Sunday, November 30, 2014
Wednesday, November 26, 2014
ಜೀವನ ರಹಸ್ಯ
ಕ್ಯಾಲೆಂಡಿರಿನ ದಿನಗಳು ಉರುಳಿಹೋಗುತ್ತಿದೆ
ಕಾಲನ ನಡೆ ಎತ್ತ ಕಡೆಗೋ?
ಸಮಯವನ್ನು ಮಾತ್ರ ನಾವು ವ್ಯಯಿಸುತ್ತಿದ್ದೇವೆ
ರಾತ್ರಿ,ಬೆಳಗು ನಿಲ್ಲದ ಚಕ್ರ
ಬದುಕ ಬಂಡಿಯ ಎಳೆಯುತ್ತಿರುವರು ಯಾರು?
ವ್ಯವಸ್ಥಿತ ಪಿತೂರಿ ಕಾಲನದು
ವಯಸ್ಸಾಗುತ್ತಿದ್ದಂತೆ ಶಕ್ತಿ ಕಡಿಮೆ
ಶಕ್ತಿ ಕಡಿಮೆಯಾಗುತ್ತಿದ್ದಂತೆ ಬದುಕಬೇಕೆಂಬ ಚಪಲ ಹೆಚ್ಚು
ಸಾವಿನ ಬಾಗಿಲ ಯಮ ತಟ್ಟುತ್ತಿರುವಾಗ ಜೀವನ ಪ್ರೀತಿ ಸೆಳೆತ ಯಾಕೋ?
ಜಗಳ,ಮನಸ್ತಾಪ,ಹುಚ್ಚು ಮನಗಳ ನಡುವೆ
ಬೇಡವೆಂದರೂ ನಾವೇ ತೋಡುವೆವು ದೊಡ್ಡ ಕಂದಕ
ಕೋಪ,ದ್ವೇಷದ ಕೆನ್ನಾಲಗೆಯ ಚಾಚಿ ಸುಡುವೆವು
ಪ್ರೀತಿ-ಪ್ರೇಮದ ಬಲೆಯ ಕ್ಷಣ ಮಾತ್ರದಿ ಕಳಚುವ ಈ ಪರಿ ಯಾಕೋ?
ಹುಟ್ಟು-ಸಾವು ಜೀವನದ ಎರಡು ಕೊನೆಗಳು
ಜನನ ಆಕಸ್ಮಿಕವಾದರೂ ನಡೆವ ಜೀವನ ದಾರಿ ಸತ್ಯ
ಜೀವನ ಹೀಗೆ ನಡೆಯಬೇಕೆಂಬ ನಿಯಮವಿಲ್ಲ ಯಾರಿಗೂ
ಜೀವನದ ಕೊನೆ ಮುಟ್ಟುವುದು ಅನಿವಾರ್ಯವಾದರೂ ಈ ಜೀವನದ ಅನುಭವದ ಗುರಿಯಾದರೂ ಏನು?
ಬಂದು ಹೋಗುವ ನಡುವೆ ಎಷ್ಟೊಂದು ಬಯಕೆಗಳು
ಕೊನೆ-ಮೊದಲಿಲ್ಲದೆ ಸೆಳೆವುದು,ಕಾಡುವುದು ಸತತ
ನಾನೇ ಎಲ್ಲವೂ,ಎಲ್ಲವೂ ನನ್ನದೇ ಹುಚ್ಚು ಹಂಬಲ
ಎಂದೂ ತನ್ನದಾಗದ,ಯಾರಿಗೂ ಕೈವಶವಾಗದ ಈ ಜೀವನ ರಹಸ್ಯವಾದರೂ ಏನು?
ಕಾಲನ ನಡೆ ಎತ್ತ ಕಡೆಗೋ?
ಸಮಯವನ್ನು ಮಾತ್ರ ನಾವು ವ್ಯಯಿಸುತ್ತಿದ್ದೇವೆ
ರಾತ್ರಿ,ಬೆಳಗು ನಿಲ್ಲದ ಚಕ್ರ
ಬದುಕ ಬಂಡಿಯ ಎಳೆಯುತ್ತಿರುವರು ಯಾರು?
ವ್ಯವಸ್ಥಿತ ಪಿತೂರಿ ಕಾಲನದು
ವಯಸ್ಸಾಗುತ್ತಿದ್ದಂತೆ ಶಕ್ತಿ ಕಡಿಮೆ
ಶಕ್ತಿ ಕಡಿಮೆಯಾಗುತ್ತಿದ್ದಂತೆ ಬದುಕಬೇಕೆಂಬ ಚಪಲ ಹೆಚ್ಚು
ಸಾವಿನ ಬಾಗಿಲ ಯಮ ತಟ್ಟುತ್ತಿರುವಾಗ ಜೀವನ ಪ್ರೀತಿ ಸೆಳೆತ ಯಾಕೋ?
