Saturday, May 14, 2011

ಸಿಹಿ ದಿನ

ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ
ಕಾಲು ಕರೆದಲ್ಲಿಗೆ ತಡಮಾಡದೆ
ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ
ಆದರೂ ನಡೆದಿದೆ ತೊಂದರೆ ಇಲ್ಲದೆ\\

ನನ್ನಿಂದ ಏನಾಗಬೇಕೋ ತಿಳಿದಿಲ್ಲ
ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ
ಮನದಲ್ಲಿ ಮಾತ್ರ ಶಾಂತಿ ಇನ್ನೂ ನೆಲಸಿಲ್ಲ
ಒಂದಾದ ಮೇಲೆ ಒಂದು ಚಿಂತೆ ಮನದ ಮೇಲೆರಗಿದೆ\\

ದಿನವೂ ಬೆಳಕು ಮೊಡಿ
ಮನದಲ್ಲಿ ಹೊಸ ಚೈತನ್ಯ ಹಾಡಿದೆ
ಅದೇ ಹಾಡು, ಅದೇ ರಾಗ
ಭಾವ ಮಾತ್ರ ಬೇರೆ ಬೇರೆ\\

ನಿನ್ನೆಯ ಕಹಿ ನೆನಪ ಮರೆಸಿ
ನಾಳೆಯ ಸಿಹಿ ಅನುಭವವ ತಂದಿದೆ\\

Wednesday, May 11, 2011

ಭರವಸೆಯ ಹಾದಿ

ನನಗನಿಸಿ ಬಹು ದಿನಗಳಾದವು
ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ

ಎಲ್ಲೇ ಹೋದರೂ,ಏನೇ ಮಾಡಿದರೂ
ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ
ಏಕೆ ಹೀಗೆ ಒಂದೂ ತಿಳಿದಿಲ್ಲ
ಮನದಲ್ಲಿ ಮಾತ್ರ ನೋವಿನ ಗಂಟು ಭಾರವಾಗುತ್ತಿದೆ ಎನಿಸಿದೆ

ಏಳಿಗೆ ಕಾಣುತ್ತಿಲ್ಲ,
ನಿರ್ವಹಣೆಗೇನೂ ತೊಂದರೆಯಿಲ್ಲ
ಮನಸ್ಸು ಮಾತ್ರ ತೊಳಲಿದೆ
ಕಾಣದ ಗುರಿಯ ಕಡೆಗೆ ಹೊರಳಿದೆ

ನಾಳೆಯೆಂಬ ಭರವಸೆಯ ಹೊಂಗನಸು
ದಿನದಿನವೂ ಮುಂದೆ ಜೀವನವ ನಡೆಸಿದೆ
ಮಾಗಿದಂತೆ ಹೊಸ ಹೊಸ ಉತ್ಸಾಹ
ಮತ್ತೆ ಮತ್ತೆ ಮನದಲ್ಲಿ ಮೊಡಿಸಿದೆ

ನಾಳೆಯು ನನ್ನದೇ
ನನ್ನ ಕಾಲವೂ ಬರುವುದಿದೆ
ಸೋಲುವ ಮಾತಿಲ್ಲ
ಪ್ರಯತ್ನ ಮಾತ್ರ ಬಿಡೋದಿಲ್ಲ

Monday, May 9, 2011

Nepotism

ಇಲ್ಲಿ ನರಕ ಯಾತನೆ
ಎಲ್ಲಕ್ಕೂ ಬೇಕು ಯಾಚನೆ
ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ
ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ
ಅತ್ತ ಹೋಗಲಾರದೆ
ಇತ್ತ ಇರಲಾರದೆ
ಕ್ಷಣ-ಕ್ಷಣವೂ ಹೆಣಗಾಡಬೇಕು
ಪ್ರತಿದಿನವೂ ಶವವಾಗಬೇಕು
ಸಲಾಮು ಹೊಡೆಯಲಾಗದೆ
ಗುಲಾಮಗಿರಿ ಮಾಡಲಾಗದೆ
ನಮ್ಮನ್ನು ನಾವು ಹಿಂಸಿಸಿಕೊಳ್ಳಬೇಕು
ಇದಕ್ಕೆಲ್ಲಾ ಬೇಕು ಸ್ವಾತಂತ್ರ
ಅದಕ್ಕೆ ಮಾಡಬೇಕು ಉಪವಾಸ ಸತ್ಯಾಗ್ರಹ
ಮನದೊಳಗೆ ಧೈರ್ಯತುಂಬಲು ಬೇಕು ಗಾಂಧಿ,ಅಣ್ಣ ಹಜಾರೆ
ಅವರು ಬರುವವರೆಗೂ ಪಡಬೇಕು ನರಕಯಾತನೆ

