ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ
ಕಾಲು ಕರೆದಲ್ಲಿಗೆ ತಡಮಾಡದೆ
ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ
ಆದರೂ ನಡೆದಿದೆ ತೊಂದರೆ ಇಲ್ಲದೆ\\
ನನ್ನಿಂದ ಏನಾಗಬೇಕೋ ತಿಳಿದಿಲ್ಲ
ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ
ಮನದಲ್ಲಿ ಮಾತ್ರ ಶಾಂತಿ ಇನ್ನೂ ನೆಲಸಿಲ್ಲ
ಒಂದಾದ ಮೇಲೆ ಒಂದು ಚಿಂತೆ ಮನದ ಮೇಲೆರಗಿದೆ\\
ದಿನವೂ ಬೆಳಕು ಮೊಡಿ
ಮನದಲ್ಲಿ ಹೊಸ ಚೈತನ್ಯ ಹಾಡಿದೆ
ಅದೇ ಹಾಡು, ಅದೇ ರಾಗ
ಭಾವ ಮಾತ್ರ ಬೇರೆ ಬೇರೆ\\
ನಿನ್ನೆಯ ಕಹಿ ನೆನಪ ಮರೆಸಿ
ನಾಳೆಯ ಸಿಹಿ ಅನುಭವವ ತಂದಿದೆ\\
Saturday, May 14, 2011
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment