Thursday, July 31, 2014

ಬಿಡುಗಡೆ

ಇದು ಕನಸೋ?
ಇಲ್ಲ ವಾಸ್ತವವೋ?
ಒಂದೂ ತಿಳಿಯದಾಗಿದೆ
ಎಚ್ಚರವಾಯಿತು
ಯಾವಾಗ ನಿದ್ದೆಗೆ ಜಾರಿದೆನೋ?

ಬಹು ಮಂದಿ ಉಪನ್ಯಾಸಕರ ಮಾತಿನ ಮೋಡಿಗೆ ಬಿದ್ದೆ
ಮನದ ಆಲೋಚನೆಗಳೆಲ್ಲಾ ತಲಕೆಳಗಾದವು
ಆದರೂ ಉಸಿರಾಡುತ್ತಿದ್ದೇನೆ ಸಾಯದೆ
ಅರಗಿಸಿಕೊಳ್ಳಲಾಗದ ಮಾತುಗಳ ಮೆಲುಕುಹಾಕುತ್ತಾ....

ಅವರೆಲ್ಲರೂ ಹೊಡೆದ ಗುಂಡು
ಹೃದಯ ತಟ್ಟಿತೋ?
ಬುದ್ದಿಯ ತಟ್ಟಿತೋ?
ಮತ್ತೆ ಯಾರಾದರೂ ಮತ್ತೊಂದು ಗುಂಡು ಹೊಡೆಯಬಹುದೆಂದು

ಗುರಿ ಯಾವುದೋ? ಹೊಡೆದವನ ಕೈಚಳಕದ ಲೀಲೆ
ಹೃದಯ ಹರಡಿಹೆ
ಮೈಯ್ಯೊಡ್ಡಿ ನಿಂತಿಹೆ
ಯಾರ ವಶವಾಗುವೆನೋ ಮೋಹವಿಲ್ಲದ ವಿರಾಗಿ

ಯಾವ ಬೇಟೆಗಾರನ ಬಲೆಗೆ ಬೀಳುವೆನೋ ನಾನರಿಯೆ
ನಾನೊಲ್ಲೆನೆಂದರೂ ಬಿಡುವವರಾರು?
ಬಲೆ ಬೀಸಿ ಕಾದಿಹರು ನೂರು ಮಂದಿ
ಯಾರ ವಶವೋ? ಚಿತ್ತ ಭ್ರಮೆ ಕಣ್ಣುಮುಚ್ಚಿಹೆನು ಮೂಕನಾಗಿ

ಕೊನೆಯ ಗಳಿಗೆಗೆ ಉಸಿರು ಕಟ್ಟಿಹೆ
ನನ್ನ ಯಾರಾದರೂ ಹಿಡಿದೊಯ್ಯಲಿ
ನನ್ನ ಆತ್ಮ ಸ್ವತಂತ್ರವಾಗುವುದು
ಬಿಡುಗಡೆಯ ಸುಖ ನನ್ನದಾಗುವುದು

ಕಾಲ ಬರಲಿ
ಬೇಗ ಬರಲಿ
ಆತ್ಮ ಬಿಡುಗಡೆಯಾಗಲಿ....

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...