರಿಸ್ಥಿತಿ ನನ್ನದೂ,ಆಕೆಯದೂ
ನೊಂದುಕೊಳ್ಳಬಲ್ಲೆ ಅಷ್ಟೆ.....................................................

ಆತ್ಮದ ಕರೆ


ನಾನಾರೆಂದು ನೀ ತಿಳಿದೆಯಾ?
ಒಂದು ಪ್ರಶ್ನೆ ಮನದಲ್ಲಿ ಮೂಡಿದೆ
ಅನೇಕ ಹುಡುಕಾಟಗಳಿಗೆ ಕಾರಣವಾಗಿದೆ
ನಾನು ಏಕೆ?
ಏಕಾಗಿ ಬಂದೆ?
ಇಲ್ಲಿಯ ವ್ಯಾಪಾರವೇನು?
ನನ್ನಿಂದ ಏನಾಗಬೇಕು?
ಲೋಕದ ವ್ಯಾಪಾರಗಳ ಅರಿಯುವ ವಣಿಕನೇ?
ಎಲ್ಲೂ ನಿಲ್ಲದೆ,ಯಾವುದೋ ಸೆಳೆತಕ್ಕೆ ಓಡುವ ಪಯಣಿಗನೇ?
ಅರಿವು,ತಿಮಿರ,ಆಧ್ಯಾತ್ಮ,ವಿಜ್ಯಾನ,ವ್ಯೋಮ ಪರಿಧಿಗಳ ಅರಿವಿಲ್ಲದೆ ತೊಳಲಾಡುವ ಜೀವಿಯೇ?
ನೂರಾರು ಪ್ರಶ್ನೆಗಳು ಮುಂದಿದೆ....
ಲೋಕದ ಮಾಯೆಗೆ ಬಲಿಪಶುಗಳು ನಾವೆಲ್ಲಾ
ಅವನಾಡಿಸಿದಂತೆ ಆಡುವ ತೊಗಲುಗೊಂಬೆಗಳು
ಗಾಳಿ ಬಂದಲ್ಲಿಗೆ ತೂರುವ ತರಗೆಲೆಗಳು
ಕಾಲನ ಕೈಗೆ ಸಿಕ್ಕು ನಲುಗುವ ಜೀವ ಕ್ರಿಮಿಗಳು
ಮತ್ತೆ ಹುಟ್ಟು;
ಮತ್ತೆ ಸಾವು;
ಕೊನೆ-ಮೊದಲಿಲ್ಲದ ಈ ಜಂಜಾಟದಲ್ಲಿ ಬೆಂದು ಬೇಯುವ ಪದಾರ್ಥಗಳು
ಮನದಲ್ಲಿ ಪ್ರಶ್ನೆ;
ಕಾಣದ ಉತ್ತರಕ್ಕೆ ಹುಡುಕಾಡಲೇ ಹುಟ್ಟಿ,ಕೊನೆಗೆ ಸಾಯುವವರು.

Tuesday, November 6, 2012

ಕ್ಷುದ್ರ ಗ್ರಹ


ಹೊಳೆಯುವುದಿಲ್ಲ,ಬೆಳೆಯುವುದಿಲ್ಲ
ಆಕಾಶದಲ್ಲಿ ಹೊಳೆಯುವ ತಾರೆ ನಾನಲ್ಲ
ಪರರ ಬದುಕಿಗೆ ಬೆಳಕ ನೀಡುವ ಚೈತನ್ಯ ನಾನಲ್ಲ
ಜಡತ್ವವೇ ಉಸಿರಾಗಿಸಿಕೊಂಡ,ಮೈದಳೆದ
ಕಲ್ಲು,ಮಣ್ಣು,ಧೂಳು,ವಿಷಾನಿಲವೇ ನಾನು
ದಿಕ್ಕುಗಾಣದೆ ಯಾವುದೋ ಅನನ್ಯ ಚೈತನ್ಯಕ್ಕೆ ಸೋತು
ಸೌರಮಂಡಲದಲ್ಲಿ ಅಲೆಯುವ ಅಲೆಮಾರಿ ನಾನು
ಯಾರ ಯಾರ ಹೊಡೆತಕ್ಕೋ ನಲುಗುವೆ,
ಯಾರ ಯಾರ ಸೆಳತಕ್ಕೋ ಸೋಲುವೆ
ಎಂದೂ ಚೈತನ್ಯವಾಗದ.
ಸದಾ ಅಂಡಲೆಯುವ ಕ್ಷುದ್ರಗ್ರಹ ನಾನು.

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...