ಜಗಳ,ಮನಸ್ತಾಪ,ಹುಚ್ಚು ಮನಗಳ ನಡುವೆ
ಬೇಡವೆಂದರೂ ನಾವೇ ತೋಡುವೆವು ದೊಡ್ಡ ಕಂದಕ
ಕೋಪ,ದ್ವೇಷದ ಕೆನ್ನಾಲಗೆಯ ಚಾಚಿ ಸುಡುವೆವು
ಪ್ರೀತಿ-ಪ್ರೇಮದ ಬಲೆಯ ಕ್ಷಣ ಮಾತ್ರದಿ ಕಳಚುವ ಈ ಪರಿ ಯಾಕೋ?
ಹುಟ್ಟು-ಸಾವು ಜೀವನದ ಎರಡು ಕೊನೆಗಳು
ಜನನ ಆಕಸ್ಮಿಕವಾದರೂ ನಡೆವ ಜೀವನ ದಾರಿ ಸತ್ಯ
ಜೀವನ ಹೀಗೆ ನಡೆಯಬೇಕೆಂಬ ನಿಯಮವಿಲ್ಲ ಯಾರಿಗೂ
ಜೀವನದ ಕೊನೆ ಮುಟ್ಟುವುದು ಅನಿವಾರ್ಯವಾದರೂ ಈ ಜೀವನದ ಅನುಭವದ ಗುರಿಯಾದರೂ ಏನು?
ಬಂದು ಹೋಗುವ ನಡುವೆ ಎಷ್ಟೊಂದು ಬಯಕೆಗಳು
ಕೊನೆ-ಮೊದಲಿಲ್ಲದೆ ಸೆಳೆವುದು,ಕಾಡುವುದು ಸತತ
ನಾನೇ ಎಲ್ಲವೂ,ಎಲ್ಲವೂ ನನ್ನದೇ ಹುಚ್ಚು ಹಂಬಲ
ಎಂದೂ ತನ್ನದಾಗದ,ಯಾರಿಗೂ ಕೈವಶವಾಗದ ಈ ಜೀವನ ರಹಸ್ಯವಾದರೂ ಏನು?
Saturday, November 22, 2014
ಒಳದನಿ
ನನ್ನೊಳಗೆ ಒಬ್ಬ ಅವಿತಿಹನು
ಯಾವಾಗ ಏಳುವನೋ?
ಯಾವಾಗ ಮಲಗಿರುವನೋ?
ಹೇಳಲಾಗದು ಅವನ ಬಗೆ||
ಏನನ್ನೊ ನೋಡಿದಾಗ
ಮನಕಲಕುವುದ ಕಂಡಾಗ
ಸೌಂದರ್ಯ ಸುಧೆಯ ಅನುಭವಿಸಿದಾಗ
ಕವಿಯಾಗಿ ಹಾಡುವನು ಒಳಗಿಂದೆ||
ನೋವೋ? ನಲಿವೋ?
ಕವಿತೆಯಾಗುವುದು ಅವನಿಂದೆ
ಯಾವ ರಾಗಕ್ಕೂ ಮನಸೋಲದೆ
ಪದಗಳೇ ತಾನಾಗಿ ಹಾರವಾಗುವುದು ತಾಯಿಗೆ||
ಬಾ ಎಂದಾಗ ಬಾರದವನು
ಬರಬೇದವೆಂದಾಗ ಬರುವನು
ಏನ ಹೇಳಲಿ ಅವನ ಚರ್ಯೆ
ಸದಾ ಒಳಒಳಗೆ ಕಾಡುವನು||
ನಾನೇ ಅವನಾಗಿ
ಅವನು ಎಲ್ಲವೂ ಆಗಿ
ಬದುಕ ಪಥವ ಹರವಿದನು
ಅನುಭವ ಸುಧೆಯ ಕುಡಿಸಿದನು||
ಯಾವಾಗ ಏಳುವನೋ?
ಯಾವಾಗ ಮಲಗಿರುವನೋ?
ಹೇಳಲಾಗದು ಅವನ ಬಗೆ||
ಏನನ್ನೊ ನೋಡಿದಾಗ
ಮನಕಲಕುವುದ ಕಂಡಾಗ
ಸೌಂದರ್ಯ ಸುಧೆಯ ಅನುಭವಿಸಿದಾಗ
ಕವಿಯಾಗಿ ಹಾಡುವನು ಒಳಗಿಂದೆ||
ನೋವೋ? ನಲಿವೋ?
