ನನಗನಿಸಿ ಬಹು ದಿನಗಳಾದವು
ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ
ಎಲ್ಲೇ ಹೋದರೂ,ಏನೇ ಮಾಡಿದರೂ
ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ
ಏಕೆ ಹೀಗೆ ಒಂದೂ ತಿಳಿದಿಲ್ಲ
ಮನದಲ್ಲಿ ಮಾತ್ರ ನೋವಿನ ಗಂಟು ಭಾರವಾಗುತ್ತಿದೆ ಎನಿಸಿದೆ
ಏಳಿಗೆ ಕಾಣುತ್ತಿಲ್ಲ,
ನಿರ್ವಹಣೆಗೇನೂ ತೊಂದರೆಯಿಲ್ಲ
ಮನಸ್ಸು ಮಾತ್ರ ತೊಳಲಿದೆ
ಕಾಣದ ಗುರಿಯ ಕಡೆಗೆ ಹೊರಳಿದೆ
ನಾಳೆಯೆಂಬ ಭರವಸೆಯ ಹೊಂಗನಸು
ದಿನದಿನವೂ ಮುಂದೆ ಜೀವನವ ನಡೆಸಿದೆ
ಮಾಗಿದಂತೆ ಹೊಸ ಹೊಸ ಉತ್ಸಾಹ
ಮತ್ತೆ ಮತ್ತೆ ಮನದಲ್ಲಿ ಮೊಡಿಸಿದೆ
ನಾಳೆಯು ನನ್ನದೇ
ನನ್ನ ಕಾಲವೂ ಬರುವುದಿದೆ
ಸೋಲುವ ಮಾತಿಲ್ಲ
ಪ್ರಯತ್ನ ಮಾತ್ರ ಬಿಡೋದಿಲ್ಲ
Wednesday, May 11, 2011
Subscribe to:
Post Comments (Atom)
ಮೌನ ನೃತ್ಯ
ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment