Sunday, November 24, 2019

ಮಲ್ಲಿಗೆ

ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ
ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ
ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ
ಯಾರು ಕಾರಣರು ಇದಕ್ಕೆಲ್ಲಾ?

ಹುಣ್ಣಿಮೆಯ ರಾತ್ರಿಯಲ್ಲಿ
ಸೌಂದರ್ಯವೇ ತಾನಾಗಿ ನಗುತಿಹುದು
ಮಲ್ಲಿಗೆಯ ಪರಿಮಳ ಗಾಳಿಯಲ್ಲಿ
ತೇಲಿ ಬಂದು ವಿರಹ ಉದಯಿಸಿಹುದು

ಯಾರ ಹೃದಯ ವೇದನೆಗೆ
ನೆಮ್ಮದಿಯ ದಾರಿಯಾಗಿ ಬಂದಿಹುದೋ
ಯಾರ ವಿರಹ ವೇದನೆಗೆ
ತಂಪೆರೆಯಲು ಸ್ವರ್ಗದಿಂದಿಳಿದಿಹುದೋ?

ಏಕೆ ನಗುತಿಹೆ ಮಲ್ಲಿಗೆ ಹೂವೇ ?
ಏಕೆ ಸುಗಂಧವ ಪಸರಿಸಿ ನಿಂತಿರುವೇ ?
ಯಾರ ಸ್ಪರ್ಶದ ಸುಖವೋ ನೀನು
ಶಾಂತಿ ನೆಮ್ಮದಿಯ ಅರಸಿಯೇ ನೀನು ।।

Wednesday, November 20, 2019

ಮುರಳಿ ಮನೋಹರ

ನೀನೇ ಸುಂದರ, ಅತಿ ಸುಂದರ, ಮನೋಹರ
ಸಾಟಿಯಾರಿಹರು ನಿನ್ನಯ ಈ ಸುಂದರ ತೋಟದಲ್ಲಿ
ರಾತ್ರಿ-ಹಗಲು ಯಾವ ಕಾಲದಲ್ಲಾದರೂ ಸರಿಯೇ!
ನನ್ನೊಳ ಹೃದಯಾಂತರಾಳದಲ್ಲಿ ನೀನೇ ನೆಲೆಸಿರುವೆ
ನೀನಿಲ್ಲದೆ ಈ ಕಂಗಳಿಗೆ ಬೆಳಕೆಲ್ಲಿ?
ಪ್ರತಿಯೊಂದೂ ಭ್ರಮೆಯೋ!ಎಲ್ಲವೂ ಬಂಜರೇ .....
ನನ್ನ ಸುತ್ತಲೂ, ನನ್ನೊಳಗೆ ಹಾಗೂ ಹೊರಗೇ ....
ನಿನ್ನ ಮುರಳಿಯ ಮಧುರಗಾನ ನವಿರೇಳಿಸುವುದು
ನಾನೋ ನೋವುಗಳ ಬದುಕಿನಲ್ಲಿ ಮುಳುಗಿರುವವನು
ಓ ದೇವನೇ! ಓ ಮನ ಮೋಹನನೇ!ಸುಂದರಾಂಗನೆ!
ಜೀವನದಲ್ಲೊಮ್ಮೆ ನಿನ್ನ ಸುಂದರ ಮೊಗವನ್ನು ನೋಡಲಾರನೇ?
ಓ ಮುರಳಿ ಮನೋಹರನೇ ಒಮ್ಮೆಯಾದರೂ ......