ಕವಿತೆಯಾಗುವುದು ಅವನಿಂದೆ
ಯಾವ ರಾಗಕ್ಕೂ ಮನಸೋಲದೆ
ಪದಗಳೇ ತಾನಾಗಿ ಹಾರವಾಗುವುದು ತಾಯಿಗೆ||
ಬಾ ಎಂದಾಗ ಬಾರದವನು
ಬರಬೇದವೆಂದಾಗ ಬರುವನು
ಏನ ಹೇಳಲಿ ಅವನ ಚರ್ಯೆ
ಸದಾ ಒಳಒಳಗೆ ಕಾಡುವನು||
ನಾನೇ ಅವನಾಗಿ
ಅವನು ಎಲ್ಲವೂ ಆಗಿ
ಬದುಕ ಪಥವ ಹರವಿದನು
ಅನುಭವ ಸುಧೆಯ ಕುಡಿಸಿದನು||
Friday, November 21, 2014
ಗುಲಾಬಿ
ಸೂರ್ಯ ಹೊರಳಿದ
ಆಕಾಶ ಮಂಕಾಯಿತು
ಗಾಳಿ ಬಿರುಸಾಗಿ ಬೀಸಿತು
ಬೆನ್ನ ಮೇಲೆ ನಾ ಹೊರಳಿದೆ||
ಮಳೆಗೆರೆಯಿತು
ನೀರಲ್ಲಿ ಮುಳುಗಿದೆ
ತಲೆ ಎತ್ತಿ ನಿಂತೆ
ಮಳೆ ನೀರು ಕುಡಿಯುತ್ತಾ||
ಉತ್ಸಾಹ ಇಮ್ಮಡಿಸಿತು
ನನ್ನೊಳಗೆ ಹೇಳಿಕೊಂಡೆ" ದಯವಿಟ್ಟು ಅಳಬೇಡ"
ನನ್ನ ದಳಗಳು ಕಣ್ಣೊರೆಸಿದವು
ಅವು ಒಣಗುವವರೆಗೂ||
ಮೋಡಗಳು ಕಣ್ಮರೆಯಾದವು
ಸೂರ್ಯ ಮೆಲ್ಲಗೆ ಕಣ್ತೆರೆದ
ನನ್ನೊಳಗಿನ ಸೌಂದರ್ಯ
ಆಗ ತಾನೆ ಬೆಳಗಲು ಶುರುವಾಯಿತು||
ಪ್ರೇರಣೆ: ' The Rose' by Bille Jo.
ಆಕಾಶ ಮಂಕಾಯಿತು
ಗಾಳಿ ಬಿರುಸಾಗಿ ಬೀಸಿತು
ಬೆನ್ನ ಮೇಲೆ ನಾ ಹೊರಳಿದೆ||
ಮಳೆಗೆರೆಯಿತು
ನೀರಲ್ಲಿ ಮುಳುಗಿದೆ
ತಲೆ ಎತ್ತಿ ನಿಂತೆ
ಮಳೆ ನೀರು ಕುಡಿಯುತ್ತಾ||
ಉತ್ಸಾಹ ಇಮ್ಮಡಿಸಿತು
ನನ್ನೊಳಗೆ ಹೇಳಿಕೊಂಡೆ" ದಯವಿಟ್ಟು ಅಳಬೇಡ"
ನನ್ನ ದಳಗಳು ಕಣ್ಣೊರೆಸಿದವು
ಅವು ಒಣಗುವವರೆಗೂ||
ಮೋಡಗಳು ಕಣ್ಮರೆಯಾದವು
ಸೂರ್ಯ ಮೆಲ್ಲಗೆ ಕಣ್ತೆರೆದ
ನನ್ನೊಳಗಿನ ಸೌಂದರ್ಯ
ಆಗ ತಾನೆ ಬೆಳಗಲು ಶುರುವಾಯಿತು||
ಪ್ರೇರಣೆ: ' The Rose' by Bille Jo.
