ತವಕವಿದೆ ನಯನದಲಿ,
ತವಕವಿದೆ ಕಿವಿಗಳಿಗೆ,
ಒಳಗು ಇರುವ ಹೊರಗೂ ಇರುವ
'ಶಕ್ತಿ' ಎಂಬೆಳಕಿನ ದರುಶನಕೆ;
ಮನದೊಳೇನನು ಚಿಂತಿಸಿಹೆನೋ!
ಅದೇ ಅದು!, ಅದೇ ಅದು!
ಜ್ಯೋತಿಗೆ ತಾನ್ ಮಹಾಜ್ಯೋತಿ
ಅಗ್ನಿಗೆ ತಾನ್ ಮಹಾಗ್ನಿ
ಸೂರ್ಯಂಗೆ ತಾನ್ ಮಹಾಸೂರ್ಯನೇ ಆಗಿ
ಅವತರಿಸಿರುವ ಶಕ್ತಿಯೇ ಅದು
ಈ ಜಗದ ಆದಿಶಕ್ತಿಯೇ ಅದು
ಈ ಜಗದ ಸೃಷ್ಟಿಯ ಮೂಲವೇ ಅದು।।
Sunday, June 7, 2020
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment