Saturday, September 26, 2015

ವೀರರು ಧೀರತೆಯ ಯೋಧರು

ಅವರೆ ಅವರೆ ವೀರರು
ಧೀರತೆಯ ಯೋಧರು
ಭಾರತ ಮಾತೆಯ ರಕ್ಷಣೆಗಾಗಿ
ಜೀವನವನೆ ಮುಡಿಪಾಗಿಟ್ಟವರು//
ನೀವೇ ಮಾರ್ಗದರ್ಶಕರು
ನೀವೇ ದೇಶ ರಕ್ಷಕರು
ನೀವೇ ಶತೃನಾಶಕರು//
ಯಾವಾಗಲೂ ಸಾಹಸಿಯೇ ಆಗಿರು
ವೀರತೆಯೇ ನೀನಾಗಿರು
ಭಾರತ ಸಂಸ್ಕೃತಿಯೇ ನೀನಾಗಿರು//
ಹೆಜ್ಜೆ ಹೆಜ್ಜೆ ಸಾಗಲಿ
ಮನಸ್ಸು ಮನಸ್ಸು ಸೇರಲಿ
ಭಾರತ ಮಾತೆಯ ಗೌರವ
ಕಾಪಿಡಲು ಸರ್ವದಾ ಶ್ರಮವಿರಲಿ//

ಕವಿತೆ

ನಾನೊಂದು ಕವಿತೆ
ಅರ್ಥವಾಗದ ಕವಿತೆ
ಯಾರೂ ಓದದ ಕವಿತೆ
ಭಾವನೆಗಳೊಡನೆ ತೊಳಲಾಡುವ ಕವಿತೆ
ಇಂದು ಇದ್ದು, ನಾಳೆ ಇಲ್ಲವಾಗುವ ಕವಿತೆ
ಮನದ ಮೂಲೆಯಲ್ಲೋ ಕುಳಿತೆ
ಮನದ ಕತ್ತಲಲ್ಲಿ ಅವಿತೆ
ನಾ ಕವಿತೆ,ನಾ ಕವಿತೆ
ಅರ್ಥವಾಗದ ಕವಿತೆ

Wednesday, September 23, 2015

ಸತ್ಯ ..

ಹೇಳಬಯಸುವೆನೊ೦ದು ಸತ್ಯ
ಎದೆಯ ಗುಡಿಯೊಳಗೆ ರಿ೦ಗಣಿಸುವ
ಆ ಮುರಳಿಯ ನಾದವ ಆಲಿಸಿಹೆಯಾ?
ಅದೇ ನಿಜವಾದ ಸತ್ಯದ ನುಡಿಯು
ನಿನ್ನೊಳಗುಡಿಯ ಗ೦ಟೆಯ ಸದೇ್ದ ಅದು
ಎಲ್ಲರೊಳು ರಿ೦ಗಣಿಸುವುದದು
ಕೆಲವೇ ಕೆಲವರಿಗೆ ಕೇಳುವ,
ಕೇಳಿಸಿಕೊಳ್ಳುವ ಮುರಳಿಯ ನಾದವದು..

Friday, September 18, 2015

ನೋವೇ ನೀ ಬಂದೆ ಏಕೆ?

ನೋವೇ ನೀ ಬಂದೆ ಏಕೆ?
ನನ್ನೆದೆಯ ಬಗೆದು ನಿಂದೆ ಏಕೆ?
ಯಾವ ತಪ್ಪಿಗೆ ಈ ನೋವು ನೀ ಹೇಳು
ನನ್ನದಲ್ಲದ ತಪ್ಪಿಗೆ ನೀ ಬಂದೆ ಏಕೆ?
ಯಾವ ಜನ್ಮದ ಯಾತನೆಯೋ ನಾನರಿಯೆ
ಮನವ ಅರಿಯದ ಮನಸುಗಳು ಸಂಚು
ತಲುಪಿದೆ ನೆಮ್ಮದಿ ಕೊನೆಯ ಅಂಚು
ಮೌನವೂ ನರಳುತಿದೆ 
ಮನವೂ ನರಳುತಿದೆ//

ವಿನಾಯಕ ಸಿದ್ಧಿವಿನಾಯಕ ಪಾಹಿಮಾಂ

ವಿನಾಯಕ
ಸಿದ್ಧಿವಿನಾಯಕ ಪಾಹಿಮಾಂ//
ಗಣಪತಿ
ಗಜಾನನ ಪಾಹಿಮಾಂ//
ಆದಿಪೂಜಿತ
ವಿದ್ಯಾಪ್ರದಾಯಕ ಪಾಹಿಮಾಂ//
ಜೇಷ್ಟರಾಜ
ಗಣರಾಜ ಪಾಹಿಮಾಂ//
ಮೋಧಕ ಪ್ರಿಯ
ಮೂಷಕವಾಹನ ಪಾಹಿಮಾಂ//
ವಿಘ್ನಹಾರಕ
ಸಿದ್ಧಿಪ್ರದಾಯಕ ಪಾಹಿಮಾಂ//
ವಂದೇ ಗೌರೀತನಯಂ
ಪಾಹಿಮಾಂ ಹರಸುತ ಪಾಹಿಮಾಂ//

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...