ಬಿರುಗಾಳಿ
ನಾನು,ನಾನೊಂತರ ಸರ್ವಾಂತರ್ಯಾಮಿಯಂತೆ
ಮಾಳಿಗೆ,ಮಣ್ಣು ಹಾಗು ಆತ್ಮಗಳಲ್ಲಿ ನೆಲೆಸಿರುವೆ ಕಂಬನಿಗೆರೆಯುತ್ತಾ;
ಮಳೆಗೆರೆಯುವೆ ಅಳುವುದಕ್ಕಾಗಿ
ನಾನು ಸಾವಿಲ್ಲದವನು;
ಆಲಿಕಲ್ಲು,ಹಿಮ ಹಾಗು ಚಂಡಮಾರುತಗಳೆಲ್ಲಾ ನನ್ನದೇ ಆಟಗಳು
ನನಗೆ ಯಾವಾಗಲೂ ಮನುಷ್ಯರ ಬೇರೆ ಬೇರೆ ಹೆಸರುಗಳ ಆರೋಪಿಸುವರು;
ಜನರೆಲ್ಲಾ ನನ್ನನ್ನು ದ್ವೇಷಿಸುವರು ಹಾಗು ನನ್ನ ಮೇಲೆ ಹೋರಾಡಲು ಪ್ರಯತ್ನಿಸುವರು
ರಾತ್ರಿಯಲ್ಲಿ ನಾನು ಮರೆಯಾಗುವವರೆಗೂ ಅವರ ಪ್ರಯತ್ನ ನಡದೇ ಇರುತ್ತದೆ;
ಸಂಭ್ರಮಿಸುತ್ತಾರೆ ಈ ಜನ ನಾನು ಮತ್ತೆ ಬರುವವರೆಗೂ
ಅವರ ಒಳಒಳಗೇ ಕುದಿಯುತ್ತಿದೆ ನನ್ನ ಮೇಲಿನ ಕೋಪ ಹಾಗು ದ್ವೇಷ;
ಆದರೂ ನನ್ನಂತೆಯೇ ಇದ್ದಾನೆ ಮತ್ತೊಬ್ಬ
ಅವನ ನಿಮ್ಮೆಲ್ಲರ ಹೃದಯಗಳಲ್ಲಿ ಕಂಡು ಕಾಣದ ಹಾಗೆ,ನಿಮಗೆ ಏಕೆ ಕಾಣಿಸುವುದಿಲ್ಲ?;
ನಾನು ಇಲ್ಲಿ ಬರುವೆ ಹಾಗು ಹೋಗುವೆ
ನನ್ನಿಂದ ಗಾಳಿ,ಮಳೆ,ಮುರಿದ ಮನ ಹಾಗು ಹಿಮ;
ನೆನಪಿರಲಿ,ನೀವು ತಿಳಿಕೊಂಡಿರಬಹುದು ಬಿರುಗಾಳಿ ಹೊರಟುಹೋಯಿತೆಂದು
ಆದರೆ ಹಲವು ಹೃದಯಗಳಲ್ಲಿ ಬಿರುಗಾಳಿ ಯಾವಾಗಲೂ ಇದ್ದೇ ಇರುತ್ತದೆ;
ಪ್ರೇರಣೆ: 'Strom' by Melody Tadeo
ಮಾಳಿಗೆ,ಮಣ್ಣು ಹಾಗು ಆತ್ಮಗಳಲ್ಲಿ ನೆಲೆಸಿರುವೆ ಕಂಬನಿಗೆರೆಯುತ್ತಾ;
ಮಳೆಗೆರೆಯುವೆ ಅಳುವುದಕ್ಕಾಗಿ
ನಾನು ಸಾವಿಲ್ಲದವನು;
ಆಲಿಕಲ್ಲು,ಹಿಮ ಹಾಗು ಚಂಡಮಾರುತಗಳೆಲ್ಲಾ ನನ್ನದೇ ಆಟಗಳು
ನನಗೆ ಯಾವಾಗಲೂ ಮನುಷ್ಯರ ಬೇರೆ ಬೇರೆ ಹೆಸರುಗಳ ಆರೋಪಿಸುವರು;
ಜನರೆಲ್ಲಾ ನನ್ನನ್ನು ದ್ವೇಷಿಸುವರು ಹಾಗು ನನ್ನ ಮೇಲೆ ಹೋರಾಡಲು ಪ್ರಯತ್ನಿಸುವರು
ರಾತ್ರಿಯಲ್ಲಿ ನಾನು ಮರೆಯಾಗುವವರೆಗೂ ಅವರ ಪ್ರಯತ್ನ ನಡದೇ ಇರುತ್ತದೆ;
ಸಂಭ್ರಮಿಸುತ್ತಾರೆ ಈ ಜನ ನಾನು ಮತ್ತೆ ಬರುವವರೆಗೂ
ಅವರ ಒಳಒಳಗೇ ಕುದಿಯುತ್ತಿದೆ ನನ್ನ ಮೇಲಿನ ಕೋಪ ಹಾಗು ದ್ವೇಷ;
ಆದರೂ ನನ್ನಂತೆಯೇ ಇದ್ದಾನೆ ಮತ್ತೊಬ್ಬ
ಅವನ ನಿಮ್ಮೆಲ್ಲರ ಹೃದಯಗಳಲ್ಲಿ ಕಂಡು ಕಾಣದ ಹಾಗೆ,ನಿಮಗೆ ಏಕೆ ಕಾಣಿಸುವುದಿಲ್ಲ?;
ನಾನು ಇಲ್ಲಿ ಬರುವೆ ಹಾಗು ಹೋಗುವೆ
ನನ್ನಿಂದ ಗಾಳಿ,ಮಳೆ,ಮುರಿದ ಮನ ಹಾಗು ಹಿಮ;
ನೆನಪಿರಲಿ,ನೀವು ತಿಳಿಕೊಂಡಿರಬಹುದು ಬಿರುಗಾಳಿ ಹೊರಟುಹೋಯಿತೆಂದು
ಆದರೆ ಹಲವು ಹೃದಯಗಳಲ್ಲಿ ಬಿರುಗಾಳಿ ಯಾವಾಗಲೂ ಇದ್ದೇ ಇರುತ್ತದೆ;
ಪ್ರೇರಣೆ: 'Strom' by Melody Tadeo
ಮುರಿದ ವಂಶವೃಕ್ಷ
ನಾನೂ ಒಬ್ಬ ಹಲವರಲ್ಲಿ
ಮುರಿದ ಕೊಂಬೆಗಳ ಮರದ ಚಿಕ್ಕ ರೆಂಬೆ ನಾನು;
ಯಾವಾಗಲೂ ಮೇಲಕ್ಕೇರಿರುವ ರೆಂಬೆಗಳನ್ನೇ ಅನುಸರಿಸಿದವನು;
ರಕ್ಷಣೆ,ಮಾರ್ಗದರ್ಶನ ಹಾಗು ಆಂತರಿಕಶಕ್ತಿಗಾಗಿ;
ಚಿಕ್ಕದಾದರೂ ಬೇರೆ ರೆಂಬೆಗಳು
ಮುರಿದುಹೋಗದಂತೆ ತಡೆಯಲೆತ್ನಿಸುತ್ತಿರುವವನು;
ಯಾರು ಕಳಚಿಕೊಳ್ಳುವರೋ?
