ಇಲ್ಲಿ ನರಕ ಯಾತನೆ
ಎಲ್ಲಕ್ಕೂ ಬೇಕು ಯಾಚನೆ
ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ
ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ
ಅತ್ತ ಹೋಗಲಾರದೆ
ಇತ್ತ ಇರಲಾರದೆ
ಕ್ಷಣ-ಕ್ಷಣವೂ ಹೆಣಗಾಡಬೇಕು
ಪ್ರತಿದಿನವೂ ಶವವಾಗಬೇಕು
ಸಲಾಮು ಹೊಡೆಯಲಾಗದೆ
ಗುಲಾಮಗಿರಿ ಮಾಡಲಾಗದೆ
ನಮ್ಮನ್ನು ನಾವು ಹಿಂಸಿಸಿಕೊಳ್ಳಬೇಕು
ಇದಕ್ಕೆಲ್ಲಾ ಬೇಕು ಸ್ವಾತಂತ್ರ
ಅದಕ್ಕೆ ಮಾಡಬೇಕು ಉಪವಾಸ ಸತ್ಯಾಗ್ರಹ
ಮನದೊಳಗೆ ಧೈರ್ಯತುಂಬಲು ಬೇಕು ಗಾಂಧಿ,ಅಣ್ಣ ಹಜಾರೆ
ಅವರು ಬರುವವರೆಗೂ ಪಡಬೇಕು ನರಕಯಾತನೆ
Monday, May 9, 2011
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment