Sunday, May 25, 2014

ಯಾರ ತೊಳಲಾಟದ ಶಾಪವೋ?

ಸತ್ಯ ಹೇಳಲೇಬೇಕಾಗಿದೆ
ನಿನ್ನ ಅವಶ್ಯಕತೆ ನನಗಿದೆಯೆಂದು
ನಿನ್ನೊಂದಿಗಿನ ಮಾತುಗಳ,
ರಾತ್ರಿಗಳ ಕಳೆದುಕೊಂಡಿದ್ದೇನೆ
ಹಂಚಿಕೊಂಡ ದುಃಖ,ನಗು ಎಲ್ಲಿ ಹೋಯಿತೋ?||

ನಮ್ಮೊಳಡಗಿರುವ ಅನಂತ ಚೈತನ್ಯ
ಭೂಮಿಯ ಒಂದು ತುದಿಯಿಂದ
ಮತ್ತೊಂದು ತುದಿಗೆ ಹೊರಳುವುದೇ?
ನಮ್ಮ ಇರುವಿಕೆಯ ಅನುಭವ ನಮಗಾಗುವುದೇ?
ಏಕೆ ಬಂದೆವೋ? ಈ ಬದುಕ ಗುರಿ ಏನೋ?||

ಒಂದೇ ನಾನು,ನೀನು
ಆದರೂ ತುದಿಗಾಲಲ್ಲಿ ನಿಂತಿದ್ದೇವೆ
ಹೊಡೆದಾಡಲು,ಬೈದಾಡಲು
ಮಮತೆಯ ಮನಸುಗಳ ದ್ವೇಷ
ಯಾರ ತೊಳಲಾಟದ ಶಾಪವೋ?||

ಅರ್ಥವಾಗಿದೆ ಮನಸ್ಸಿನ ತೊಳಲಾಟ
ಸಂತೈಸದ ಈ ಮನಸ್ಸಿಗೆ ನೋವಿದೆ
ನನ್ನೊಳಗಿನ ನೋವುಗಳು ನಿನ್ನ ಮನದಲ್ಲಿ
ಆತಂಕ ಹೆಚ್ಚಿಸಬಹುದೆಂಬ ಭಯ ಮನದಲ್ಲಿ
ಮೂಡಿ ಮಾತು ಬಾರದಾಗಿದೆಯೇನೋ?||

ಎಲ್ಲಕ್ಕೂ ಕೊನೆಯಿದೆಯಲ್ಲವೇ?
ಇತಿಹಾಸದಲ್ಲಿ ಮೆರೆದವರೆಲ್ಲರೂ
ಏನಾದರೋ ಅಚ್ಚಳಿಯದೆ ಉಳಿದಿದೆ
ಎಲ್ಲವೂ ಬದಲಾಗಲಿದೆ
ನನ್ನೊಳಗಿನ ನೋವುಗಳಿಗೆ ಸಾವು ಬರಲಿದೆ
ಅದುಮಿಟ್ಟುಕೊಂಡಿರುವ ಮಾತುಗಳೆಲ್ಲಾ ಮಧುರವಾಗಿ
ಚಿಗುರೊಡೆಯುವುದೇ ಮತ್ತೆ?||

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...