ಯಾರು ಜೊತೆಯಲ್ಲಿ ಉಳಿವರೋ?
ಈಗ ನಾನು ಒಬ್ಬಂಟಿಯಾಗಿ ನಿಂತಿದ್ದೇನೆ
ಮಳೆಯಿಂದ ತೊಯ್ದ ಭೂಮಿಯನ್ನು ನೋಡುತ್ತಿದ್ದೇನೆ
ಹಾಗು ಅನುಭವಿಸುತ್ತಿದ್ದೇನೆ ಮುರಿದ ರೆಂಬೆಗಳ ಭಾವ
ಮನದಲ್ಲಿ ನೋವ ಹರಡಿದೆ;
ಎಷ್ಟು ಜನ ಗರಗಸದಿದ್ಮ ತಮ್ಮತನವ ಬೇರ್ಪಡಿಸಿಕೊಂಡರೋ
ನಮ್ಮ ಸಂಸ್ಕೃತಿಯ ಬೇರುಗಳ ಕಿತ್ತುಕೊಂಡರೋ
ನಮ್ಮ ನಾಶದ ದಿಕ್ಸೂಚಿಯ ತಲೆಮಾರಿನ ತಲೆಗಳಲ್ಲಿ ಬಿತ್ತಿದರೋ
ನನಗೇನಾದರೂ ಅಂತಹ ಗರಗಸ ಕೈಗೆ ಸಿಕ್ಕಿದ್ದೇ ಆದರೆ
ಸಮುದ್ರದಾಳಕ್ಕೆ ಎಸೆಯುವೆ ಮತ್ತೆ ಯಾರಿಗೂ ಸಿಗದ ಹಾಗೆ
ನನ್ನ ಮುಂದಿನ ತಲೆಮಾರುಗಳ ನಾಶವಾಗದಂತೆ ರಕ್ಷಿಸುವೆ;
ನಾನೂ ಒಬ್ಬ ಹಲವರಲ್ಲಿ
ಆದರೂ ಒಬ್ಬನೇ ಹೊರಡುತ್ತಿದ್ದೇನೆ
ಹೊಸ ಮನ್ವಂತರದ ಬೀಜಗಳ ಬಿತ್ತುವೆ
ಸುಂದರ ವೃಕ್ಷಗಳ ಅದರಿಂದ ಬೆಳೆಯುವೆ;
ಪ್ರೇರಣೆ:' A Broken Familiy Tree'
By Lori McBride.
ಮುರಿದ ಕೊಂಬೆಗಳ ಮರದ ಚಿಕ್ಕ ರೆಂಬೆ ನಾನು;
ಯಾವಾಗಲೂ ಮೇಲಕ್ಕೇರಿರುವ ರೆಂಬೆಗಳನ್ನೇ ಅನುಸರಿಸಿದವನು;
ರಕ್ಷಣೆ,ಮಾರ್ಗದರ್ಶನ ಹಾಗು ಆಂತರಿಕಶಕ್ತಿಗಾಗಿ;
ಚಿಕ್ಕದಾದರೂ ಬೇರೆ ರೆಂಬೆಗಳು
ಮುರಿದುಹೋಗದಂತೆ ತಡೆಯಲೆತ್ನಿಸುತ್ತಿರುವವನು;
ಯಾರು ಕಳಚಿಕೊಳ್ಳುವರೋ?
ಯಾರು ಜೊತೆಯಲ್ಲಿ ಉಳಿವರೋ?
