ಮತ್ತೆ ಅದೇ ತವಕ, ಬೇಸರದ ಕಾತರ
ಮೊದಲು ನೋಡಬೇಕೆಂಬ ತೀವ್ರ ಹಂಬಲ ;
ಕಿಟಕಿಯ ಬಳಿ ಓಡಿ ಬಂದೆ, ಕಾತರದ ಕಂಗಳೊಂದಿಗೆ;
ಮನದಲ್ಲೇನೋ ಕಳವಳ ದೂರದೂರ ದಿಟ್ಟಿಸುತ್ತಿದ್ದೇನೆ
ಕಾಣಿಸಲಿಲ್ಲ ಮನದಲಿ ನೆಲೆಸಿಹ ಆ ಸುಂದರ ಬಿಂಬ;
ಬೆಳ್ಳಿ ಬೆಳಕಿನ ಮಂಜಿನ ತೆರೆ ಎಳೆಯುತಿದೆ ಪ್ರಕೃತಿ;
ದೇವಶಿಲ್ಪದ ದರುಶನವಿಲ್ಲವಾಯಿತೆನಗಿಂದು;
ಮನವು ಬಾಡಿದೆ,ಬೇಗುದಿಯಲಿ ನರಳಿದೆ ಮನ;
ಧ್ಯಾನಮೂರ್ತಿಯ ಗೋಚರತೆ ಇಂದೆನಗೆ ಕನಸಾಗಿದೆ;
ಹಬ್ಬುತಲಿರುವ ತಿಮಿರದ ಆವೇಗಕೆ ಸಂಜೆಯ ದೀಪ ಆರಿತು;
ಮನದೊಳು ದುಃಖ ಉಮ್ಮಳಿಸಿತು ಕಾಣದೆ ದೇವಶಿಲೆಯ;
ಹಂಬಲದ,ಕಾತರದ,ದರುಶನವಿಲ್ಲವಾಯಿತೆನೆಗಿಂದು.....
ನಾಳೇ ..ಏನೋ? ತಿಳಿದವರಾರು! ಮತ್ತೆ ಅದೇ ತವಕ।।
Sunday, June 7, 2020
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment