ಮತ್ತೆ ಅದೇ ತವಕ, ಬೇಸರದ ಕಾತರ
ಮೊದಲು ನೋಡಬೇಕೆಂಬ ತೀವ್ರ ಹಂಬಲ ;
ಕಿಟಕಿಯ ಬಳಿ ಓಡಿ ಬಂದೆ, ಕಾತರದ ಕಂಗಳೊಂದಿಗೆ;
ಮನದಲ್ಲೇನೋ ಕಳವಳ ದೂರದೂರ ದಿಟ್ಟಿಸುತ್ತಿದ್ದೇನೆ
ಕಾಣಿಸಲಿಲ್ಲ ಮನದಲಿ ನೆಲೆಸಿಹ ಆ ಸುಂದರ ಬಿಂಬ;
ಬೆಳ್ಳಿ ಬೆಳಕಿನ ಮಂಜಿನ ತೆರೆ ಎಳೆಯುತಿದೆ ಪ್ರಕೃತಿ;
ದೇವಶಿಲ್ಪದ ದರುಶನವಿಲ್ಲವಾಯಿತೆನಗಿಂದು;
ಮನವು ಬಾಡಿದೆ,ಬೇಗುದಿಯಲಿ ನರಳಿದೆ ಮನ;
ಧ್ಯಾನಮೂರ್ತಿಯ ಗೋಚರತೆ ಇಂದೆನಗೆ ಕನಸಾಗಿದೆ;
ಹಬ್ಬುತಲಿರುವ ತಿಮಿರದ ಆವೇಗಕೆ ಸಂಜೆಯ ದೀಪ ಆರಿತು;
ಮನದೊಳು ದುಃಖ ಉಮ್ಮಳಿಸಿತು ಕಾಣದೆ ದೇವಶಿಲೆಯ;
ಹಂಬಲದ,ಕಾತರದ,ದರುಶನವಿಲ್ಲವಾಯಿತೆನೆಗಿಂದು.....
ನಾಳೇ ..ಏನೋ? ತಿಳಿದವರಾರು! ಮತ್ತೆ ಅದೇ ತವಕ।।
Sunday, June 7, 2020
Subscribe to:
Post Comments (Atom)
ಮೌನ ನೃತ್ಯ
ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment