ನನಗನಿಸಿ ಬಹು ದಿನಗಳಾದವು
ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ
ಎಲ್ಲೇ ಹೋದರೂ,ಏನೇ ಮಾಡಿದರೂ
ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ
ಏಕೆ ಹೀಗೆ ಒಂದೂ ತಿಳಿದಿಲ್ಲ
ಮನದಲ್ಲಿ ಮಾತ್ರ ನೋವಿನ ಗಂಟು ಭಾರವಾಗುತ್ತಿದೆ ಎನಿಸಿದೆ
ಏಳಿಗೆ ಕಾಣುತ್ತಿಲ್ಲ,
ನಿರ್ವಹಣೆಗೇನೂ ತೊಂದರೆಯಿಲ್ಲ
ಮನಸ್ಸು ಮಾತ್ರ ತೊಳಲಿದೆ
ಕಾಣದ ಗುರಿಯ ಕಡೆಗೆ ಹೊರಳಿದೆ
ನಾಳೆಯೆಂಬ ಭರವಸೆಯ ಹೊಂಗನಸು
ದಿನದಿನವೂ ಮುಂದೆ ಜೀವನವ ನಡೆಸಿದೆ
ಮಾಗಿದಂತೆ ಹೊಸ ಹೊಸ ಉತ್ಸಾಹ
ಮತ್ತೆ ಮತ್ತೆ ಮನದಲ್ಲಿ ಮೊಡಿಸಿದೆ
ನಾಳೆಯು ನನ್ನದೇ
ನನ್ನ ಕಾಲವೂ ಬರುವುದಿದೆ
ಸೋಲುವ ಮಾತಿಲ್ಲ
ಪ್ರಯತ್ನ ಮಾತ್ರ ಬಿಡೋದಿಲ್ಲ
No comments:
Post a Comment