Sunday, May 10, 2015

ತಡೆಗೋಡೆ

ಮುಕ್ತ ಅವಕಾಶಗಳ ಹೆದ್ದಾರಿಯಲ್ಲಿ
ಈ ತಡೆಗೋಡೆ ಏಕೆ?
ಹೆದರಿಕೆಯೇ?ಸ್ವಾರ್ಥವೇ?
ಅಥವಾ ವೃತ್ತಿದ್ವೇಷವೋ?
ಮುಂದೆ ದಾರಿ ತೋರದ ಹಿರಿಯರು
ಕಾಲೆಳೆದು ಹಿರಿಹಿರಿ ಹಿಗ್ಗುವರೇ?
ಪಿರಿತನಕೆ ಗೌರವ,ಹಿರಿಮೆ-ಗರಿಮೆಗಳಿಗೆ
ಇವರ ನಡೆ ಅಪಚಾರವೆಸಗಿದಂತೆ ಸರಿ
ಇತಿಹಾಸ ಇವರ ಕ್ಷಮಿಸದು
ಎಂದೂ ಕ್ಷಮಿಸದು
ಧಿಕ್ಕಾರವಿರಲಿ ಅವರಿಗೆ
ಧಿಕ್ಕಾರವಿರಲಿ ಅವರಿಗೆ....

No comments:

Post a Comment

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...