Sunday, July 19, 2020

ಕರುಣಾ ಸಾಗರ

 ಎಲ್ಲ ನೀನು ಬಲ್ಲೆ ಎಂದು ನನಗೆ ತಿಳಿದಿದೆ
ಎಲ್ಲ ಬಲ್ಲ ನೀನು ಸುಮ್ಮನೆ ನಸುನಗುತಿರುವೆ
ಮನದ ತೊಳಲಾಟ ಹೃದಯಭಾರ ತುಂಬಿದೆ ತಲ್ಲಣ
ಆಸರೆಯ ಬಯಸಿ ಕೈಚಾಚಿ ನಿಂತಿರುವೆ ಬರಲಾರೆಯಾ ತಕ್ಷಣ।।

ಲೋಕವೇ ನಿನ್ನದು , ನೀನು ಅನಂತಶಕ್ತಿಯ ಆಗರ
ತೃಣಮಾತ್ರವು ನಾನು , ಬೇಡುವೆ ನಿನ್ನ ಕರುಣಾ ಸಾಗರ
ನಿನ್ನ ಮಾಯೆಯಾಟ ಬಲ್ಲವರು ಯಾರು?
ನೀನು ಆಡಿಸಿದಂತೆ ನಾವಾಡುವೆವು ನೀ ಸೂತ್ರದಾರ||

ಎಲ್ಲವ ಬಿಟ್ಟು ವೈರಾಗ್ಯವ ತಬ್ಬಲೇ ? ಗುರುವೇ!
ಮನದಲ್ಲಿ ನೂರು ಆಸೆಗಳ ಹುಟ್ಟಿಸಿ ನೀ ನಗುವೇ!
ಬಿಟ್ಟು ಹೋಗೆಂದು ಸವಾಲೆಸೆಯುವೆ ಮೋಹದಲ್ಲಿ ಬಂಧಿಸಿ
ಭವಬಂಧನಗಳಿಗೆ ಬಲಿಯಾಗಿ ತೊಳಲಾಡುವೆ ನಾ ಅನುಭವಿಸಿ|| 

No comments:

Post a Comment

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...