ನನ್ನ ಗೆಳೆಯರು


ರಾತ್ರಿ ಮನೋಹರ ಹಾಗು ಸುಂದರ
ನನ್ನ ಗೆಳೆಯರ ಮೊಗದಲ್ಲಿನ ಮಂದಹಾಸದಂತೆ;

ಮಿನುಗುವ ಆ ತಾರೆಗಳೂ ಸುಂದರ
ನನ್ನ ಗೆಳೆಯರ ಮೊಗದಲ್ಲಿನ ಮಿನುಗುವ ಕಂಗಳಂತೆ ;

ಸುಂದರಾಂಗನೂ ಈ ದಿವಾಕರನು
ನನ್ನ ಗೆಳೆಯರ ಚೈತನ್ಯದ ಆತ್ಮಗಳಂತೆ ;

ಪ್ರೇರಣೆ:”My People” by Langston Hughes

ಸೌಂದರ್ಯ

ಸೌಂದರ್ಯ ಸಂತೋಷದ ಒಸಗೆ
ಕ್ಷಣಗಳು ಜಾರುವುದೇ ವಿನಃ
ಬೇಸರವ ತರದು , ಶೂನ್ಯತೆಯ ಕಾಡದು;
ಮೌನವು ಅವರಿಸಿದರೂ ಗಾಢತೆ ಹೆಚ್ಚುವುದು ;
ಮನವೆಂಬ ನವಿಲು ಗರಿಗೆದರಿ ನರ್ತಿಸುವುದು;
ಪ್ರಶಾಂತತೆ,ನೀರವತೆ ಮಾನವನ್ನೆಲ್ಲಾ ಆವರಿಸುವುದು;
ಕಳೆದುಹೋಗುವುದು ಸಾಮಾನ್ಯ ಸಂಗತಿಯೇ ಇಲ್ಲಿ ;
ಸೌಂದರ್ಯದ ಬಲೆಗೆ ಬೀಳದವರಾರು?
ಸೌಂದರ್ಯದ ರಸ ಸಮಯದಲ್ಲಿ ಮಿಂದವರು ಕೆಲವೇ ಕೆಲವರು....

Tuesday, November 19, 2019

ಮತ್ತೊಮ್ಮೆ

ಓ ಕಾಲವೇ!, ಓ ದೇವರೇ!,ಓ ಜೀವನವೇ
ಯಾವುದು ನನ್ನ ಕೊನೆಯ ಮೆಟ್ಟಿಲು?
ನಿಂತಲ್ಲೇ ಕುಸಿಯುತಿಹೆನು ಗಹಗಹಸಿದ ಸ್ಥಳದಲ್ಲೇ
ಮತ್ತೇ ಆ ಸುಂದರಕ್ಷಣ ಮನದಲ್ಲಿ ಬಾರದೇ!
ಮತ್ತೊಮ್ಮೆ ,ಮತ್ತೊಮ್ಮೆ ಬಾರದೇ ,ಹೇ ವಿಧಿಯೇ ;

ರಾತ್ರಿ,ಹಗಲು,ಮಳೆ,ಗಾಳಿ
ಸಂತಸ ಕಳೆದುಹೋದ ಸಂಪತ್ತು;
ಕಾಲ ನಿಲ್ಲದೆ ತಿರುಗುತ್ತಿದೆ ,ವಸಂತ ನಗುತ್ತಿಹನು
ಕಣ್ಣರಳಿಸಿ ಬೆಳಕ ದಿಕ್ಕನ್ನೇ ನೋಡುತಿಹೆನು
ಮತ್ತೊಮ್ಮೆ ,ಮತ್ತೊಮ್ಮೆ ಬಾರದೇ ,ಹೇ ವಿಧಿಯೇ ;

ಮರೆತಕ್ಷಣ

ಸಂತಸವದುವೆ ಎಲ್ಲ ಮರೆತ ದಿನ
ನೋವು,ಕಷ್ಟ-ನಷ್ಟಗಳನೆಲ್ಲಾ ಮರೆತಕ್ಷಣ
ಪ್ರತಿಕ್ಷಣವೂ ಚಿಂತಿಸುವೆ ಮರೆಯಲೆತ್ನಿಸುವೆ
ಮನದ ಮೂಲೆಯಲ್ಲಿ ಕಸಪೊರಕೆಯಿಂದೊಟ್ಟುಮಾಡಿ ಸುಡುವೆ ;

