Tuesday, May 3, 2011

ಒಸಾಮಾಸುರನ ಹತ್ಯೆ

ಅವನೊಬ್ಬ ಮಾನವೀಯತೆಯ ಶತೃ
ರಕ್ತಪೀಪಾಸು,
ಧರ್ಮಾಂದ,
ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ
ಯಾವುದೋ ಧರ್ಮರಕ್ಷಕನಂತೆ
ತನ್ನನ್ನೇ ತಾನು ರಕ್ಷಿಸಿಕೊಳ್ಳದವನು
ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ
ತಲೆಕೆಟ್ಟವರನ್ನು ತಯಾರುಮಾಡುವ ಕಾರ್ಖಾನೆ ನಡೆಸುವನಂತೆ
ಕೈಗೆ ಎಕೆ ೪೭ ಮೆಷಿನ್ ಗನ್ನು ನೀಡಿ ಯಾರುಯಾರನ್ನು ಸಾಯಿಸಬೇಕೆಂದು ನಿರ್ದೇಶಿಸುವನಂತೆ
ನಮ್ಮ ಕನ್ನಡ ಚಿತ್ರ ನಿರ್ದೇಶಕರು ರೌಡಿಗಳನ್ನು ಸಾಯಿಸುವಂತೆ
ದೊಡ್ಡ ದೊಡ್ಡ ಕಟ್ಟಡಗಳಿಗೆ ವಿಮಾನಗಳ ಡಿಕ್ಕಿ ಹೊಡೆಸುವನಂತೆ
ಅಮಾಯಕರು ಸಾಯುವದ ಕಂಡು ಗಹಗಹಿಸಿ ನಗುವನಂತೆ
ಎಷ್ಟು ದಿವಸ ನಕ್ಕಿಯಾನು ನೀವೇ ಹೇಳಿ ನಾಳೆ ಸಾವು ನನಗಾಗೇ ಕಾದಿದೆ ಎಂಬುದ ಮರೆತು
ಅಮೆರಿಕೆಯ ಜನ ಏನು ಭಾರತೀಯರೇ ಎಲ್ಲವನ್ನೂ ಸಹಿಸಿಕೊಳ್ಳಲು/ಮರೆತುಹೋಗಲು
ಹತ್ತು ನೂರಾಗಲಿ ನೋವ ಮರೆಯಲಾದೀತೇ?
ಆತ್ಮೀಯರ ಶವ ಜೀವಂತಿಗೆಯಿಂದ ನಡೆಯುವುದೇ?
ಶಾಂತಿ ಶಾಂತಿ ಎಂದರೆ ನೆಮ್ಮದಿ ಸಿಗುವುದೇ?
ಉತ್ತರಿಸುವರು ಯಾರು? ಅಫಜಲ್ ಗುರುವೋ? ಇಲ್ಲ ಕಸಬನೋ? ನಾ ತಿಳಿಯೆ
ತತ್ವಕ್ಕೆ ಅಂಟಿಕೊಂಡವರ ನಡೆ ಮೆಚ್ಚಲೇಬೇಕು ಅದನ್ನು ದ್ವೇಷ ಎನ್ನಲಾದೀತೆ?
ಅಧಿಕಾರಕ್ಕೆ ಅಂಟಿಕೊಂಡವರು ನಮ್ಮಲ್ಲಿ ಬಹಳ ಯಾವ ಸೇಡೂ ಇಲ್ಲ ,ಬರೀ ಒಗ್ಗರಣೆ ಮಾತ್ರ
ನಡೆಯನ್ನು ಸಮರ್ಥಿಸಿಕೊಳ್ಳಲೂ ನಮ್ಮವರಿಗೆ ನಾಲಿಗೆ ಕಡಿಯುತ್ತಿದೆ, ಕೇಳಿಸಿದ್ದು ಬರೀ ಕೆಮ್ಮು ಮಾತ್ರ
ಒಸಾಮ ಸತ್ತ
ಜವಾಹಿರಿ ಬಂದ
ಅಮೆರಿಯಲ್ಲಿ ಬಾರೀ ಹಬ್ಬ ಆಚರಣೆ
ನಮ್ಮ ಮುತಾಲಿಕ ಬಾಯಿಬಡಿದುಕೊಂಡ ಪ್ರೀಡಂ ಪಾರ್ಕಿನಲ್ಲಿ
ನಮ್ಮ ಕುಮಾರ ಬಾಯಿಮುಚ್ಚಿಕೊಂಡ ಓಟುಬ್ಯಾಂಕಿಗಾಗಿ.

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...