Monday, May 9, 2011

Nepotism

ಇಲ್ಲಿ ನರಕ ಯಾತನೆ
ಎಲ್ಲಕ್ಕೂ ಬೇಕು ಯಾಚನೆ
ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ
ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ
ಅತ್ತ ಹೋಗಲಾರದೆ
ಇತ್ತ ಇರಲಾರದೆ
ಕ್ಷಣ-ಕ್ಷಣವೂ ಹೆಣಗಾಡಬೇಕು
ಪ್ರತಿದಿನವೂ ಶವವಾಗಬೇಕು
ಸಲಾಮು ಹೊಡೆಯಲಾಗದೆ
ಗುಲಾಮಗಿರಿ ಮಾಡಲಾಗದೆ
ನಮ್ಮನ್ನು ನಾವು ಹಿಂಸಿಸಿಕೊಳ್ಳಬೇಕು
ಇದಕ್ಕೆಲ್ಲಾ ಬೇಕು ಸ್ವಾತಂತ್ರ
ಅದಕ್ಕೆ ಮಾಡಬೇಕು ಉಪವಾಸ ಸತ್ಯಾಗ್ರಹ
ಮನದೊಳಗೆ ಧೈರ್ಯತುಂಬಲು ಬೇಕು ಗಾಂಧಿ,ಅಣ್ಣ ಹಜಾರೆ
ಅವರು ಬರುವವರೆಗೂ ಪಡಬೇಕು ನರಕಯಾತನೆ

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...