ಈಗ ನಾನು ಒಬ್ಬಂಟಿಯಾಗಿ ನಿಂತಿದ್ದೇನೆ
ಮಳೆಯಿಂದ ತೊಯ್ದ ಭೂಮಿಯನ್ನು ನೋಡುತ್ತಿದ್ದೇನೆ
ಹಾಗು ಅನುಭವಿಸುತ್ತಿದ್ದೇನೆ ಮುರಿದ ರೆಂಬೆಗಳ ಭಾವ
ಮನದಲ್ಲಿ ನೋವ ಹರಡಿದೆ;
ಎಷ್ಟು ಜನ ಗರಗಸದಿದ್ಮ ತಮ್ಮತನವ ಬೇರ್ಪಡಿಸಿಕೊಂಡರೋ
ನಮ್ಮ ಸಂಸ್ಕೃತಿಯ ಬೇರುಗಳ ಕಿತ್ತುಕೊಂಡರೋ
ನಮ್ಮ ನಾಶದ ದಿಕ್ಸೂಚಿಯ ತಲೆಮಾರಿನ ತಲೆಗಳಲ್ಲಿ ಬಿತ್ತಿದರೋ
ನನಗೇನಾದರೂ ಅಂತಹ ಗರಗಸ ಕೈಗೆ ಸಿಕ್ಕಿದ್ದೇ ಆದರೆ
ಸಮುದ್ರದಾಳಕ್ಕೆ ಎಸೆಯುವೆ ಮತ್ತೆ ಯಾರಿಗೂ ಸಿಗದ ಹಾಗೆ
ನನ್ನ ಮುಂದಿನ ತಲೆಮಾರುಗಳ ನಾಶವಾಗದಂತೆ ರಕ್ಷಿಸುವೆ;
ನಾನೂ ಒಬ್ಬ ಹಲವರಲ್ಲಿ
ಆದರೂ ಒಬ್ಬನೇ ಹೊರಡುತ್ತಿದ್ದೇನೆ
ಹೊಸ ಮನ್ವಂತರದ ಬೀಜಗಳ ಬಿತ್ತುವೆ
ಸುಂದರ ವೃಕ್ಷಗಳ ಅದರಿಂದ ಬೆಳೆಯುವೆ;
ಪ್ರೇರಣೆ:' A Broken Familiy Tree'
By Lori McBride.
ಅನುಭವ
ಅದು ತುಂಬಾ ಕಷ್ಟ
ಮನಸುಗಳ ಒಳಹೊಕ್ಕು
ತುಕ್ಕು ಹಿಡಿದ ಅಂತರಂಗವ
ಸೋಸಿ ನೋಡುವುದು ಬಲುಕಷ್ಟ||
ಹೇಳುವುದು ಸುಲಭ
ಮಾಡಿದ ಅಡುಗೆಗೆ ರಾಗ ತೆಗೆವುದು ಸುಲಭ
ರುಚಿರಿಚಿಯಾಗಿ ಅಡುಗೆ ಮಾಡುವುದು ಕಷ್ಟ
ಮಾಡುವವನ ಕಷ್ಟ ಹೇಳುವುದರಲ್ಲಿಲ್ಲ||
ಮೂಗಿನ ನೇರಕ್ಕೆ ಹೇಳುವುದು
ಎಲ್ಲವ್ಯ್ ಸುಲಭವೆನ್ನುವ ಭ್ರಮೆಗೆ ಎಲ್ಲರೂ ಬಲಿ
ಮಾಡುವಾಗಿನ ರಸ ಸಮಯದ ಅನುಭವ
ಕಾವ್ಯ ಮೆಲ್ಲುವ ರಸಿಕನೇ ಬಲ್ಲ||
ಮನಸುಗಳ ಒಳಹೊಕ್ಕು
ತುಕ್ಕು ಹಿಡಿದ ಅಂತರಂಗವ
ಸೋಸಿ ನೋಡುವುದು ಬಲುಕಷ್ಟ||
ಹೇಳುವುದು ಸುಲಭ
ಮಾಡಿದ ಅಡುಗೆಗೆ ರಾಗ ತೆಗೆವುದು ಸುಲಭ
ರುಚಿರಿಚಿಯಾಗಿ ಅಡುಗೆ ಮಾಡುವುದು ಕಷ್ಟ
ಮಾಡುವವನ ಕಷ್ಟ ಹೇಳುವುದರಲ್ಲಿಲ್ಲ||
ಮೂಗಿನ ನೇರಕ್ಕೆ ಹೇಳುವುದು
ಎಲ್ಲವ್ಯ್ ಸುಲಭವೆನ್ನುವ ಭ್ರಮೆಗೆ ಎಲ್ಲರೂ ಬಲಿ
ಮಾಡುವಾಗಿನ ರಸ ಸಮಯದ ಅನುಭವ
ಕಾವ್ಯ ಮೆಲ್ಲುವ ರಸಿಕನೇ ಬಲ್ಲ||
ಕಷ್ಟ
ಅದು ತುಂಬಾ ಕಷ್ಟ
ನಾನು ಎಲ್ಲವನ್ನೂ ಎದುರಿಸುತ್ತಿದ್ದೇನೆ
ನೀನು ಕಾಣನಹುದು ನನ್ನ ಹೋರಾಟವನ್ನು
ಅದರೆ ನಾನು ಬೀಳುವುದ ನೀ ಎಂದೂ ನೋಡಲಾರೆ||
ಪ್ರೇರಣೆ: Joyce Alcantara
ನಾನು ಎಲ್ಲವನ್ನೂ ಎದುರಿಸುತ್ತಿದ್ದೇನೆ
ನೀನು ಕಾಣನಹುದು ನನ್ನ ಹೋರಾಟವನ್ನು
ಅದರೆ ನಾನು ಬೀಳುವುದ ನೀ ಎಂದೂ ನೋಡಲಾರೆ||
ಪ್ರೇರಣೆ: Joyce Alcantara
Monday, November 3, 2014
ಆ ಲೋಕ ಧರೆಗಿಳಿವುದೆಂತು?