ಬಿಸಿಲೋ! ಚಳಿಯೋ! ಮಳೆಯೋ!
ಯಾವ ನೆನಪೂ ಬಾರದೆನಗೆ ನಗುವೊಂದಬಿಟ್ಟು
ಮನದಲ್ಲಿ ಹೆಪ್ಪುಗಟ್ಟಿದೆ ಕೊಳೆಯನ್ನೆಲ್ಲಾ ಜಾಡಿಸಿಬಿಟ್ಟೆ
ಹಗುರವೆನಿಸಿತು ಮಗುವಂತಾಗಿ ನಿದ್ದೆ ಹತ್ತಿತೆನಗೆ;

Monday, November 18, 2019

ಹೃದಯ ತುಂಬಿ ಬಂದಿದೆ

ಹೃದಯ ತುಂಬಿ ಬಂದಿದೆ
ಆಕಾಶದಲ್ಲಿ ಮಳೆಬಿಲ್ಲು ಮೂಡಿದಂತೆ;
ಹೊಸ ಚಿಗುರೊಡೆದಾಗ ಏನೋ ಹರುಷ
ನಮ್ಮ ನಾವು ಅರಿತಾಗಲೂ ಅದೇನೋ ಸುಖ;
ಮುದಿತನದಲ್ಲೂ ಜೀವನಪ್ರೀತಿ ಇರೆ ಅದೇ ಸಾರ್ಥಕವು
ಸಾವಿನಲ್ಲೂ ಇರಲಿ ಸಂಯಮ;
ಮುಗ್ಧತೆ ಮನುಷ್ಯನ ತಂದೆ;
ಹಾತೊರೆಯುತ್ತಿದ್ದೇನೆ ಅದ ಸವಿಯಲು
ಬೆಸೆದುಕೊಳ್ಳ ಬಯಸಿದೆ ಪ್ರಕೃತಿಯ ತೆಕ್ಕೆಯಲಿ;
ಹೃದಯ ತುಂಬಿ ಬಂದಿದೆ
ಇಳೆಯ ಬಾಯಾರಿಕೆಗೆ ಮಳೆ ಬಂದಂತೆ;
ಹೃದಯ ತುಂಬಿದೆ ಹೊನ್ನ ಚಂದಿರನ ಬೆಳಕಂತೆ
ರಸನಿಮಿಷ ಜಾರಿದೆ ಕಾಲ ತೆವಳುತ್ತಾ ಹೊರಳಿದಂತೆ;

Saturday, November 16, 2019

ನಾನೇ ಅವನು

ನಾನು ಯಾರು?
ಮನಸ್ಸಲ್ಲ ನಾನು!
ಬುದ್ಧಿಯಲ್ಲ ನಾನು!
ಅಹಂ,ಅನುಭವವಲ್ಲ ನಾನು!
ನಾನು ಅವನು!
ನಾನು ಅವನೇ!
ಅವನಿಂದ ವರವ ಪಡೆದವನು, ನಾನೇ ಅವನು!
ಸಾವಿಲ್ಲದವನು!
ಬದುಕದವನು!
ಜಾತಿ,ಕುಲಗಳಿಲ್ಲದವನು ನಾನು!
ತಂದೆ-ತಾಯಿ,ಬಂಧು-ಬಳಗ ಯಾರಿಲ್ಲದವನು ನಾನು!

ನಾನು ಅವನು!
ಅವನಿಂದ ವರವ ಪಡೆದವನು, ನಾನೇ ಅವನು!
ಭ್ರಮೆಯ ಆವರಣ ದಾಟಿ,ಆಕಾರವಿಲ್ಲದವನು ನಾನು!
ಸಂಬಂಧಗಳಿಗೆ ಭಯಾಪದದವನು!
ನಾನು ಮುಕ್ತನಾದವನು,ನಾನು ಮುಕ್ತನು!
ನಾನು ಅವನೇ!
ಅವನಿಂದ ವರವ ಪಡೆದವನು, ನಾನೇ ಅವನು!

ನಾನು ಯಾರು?

