Tuesday, July 14, 2020

ದಾರಿದೀಪ

ನಿನ್ನ ಮನದೊಳಾಡುವ
ಭಾವದಲೆಗಳು ಕಾಣಲಿಲ್ಲ।
ಮೌನದೊಳಗಣ ಶಬ್ದತರಂಗಗಳು
ಇನಿತು ಕಿವಿಗಳಿಗೆ ಕೇಳಲಿಲ್ಲ।।

ನಿನ್ನ ಭಾವವೇನೋ?
ನಾ ಅರಿಯಲಾರೆನು!।
ಏನೋ ಆಗುತಿಹುದು ಹೃದಯದಲ್ಲಿ
ಅದನ್ನು ಮಾತ್ರ ಅರಿಯಬಲ್ಲೆನು!।।

ನೀನಿಲ್ಲದೆ ನಾನೇನು ಅಲ್ಲ
ನಿಂತಿಹೆನು ಮುಂದೆ ಸಾಕ್ಷಿಯಾಗಿ।
ನೀನಿತ್ತ ಅಭಯದಿಂದಲೇ
ಹೆಜ್ಜೆಯಿಡುತಿಹೆನು ಶಕ್ತಿಯಾಗಿ।।

ನಿನ್ನ ಮಧುರ ಮಾತುಗಳೆ 
ನನ್ನ ದಾರಿಯ ದೀವಿಗೆಗೆಗಳು।
ಸಂಶಯವಿಲ್ಲ ಸನಿಹದಲ್ಲೇ
ತೆವಳುತಿಹುದು ನೀನು ಕಂಡ ಕನಸುಗಳು।। 

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...