Tuesday, May 3, 2011

ಒಸಾಮಾಸುರನ ಹತ್ಯೆ

ಅವನೊಬ್ಬ ಮಾನವೀಯತೆಯ ಶತೃ
ರಕ್ತಪೀಪಾಸು,
ಧರ್ಮಾಂದ,
ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ
ಯಾವುದೋ ಧರ್ಮರಕ್ಷಕನಂತೆ
ತನ್ನನ್ನೇ ತಾನು ರಕ್ಷಿಸಿಕೊಳ್ಳದವನು
ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ
ತಲೆಕೆಟ್ಟವರನ್ನು ತಯಾರುಮಾಡುವ ಕಾರ್ಖಾನೆ ನಡೆಸುವನಂತೆ
ಕೈಗೆ ಎಕೆ ೪೭ ಮೆಷಿನ್ ಗನ್ನು ನೀಡಿ ಯಾರುಯಾರನ್ನು ಸಾಯಿಸಬೇಕೆಂದು ನಿರ್ದೇಶಿಸುವನಂತೆ
ನಮ್ಮ ಕನ್ನಡ ಚಿತ್ರ ನಿರ್ದೇಶಕರು ರೌಡಿಗಳನ್ನು ಸಾಯಿಸುವಂತೆ
ದೊಡ್ಡ ದೊಡ್ಡ ಕಟ್ಟಡಗಳಿಗೆ ವಿಮಾನಗಳ ಡಿಕ್ಕಿ ಹೊಡೆಸುವನಂತೆ
ಅಮಾಯಕರು ಸಾಯುವದ ಕಂಡು ಗಹಗಹಿಸಿ ನಗುವನಂತೆ
ಎಷ್ಟು ದಿವಸ ನಕ್ಕಿಯಾನು ನೀವೇ ಹೇಳಿ ನಾಳೆ ಸಾವು ನನಗಾಗೇ ಕಾದಿದೆ ಎಂಬುದ ಮರೆತು
ಅಮೆರಿಕೆಯ ಜನ ಏನು ಭಾರತೀಯರೇ ಎಲ್ಲವನ್ನೂ ಸಹಿಸಿಕೊಳ್ಳಲು/ಮರೆತುಹೋಗಲು
ಹತ್ತು ನೂರಾಗಲಿ ನೋವ ಮರೆಯಲಾದೀತೇ?
ಆತ್ಮೀಯರ ಶವ ಜೀವಂತಿಗೆಯಿಂದ ನಡೆಯುವುದೇ?
ಶಾಂತಿ ಶಾಂತಿ ಎಂದರೆ ನೆಮ್ಮದಿ ಸಿಗುವುದೇ?
ಉತ್ತರಿಸುವರು ಯಾರು? ಅಫಜಲ್ ಗುರುವೋ? ಇಲ್ಲ ಕಸಬನೋ? ನಾ ತಿಳಿಯೆ
ತತ್ವಕ್ಕೆ ಅಂಟಿಕೊಂಡವರ ನಡೆ ಮೆಚ್ಚಲೇಬೇಕು ಅದನ್ನು ದ್ವೇಷ ಎನ್ನಲಾದೀತೆ?
ಅಧಿಕಾರಕ್ಕೆ ಅಂಟಿಕೊಂಡವರು ನಮ್ಮಲ್ಲಿ ಬಹಳ ಯಾವ ಸೇಡೂ ಇಲ್ಲ ,ಬರೀ ಒಗ್ಗರಣೆ ಮಾತ್ರ
ನಡೆಯನ್ನು ಸಮರ್ಥಿಸಿಕೊಳ್ಳಲೂ ನಮ್ಮವರಿಗೆ ನಾಲಿಗೆ ಕಡಿಯುತ್ತಿದೆ, ಕೇಳಿಸಿದ್ದು ಬರೀ ಕೆಮ್ಮು ಮಾತ್ರ
ಒಸಾಮ ಸತ್ತ
ಜವಾಹಿರಿ ಬಂದ
ಅಮೆರಿಯಲ್ಲಿ ಬಾರೀ ಹಬ್ಬ ಆಚರಣೆ
ನಮ್ಮ ಮುತಾಲಿಕ ಬಾಯಿಬಡಿದುಕೊಂಡ ಪ್ರೀಡಂ ಪಾರ್ಕಿನಲ್ಲಿ
ನಮ್ಮ ಕುಮಾರ ಬಾಯಿಮುಚ್ಚಿಕೊಂಡ ಓಟುಬ್ಯಾಂಕಿಗಾಗಿ.

ವಿಫಲ

ಏಕೆ ನೆನಪಾಗುವೆ ನೀನು?
ಮನವ ಕಲಕಿ
ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು
ಏಕೆ ನೆನಪಾಗುವೆ ನೀನು?\\

ಎಂದೋ ಆದ ಸ್ನೇಹದ ಕುರುಹಾಗಿ
ಮನದ ತುಂಬೆಲ್ಲಾ ನಿನ್ನದೇ ಸವಿಗನಸ ಕಂಡು
ಆ ಕುರುಹೇ ಇಂದು ಹೃದಯದಿ ಮಾಗದ ಗಾಯವಾಗಿಸಿದೆ
ಮತ್ತೆ ಮತ್ತೆ ನೆನಪಾಗಿ ಕತ್ತು ಹಿಸುಕುತಿದೆ ಯಾಕೋ?\\

ನಾನೆಂದೂ ಬಯಸಲಿಲ್ಲ ನಿನ್ನ ನೆನಪಾಗಲೆಂದು
ಆದರೂ ನೀನೇಕೆ ನನ್ನ ನೆನೆಯುವೆ ನಾ ಕಾಣೆ?
ಕಣ್ಣು ಮುಚ್ಚುವುದು ಬೇಡವೆನಿಸಿದೆ
ಈ ಜೀವನ ಸಾಕು ಸಾಕಾಗಿದೆ ಏಕೋ ಕಾಣೆ?\\

ನೀನೇ ಕಾರಣ ಎಲ್ಲಕೂ
ನಾನೇ ಅನುಭವಿಸುತಿಹೆ ಎಲ್ಲವೂ
ನೀನು ದೂರ ಎಲ್ಲೋ ಇದ್ದು
ನನ್ನ ನೋಡಿ ಗಹಗಹಿಸುತಿರುವೆ ನನ್ನ ವ್ಯಥೆಯ ಕಂಡು\\

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...