ನಾನು ಯಾರೂ ಅಲ್ಲ! ನಾನು ಯಾರು?
ನೀನು ಕೂಡ ಯಾರೋ?
ಈ ಗೊಂದಲ ಎಲ್ಲೆಡೆಯೂ ಇದೆ , ಎಲ್ಲರಲ್ಲಿಯೂ ಇದೆ!
ಆದರೂ ಎಲ್ಲರಿಗು ಎದೆಗಾರಿಕೆ, ಅಹಂ ಬಹಳವಿದೆ||

ಯಾರೂ ಪ್ರಶ್ನಿಸಿಕೊಳ್ಳುವುದಿಲ್ಲ!
ಬೇರೆಯವರನ್ನು ಪ್ರಶ್ನಿಸುವುದಿಲ್ಲ!
ಇಲ್ಲಿ ಎಲ್ಲರೂ ಪರಿಚಿತರೋ? ಅಪರಿಚಿತರೋ?
ಯಾರ ಮನದಲ್ಲೂ ಪ್ರಶ್ನೆ ಬರುವುದೇ ಇಲ್ಲ।।

ಇವೆಲ್ಲವೂ ಎಲ್ಲರಿಗೂ ಗೊತ್ತು!
ಯಾರು,ಯಾರನ್ನೂ ಪ್ರಶ್ನಿಸುವುದಿಲ್ಲ
ಆದರೆ ನಾನೇಕೆ ಪ್ರಶ್ನಿಸುತ್ತಿದೇನೆ
ನಾನು ಯಾರು? ನಾನು ಯಾರು?

Monday, November 11, 2019

ಸಣ್ಣ ದೀಪ

ಹುಡುಕು ನಿನ್ನೊಳಗೆ
ಕತ್ತಲಿಹುದು ಅದರೊಳಗೆ
ಅಪಾರ ಶಕ್ತಿ ಅಡಗಿಹುದು ಕಾಣದೆ
ಮರೆತಿರುವೆ ನಿನ್ನೊಳ ಅನಂತ ಚೈತನ್ಯ
ಕಣ್ಣು ಮುಚ್ಚು ಪ್ರಯತ್ನಿಸು ಒಳಗಣ್ಣ ತೆರೆಯಲು
ಕತ್ತಲಿಹುದೆಂದು ಎದೆಗುಂದಬೇಡ
ಪ್ರಯತ್ನಿಸು,ಪ್ರಯತ್ನಿಸು ನಿನ್ನದೇ ಇಂದಲ್ಲ ನಾಳೆ
ಗುಡಿಯೊಳು ಸಣ್ಣ ದೀಪ ಹತ್ತಿಸು ಇಂದೇ...

ಸಂತಸ ಬಡು

ಸದಾ ಸಂತಸದ ಹೊನಲು ಧರೆಗಿಳಿಯಲಿ
ಹೋರಾಟ,ಹಾರಾಟ.... ನಕಾರಾತ್ಮಕತೆ ಪಾತಾಳಕ್ಕಿಳಿಯಲಿ
ಅನುಭವಿಸು ಸುಖದ ಅನುರಣವ ಎಲ್ಲೇ ಮೀರದೆ
ಬೆನ್ನು ತಟ್ಟಿಕೊ ನಿನ್ನ ನೀನೇ ....
ಮುನ್ನುಗ್ಗು,ಹಾನಿಮಾಡದಿರು ,ಪರರ ಸಂತಸವ
ನಿಯಂತ್ರಿಸಿಕೊ,ಸಹಿಸಿಕೋ .....
ಇಲ್ಲಿ ಶಾಶ್ವತವಾದುದು ಯಾವುದೂ ಇಲ್ಲ ತಿಳಿ
ಕಾಲ ನಗುವುದು ನಿನ್ನ ತೀರಕೆ ಎಳೆದೊಯ್ಯುವುದು
ನೀನು ಕೈಗೊಂಬೆ ತಿಳಿ
ಸಮಯದ ಪಾತ್ರೆ ಕರಗುತಿಹುದು ಎಚ್ಛೆತ್ತುಕೊ...
ಸಂತಸ ಬಡು ಅನುದಿನ .....

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...