Sunday, May 10, 2015

ತಡೆಗೋಡೆ

ಮುಕ್ತ ಅವಕಾಶಗಳ ಹೆದ್ದಾರಿಯಲ್ಲಿ
ಈ ತಡೆಗೋಡೆ ಏಕೆ?
ಹೆದರಿಕೆಯೇ?ಸ್ವಾರ್ಥವೇ?
ಅಥವಾ ವೃತ್ತಿದ್ವೇಷವೋ?
ಮುಂದೆ ದಾರಿ ತೋರದ ಹಿರಿಯರು
ಕಾಲೆಳೆದು ಹಿರಿಹಿರಿ ಹಿಗ್ಗುವರೇ?
ಪಿರಿತನಕೆ ಗೌರವ,ಹಿರಿಮೆ-ಗರಿಮೆಗಳಿಗೆ
ಇವರ ನಡೆ ಅಪಚಾರವೆಸಗಿದಂತೆ ಸರಿ
ಇತಿಹಾಸ ಇವರ ಕ್ಷಮಿಸದು
ಎಂದೂ ಕ್ಷಮಿಸದು
ಧಿಕ್ಕಾರವಿರಲಿ ಅವರಿಗೆ
ಧಿಕ್ಕಾರವಿರಲಿ ಅವರಿಗೆ....

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...