ಕನಸು, ಮನಸಿನೊಳಗಿನ ಕನಸು
ಮನದ ಕನವರಿಕೆಯ ಕನಸು
ಕತ್ತಲಾಚೆಯ ಕನಸಲೋಕ
ಸೇರುವುದೆಂತು? ಬಳಸುವುದೆಂತು?
ಕೈಗೆ ಸಿಗದ,ಕಣ್ಣಿಗೆ ಕಾಣದ
ಆ ಲೋಕ ಇರುವುದೆಂತು?
ಭ್ರಮೆಯಲ್ಲೋ? ಇಲ್ಲ ವಾಸ್ತವದಲ್ಲೋ?
ದಾರಿ ತೋರುವರಾರು?
ಸುಂದರ ನೋಟ,
ಆಲಿಂಗನ,ಸಂತೋಷ,ಆಮೋಧ......
ಬೇಸರಿಸದೆ ಅನುಭವಿಸುವ ಆ ಪರಿ ಅಮೋಘ;
ಭರವಸೆಯ ಹೊಂಗಿರಣ ಹೊಮ್ಮಿಬರುತ್ತಲೇ
ಹೃದಯ ಎಲ್ಲವನ್ನೂ ಆಪೋಷಣ ಮಾಡಿದೆ
ಹೃದಯ ತುಂಬಿದರೂ ಉಕ್ಕಿ ಹರಿಯುತ್ತಲೇ ಇದೆ
ನೋವಿಲ್ಲದ,ಹಸಿವಿಲ್ಲದ,ಭಯವಿಲ್ಲದ
ಆ ಲೋಕ ಧರೆಗಿಳಿವುದೆಂತು?
ಮನದ ಕನವರಿಕೆಯ ಕನಸು
ಕತ್ತಲಾಚೆಯ ಕನಸಲೋಕ
ಸೇರುವುದೆಂತು? ಬಳಸುವುದೆಂತು?
ಕೈಗೆ ಸಿಗದ,ಕಣ್ಣಿಗೆ ಕಾಣದ
ಆ ಲೋಕ ಇರುವುದೆಂತು?
ಭ್ರಮೆಯಲ್ಲೋ? ಇಲ್ಲ ವಾಸ್ತವದಲ್ಲೋ?
ದಾರಿ ತೋರುವರಾರು?
ಸುಂದರ ನೋಟ,
ಆಲಿಂಗನ,ಸಂತೋಷ,ಆಮೋಧ......
ಬೇಸರಿಸದೆ ಅನುಭವಿಸುವ ಆ ಪರಿ ಅಮೋಘ;
ಭರವಸೆಯ ಹೊಂಗಿರಣ ಹೊಮ್ಮಿಬರುತ್ತಲೇ
ಹೃದಯ ಎಲ್ಲವನ್ನೂ ಆಪೋಷಣ ಮಾಡಿದೆ
ಹೃದಯ ತುಂಬಿದರೂ ಉಕ್ಕಿ ಹರಿಯುತ್ತಲೇ ಇದೆ
ನೋವಿಲ್ಲದ,ಹಸಿವಿಲ್ಲದ,ಭಯವಿಲ್ಲದ
ಆ ಲೋಕ ಧರೆಗಿಳಿವುದೆಂತು?
ಕವಿತೆಯ ದನಿ
ಕವಿತೆ,ಕವಿತೆ
ತಾಯ ಮಮತೆಯಾಗಿ ನಿಂದೆ
ಏನೋ ಹೇಳ ಹೊರಟೆ?
