Monday, June 17, 2013

ಬೆಲೆ ಏರಿಕೆ- ತೋರಿಕೆ

ಸಾರಿಗೆ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ
ಸಾಮಾನ್ಯ, ಬಡ ಜನತೆಗೆ ತರಿಸಿದೆ ಸರ್ಕಾರದ ನಡತೆಯಿಂದ ವಾಕರಿಕೆ
ಮುಖ್ಯಮಂತ್ರಿ,ಸಾರಿಗೆ ಸಚಿವರ ಗೂಸುಂಬೆತನದ ವಾಸ್ತವಿಕತೆಯ ತೋರಿಕೆ
ಕೈಲಾಗದವರು ಮಾತ್ರ ಹೊರೆಯನ್ನು ಜನತೆಯ ಮೇಲೆ ಹೊರೆಸಿ ತೊಳೆದುಕೊಳ್ಳುವರು ತಮ್ಮ ಕೈ
ಎಂದಾದರೂ ತಮ್ಮ ಬೆವರ ಹನಿಯ ಸಂಪಾದನೆಯಿಂದ ಹಣತೆತ್ತು
ಪ್ರಯಾಣಿಸಿದ್ದರೆ ಗೊತ್ತಾಗುತ್ತಿತ್ತು ಬಡಜನರ ಚಡಪಡಿಕೆ||

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...