ಎತ್ತಲಿಂದಲೋ ಬಂದೆ ಮಿಂಚಿ ಮಾಯವಾದೆ
ನಾನಿಹನೆಂದು ಸಾರ ಹೊರಟೆ;
ನೀತಿ,ತತ್ವ, ಸಂಪ್ರದಾಯ,ಸಂಸ್ಕೃತಿಯ ಮುಖವಾಡವಾದೆ
ಎಲ್ಲವೂ ತಾನೇ ಆಗಿ,ಎಲ್ಲವನ್ನೂ ಮೀರಿ ಹೊರಟೆ;
ಪ್ರೀತಿ,ದ್ವೇಷ,ಶೋಷಣೆಯ ದನಿಯಾಗಿ ಕಿಚ್ಚು ಹೊತ್ತಿಸಿದೆ
ಸರ್ವೋದಯ,ಸಮತೆಯ ಹಣತೆಯ ಹಚ್ಚ ಹೊರಟೆ;
ನೋವು ನವಿವು,ಭಾವ,ಉದ್ವಿಗ್ನ ಮನದ ತೊಳಲಾಟದ ದನಿಯಾದೆ
ಸಾಂತ್ವನ ಹೇಳುವ ತಾಯ ಕರುಳಾಗ ಹೊರಟೆ;
ಬದುಕ ದಾರಿಯ ಕತ್ತಲ ನೆಲಮಾಳಿಗೆಯ ಪಯಣದ ಜೊತೆಗಾರನಾದೆ
ನಿನ್ನಿರುವ ಅನ್ವೇಷಿಸುವ ಅನ್ವೇಷಕ ನಾನಾಗ ಹೊರಟೆ;
ಬಾ ಎನ್ನೆದೆಯ ಮನದ ಬಾಂದಳಕೆ
ಮನವ ಮಥಿಸಿ ಕವಿತೆಯಾಗಿ ಹೊಮ್ಮಿ ಬಾ
ಮನೆಯಂಗಳಕೆ,ಮನದಂಗಳಕೆ
ಚೈತನ್ಯದ ಚಿಲುಮೆಯಾಗಿ, ಒಲುಮೆಯಾಗಿ ಬಾ.
ತಾಯ ಮಮತೆಯಾಗಿ ನಿಂದೆ
ಏನೋ ಹೇಳ ಹೊರಟೆ?
ಎತ್ತಲಿಂದಲೋ ಬಂದೆ ಮಿಂಚಿ ಮಾಯವಾದೆ
ನಾನಿಹನೆಂದು ಸಾರ ಹೊರಟೆ;
ನೀತಿ,ತತ್ವ, ಸಂಪ್ರದಾಯ,ಸಂಸ್ಕೃತಿಯ ಮುಖವಾಡವಾದೆ
ಎಲ್ಲವೂ ತಾನೇ ಆಗಿ,ಎಲ್ಲವನ್ನೂ ಮೀರಿ ಹೊರಟೆ;
ಪ್ರೀತಿ,ದ್ವೇಷ,ಶೋಷಣೆಯ ದನಿಯಾಗಿ ಕಿಚ್ಚು ಹೊತ್ತಿಸಿದೆ
ಸರ್ವೋದಯ,ಸಮತೆಯ ಹಣತೆಯ ಹಚ್ಚ ಹೊರಟೆ;
ನೋವು ನವಿವು,ಭಾವ,ಉದ್ವಿಗ್ನ ಮನದ ತೊಳಲಾಟದ ದನಿಯಾದೆ
ಸಾಂತ್ವನ ಹೇಳುವ ತಾಯ ಕರುಳಾಗ ಹೊರಟೆ;
ಬದುಕ ದಾರಿಯ ಕತ್ತಲ ನೆಲಮಾಳಿಗೆಯ ಪಯಣದ ಜೊತೆಗಾರನಾದೆ
ನಿನ್ನಿರುವ ಅನ್ವೇಷಿಸುವ ಅನ್ವೇಷಕ ನಾನಾಗ ಹೊರಟೆ;
ಬಾ ಎನ್ನೆದೆಯ ಮನದ ಬಾಂದಳಕೆ
ಮನವ ಮಥಿಸಿ ಕವಿತೆಯಾಗಿ ಹೊಮ್ಮಿ ಬಾ
ಮನೆಯಂಗಳಕೆ,ಮನದಂಗಳಕೆ
ಚೈತನ್ಯದ ಚಿಲುಮೆಯಾಗಿ, ಒಲುಮೆಯಾಗಿ ಬಾ.
Subscribe to:
Posts (Atom)
ಸಂತೋಷದ ಋಣ
ನೀ ಯಾರಾದರೇನು ? ನಿನ್ನಲ್ಲಿ ಏನಿದ್ದರೇನು ? ಮನದೊಳ ಭಾವಗುಣದಂತೆ , ದಕ್ಕುವುದು ನಿನಗೆ ಸಂತೋಷದ ಋಣ . ಮನದ ರಂಗಮಂಚದಲಿ ನಡೆದಿದೆ ತಾಲೀಮು , ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!